July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ರೋಟರಿ ಕ್ಲಬ್ ವತಿಯಿಂದ ಅಮೂಲ್ ಸಾವಯುವ ಗೊಬ್ಬರದ ಪ್ರಾತ್ಯಕ್ಷಿಕೆ

ಬೆಳ್ತಂಗಡಿ: ರೋಟರಿ ಕ್ಲಬ್ ಲೋರೆಟ್ಟೋ ಹಿಲ್ಸ್ ಹಾಗೂ ರೋಟರಿ ಕ್ಲಬ್ ಸಿದ್ಧಕಟ್ಟೆ ಇವರುಗಳ ಜಂಟಿ ಆಶಯದಲ್ಲಿ ಸಾವಯವ ಗೊಬ್ಬರದ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಾಗಾರ ಸಿದ್ದಕಟ್ಟೆಯ ಪಿಂಕಿ ಟವರ್ಸ್ ನಲ್ಲಿ ಆ.28 ರಂದು ನಡೆಯಿತು .


ಅಮುಲ್ ಕಂಪೆನಿಯ ಕರ್ನಾಟಕ ವಲಯದ ಮೇನೇಜಿಂಗ್ ಡೈರೆಕ್ಟರ್ ರಂಗರಾಜು ಮತ್ತು ಅಗ್ರೂಮೋನಿಟ್ ಪಾವನಿ ಸಾವಯುವ ಗೊಬ್ಬರದ ಮಹತ್ವ ಹಾಗೂ ಉಪಯೋಗದ ಬಗ್ಗೆ ಸಮಗ್ರ ಮಾಹಿತಿ ನೀಡುದರ ಜತೆಗೆ ತಮ್ಮ ಕಂಪೆನಿಯ ಸಾವಯುವ ಗೊಬ್ಬರಗಳ ಉತ್ಪನ್ನಗಳನ್ನು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫಲ್ಗುಣಿ ರೋಟರಿ ಕ್ಲಬ್ ನ ಅಧ್ಯಕ್ಷ ದುರ್ಗಾದಾಸ್ ರವರು ವಹಿಸಿ ಲೋರೋಟ್ಟೋ ಹಿಲ್ಸ್ ರೋಟರಿ ಕ್ಲಬ್ ನ ಅಧ್ಯಕ್ಷ ವಿಜಯ ಫೆರ್ನಾಂಡಿಸ್ ಸ್ವಾಗತಿಸಿದರು. ಅಮುಲ್ ಸಾವಯವ ಗೊಬ್ಬರದ ಜಿಲ್ಲೆಯ ಅಧಿಕೃತ ಮಾರಾಟಗಾರದ ರಾಘವೇಂದ್ರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.


ರೋ| ಗಣೇಶ್ ಶೆಟ್ಟಿ ಯವರು ನಿರೂಪಿಸಿದರು, ಶ್ರೀಮತಿ ಟೀನಾ ಡಿ ಕೋಸ್ತಾ, ರೋ| ಮೈಕಲ್ ಡಿ ಕೋಸ್ತಾ ಮತ್ತು ಹಿರಿಯ ಪ್ರಗತಿಪರ ಕೃಷಿಕ ರು ಇನ್ನಿತರ ರೋಟರಿ ಕ್ಲಬ್ ನ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ಪಿಲಿಗೂಡು: ಯಾಂತ್ರಡ್ಕದಲ್ಲಿ ಕಳ್ಳತನ: ನಗ‌- ನಗದು ದೋಚಿ ಪರಾರಿಯಾದ ಖದೀಮ

Suddi Udaya

ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ:‌ ಬಂದಾರು ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ

Suddi Udaya

ಗರ್ಡಾಡಿ ವಲಯದ ಮಹಿಳಾ ಜ್ಞಾನವಿಕಾಸದ ವಾರ್ಷಿಕೋತ್ಸವ

Suddi Udaya

ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ-ವಿಜಯ ಕ್ರೇಡಿಟ್ ಕೋ- ಆಪರೇಟಿವ್ ಸೊಸೈಟಿಯಿಂದ ಎಂ‌.ಜಿ ಶೆಟ್ಟಿಯವರಿಗೆ ನುಡಿನಮನ

Suddi Udaya

ಉಜಿರೆ : ಅಲ್-ಅಮೀನ್ ಯಂಗ್-ಮೆನ್ಸ್ ವತಿಯಿಂದ ಮಕ್ಕಳ ಸುನ್ನತ್ ಕಾರ್ಯಕ್ರಮ

Suddi Udaya

ಕಿರಣ್‌ಚಂದ್ರ ಪುಷ್ಪಗಿರಿ ರವರಿಂದ ಡಯಾಲಿಸಿಸ್ ಬಂಧುಗಳಿಗೆ ಅಕ್ಕಿ ಹಾಗೂ ದಿನಸಿ ಸಾಮಾಗ್ರಿ ವಿತರಣೆ

Suddi Udaya
error: Content is protected !!