ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿಶುಭಾರಂಭ

ಶುಚಿ-ರುಚಿಯಾದ ಊಟೋಪಚಾರಗಳಿಗೆ ಹೆಸರುವಾಸಿಯಾದ ಶ್ರೀದೇವಿ ಹೋಟೆಲ್ ಬೆಳ್ತಂಗಡಿಯಲ್ಲಿ ಶುಭಾರಂಭ

ಬೆಳ್ತಂಗಡಿ: ಬೆಳ್ತಂಗಡಿ ಮುಖ್ಯರಸ್ತೆ ಮುಳಿಯ ಜ್ಯುವೆಲ್ಲರ್ಸ್ ಬಳಿ ಶ್ರೀಮತಿ ಸುಚಿತ್ರಾ ಮತ್ತು ಗೋಪಾಲ್ ಮಾಲಕತ್ವದ ಶುಚಿ ರುಚಿಯಾದ ಊಟೋಪಚಾರಗಳಿಗೆ ಹೆಸರುವಾಸಿಯಾದ ಹೋಟೆಲ್ ಶ್ರೀದೇವಿ ಶುದ್ಧ ಸಸ್ಯಾಹಾರಿ ಇದರ ಶುಭಾರಂಭವು ಆ.22 ರಂದು ನಡೆಯಿತು.

ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ ‘ಪ್ರಜ್ವಲ್’ ದೀಪ ಬೆಳಗಿಸಿ ನೂತನ ಹೋಟೇಲನ್ನು ಉದ್ಘಾಟಿಸಿ ಬರುವ ಗ್ರಾಹಕರಿಗೆ ನಗು ಮೊಗದ ಸೇವೆ ನೀಡಿದಾಗ ಸಂಸ್ಥೆಯು ಪ್ರಗತಿ ಹೊಂದುತ್ತದೆ.ದೈವ ದೇವರ ಅನುಗ್ರಹದಿಂದ ಹೋಟೇಲ್ ನಲ್ಲಿ ಒಳ್ಳೆಯ ವ್ಯಾಪಾರ ವಹಿವಾಟು ನಡೆಯಲಿ ಎಂದರು.

ಈ ಸಂದರ್ಭದಲ್ಲಿ ಮಯೂರ ಟೆಕ್ಸ್ಟ್ ಟೈಲ್ಸ್ ಮಾಲಕ ಪದ್ಮನಾಭ, ಉದ್ಯಮಿ ಸುಧೀರ್, ಸುದ್ದಿ ಉದಯ ವಾರಪತ್ರಿಕೆಯ ಬಿ.ಎಸ್ ಕುಲಾಲ್, ಸಂತೋಷ್ ಪಿ ಕೋಟ್ಯಾನ್, ತುಕರಾಮ್ ಬಿ, ತಿಮ್ಮಪ್ಪ ಗೌಡ, ಸುಧೀತ್, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಮುಖ್ ನವೀನ್ ನೆರಿಯ, ಬ್ಯಾಂಕ್ ಉದ್ಯೋಗಿಯಾದ ವಿನಯ್ ಶೆಟ್ಟಿ, ರೇಖಾ ಸುಧೀರ್, ಜತ್ತಪ್ಪ ಸುವರ್ಣ-ನಾರಾಯಿಣಿ ಧರ್ಮಸ್ಥಳ, ಡೀಕಯ್ಯ ಪೂಜಾರಿ-ಪ್ರೇಮ ಕೊಯ್ಯೂರು, ಹರೀಶ್, ಮೋಹನ್ ಹಾಗೂ ಬಂಧು ಬಳಗದವರು ಉಪಸ್ಥಿತರಿದ್ದು ಶುಭ ಕೋರಿದರು.

ಸಂಸ್ಥೆಯ ಮಾಲಕರಾದ ಗೋಪಾಲ್ ಪೂಜಾರಿ-ಶ್ರೀಮತಿ ಸುಚಿತ್ರಾ, ಚಿಂತನ್, ಚಾರ್ವಿ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ, ಸತ್ಕರಿಸಿದರು.

ಹೋಟೆಲ್‌ನಲ್ಲಿ ಫ್ರೆಶ್ ಜ್ಯೂಸ್, ಚಹಾ, ಕಾಫಿ, ತಿಂಡಿ, ಚಾಟ್ಸ್, ಚೈನೀಸ್ ಐಟಂ ಹಾಗೂ ಊಟ ದೊರೆಯುತ್ತದೆ ಹಾಗೂ ವಿಶೇಷ ಕಾರ್ಯಕ್ರಮಗಳಿಗೆ ಕ್ಯಾಟರಿಂಗ್ ಸೌಲಭ್ಯವು ಕೂಡ ಲಭ್ಯವಿದೆ ಎಂದು ಮಾಲಕರು ತಿಳಿಸಿದರು.

Related posts

ಪೊಸಂದೋಡಿ ಹರಿಕೃಪಾ ಪಿ. ದುಗ್ಗಪ್ಪ ಗೌಡ ಮತ್ತು ಶ್ರೀಮತಿ ಜಾಜೀವಿಯವರ ವೈವಾಹಿಕ ಜೀವನದ ‘ ಸುವರ್ಣ ಸಂಭ್ರಮ’: ಆದಿಚುಂಚನಗಿರಿ ಶಾಖಾ ಮಠಾ ಧೀಶರಾದ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರಿಂದ ಆಶೀರ್ವಚನ

Suddi Udaya

ಎರಡು ದ್ವಿಚಕ್ರ ವಾಹನಗಳಿಗೆ ಇನೋವಾ ಕಾರು ಡಿಕ್ಕಿ: ಪ್ರಾಣಾಪಾಯದಿಂದ ಪಾರಾದ ಸವಾರರು

Suddi Udaya

ಎ.20: ಸರ್ಕಾರದ ನಡೆ ಕಾರ್ಯಕರ್ತರ ಕಡೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ: 10 ಸಾವಿರ ಕಾರ್ಯಕರ್ತರು ಭಾಗಿ

Suddi Udaya

ಬೆಳಾಲು ಶ್ರೀ ಧ.ಮಂ. ಪ್ರೌಢ ಶಾಲೆಯಲ್ಲಿ ತಾಲೂಕು ಮಟ್ಟದ ಕರಾಟೆ ಸ್ಪರ್ಧೆ

Suddi Udaya

ಬೆಳ್ತಂಗಡಿ: ಯೋಗ ಶಾಖೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಜ18-ಫೆ 01: ಬೆಳ್ತಂಗಡಿ ಹಿಂದೂ ಸಂಗಮ ಆಯೋಜನ ಸಮಿತಿಯಿಂದ ತಾಲೂಕಿನ ಏಳು ಪ್ರಮುಖ ಕೇಂದ್ರಗಳಲ್ಲಿ ಹಿಂದೂ ಸಂಗಮ‌ ಕಾರ್ಯಕ್ರಮ

Suddi Udaya
error: Content is protected !!