July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರಿ ಸಂಘದ ಮಹಾಸಭೆ: ಸಂಘವು ರೂ. 32.31 ಕೋಟಿ ವ್ಯವಹಾರ, ರೂ. 49.24 ಲಕ್ಷ ನಿವ್ವಳ ಲಾಭ

ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರಿ ಸಂಘದ ಮಹಾಸಭೆಯು ಸೆ. 7ರಂದು ಕೃಷಿ ಪತ್ತಿನ ಸಹಕಾರಿ ಸಂಘದ ಕನಸು ರೈತ ಸಭಾಭವನದಲ್ಲಿ ಜರುಗಿತು.

ಸಂಘದ ಅಧ್ಯಕ್ಷ ಪಿ ಜಯರಾಜ್ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘವು 32,31,82,518.48 ವ್ಯವಹಾರ ನಡೆಸಿ, ವಾರ್ಷಿಕ ಹಾಲು ಖರೀದಿ 18,30,216.1 ಲೀಟರ್ , ಒಟ್ಟು ಮೊತ್ತ 6,60,57212, ರೂ. 49,24,391.64 ನಿವ್ವಳ ಲಾಭ, ರೂ. 27,47,646 ಉತ್ಪಾದಕರಿಗೆ ಬೋನಸ್ ನೀಡಿದೆ ಎಂದರು.

ಸುಮಾರು ರೂ. 88000 ವನ್ನು 22 ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ಮೂಲಕ ನೀಡಲಾಯಿತು. ಸದಸ್ಯರ ಕ್ಷೇಮನಿಧಿಯಿಂದ ಸುಮಾರು ರೂ. 95000 ಗಳನ್ನು ಆರ್ಥಿಕ ಸಹಾಯಧನ ನೀಡಲಾಯಿತು.

ಸಂಘದ ಮಾಜಿ ನಿರ್ದೇಶಕ ಸೇಸಪ್ಪ ಸಾಲಿಯಾನ್ ರವರು ಹಾಲಿಗೂ ಪಶು ಆಹಾರದ ದರಕ್ಕೂ ವಿಪರೀತ ಏರುಪೇರು ಇದ್ದು ಕನಿಷ್ಢ ರೂ. 50 ಪ್ರತಿ ಲೀಟರ್ ಗೆ ದೊರೆಯುವ ಬಗ್ಗೆ ಒಕ್ಕೂಟ, ಕರ್ನಾಟಕ ಹಾಲು ಮಹಾಮಂಡಳಿ ಪತ್ರ ಬರೆಯುವಂತೆ ಮಹಾಸಭೆಯಲ್ಲಿ ನಿರ್ಣಹಿಸಬೇಕೆಂದು ಒತ್ತಾಯಿಸಿದರು. ಮಹಾಸಭೆಗೆ ಆಗಮಿಸಿದ ವಾರ್ಷಿಕ ಅವಧಿಯಲ್ಲಿ ಹಾಲು ಪೂರೈಸಿದ ಎಲ್ಲಾ ಸದಸ್ಯರಿಗೆ ಕುಕ್ಕರ್ ನೀಡಲಾಯಿತು. ಹಾಗೂ ಅತೀ ಹೆಚ್ಚು ಹಾಲು ಪೂರೈಸಿದ 10 ಜನ ಸದಸ್ಯರು ಹಾಗೂ 10000 ಲೀಟರ್ ಗಿಂತ ಅಧಿಕ ಹಾಲು ಪೂರೈಸಿದ 25ಜನ ಸದಸ್ಯರನ್ನು ಗೌರವಿಸಲಾಯಿತು.

ಈ ವೇಳೆ ಮುಖ್ಯಮಂತ್ರಿ ಪದಕ ಪಡೆದ ಎಂ ಪ್ರವೀಣ್, ಏಕಾಂಗಿಯಾಗಿ 2-3 ದನಗಳನ್ನು ಸಾಕಿಕೊಂಡು ಹೈನುಗಾರಿಕೆ ನಡೆಸುತ್ತಿರುವ ಶ್ರೀಮತಿ ಸರಸ್ವತಿ ಹಾಗೂ ಹೇರಾಜೆ ಸರಕಾರಿ ಶಾಲೆಯನ್ನು ಆರಂಭಿಸಿದ ಅಬ್ದುಲ್ ರಹಿಮಾನ್ ಪಿ.ಕೆ ರವರನ್ನು ಸನ್ಮಾನಿಸಲಾಯಿತು.

ಶ್ರೀಮತಿ ಪ್ರಮೀಳಾ ಪ್ರಾರ್ಥಿಸಿದರು. ನಿರ್ದೇಶಕ ಜನಾರ್ದನ ಗೌಡ ಸ್ವಾಗತಿಸಿದರು. ಒಕ್ಕೂಟದ ಅನುದಾನಗಳ ಬಗ್ಗೆ ವಿಸ್ತರಣಾಧಿಕಾರಿ ರಾಜೇಶ್ ಕಾಮತ್ ವಿವರಿಸಿದರು. ಕಾರ್ಯದರ್ಶಿ ಜಯರಾಜ್ ನಿರೂಪಿಸಿ, ನಿರ್ದೇಶಕ ಪಿ ಕೃಷ್ಣಪ್ಪ ವಂದಿಸಿದರು,

Related posts

ಲೋಕೋಪಯೋಗಿ ಸಚಿವ ಜಾರಕಿಹೊಳಿ ಇಂದು ರಾತ್ರಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಠಬಂಧ ಬ್ರಹ್ಮಕಲಶೋತ್ಸವ: ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಭೇಟಿ

Suddi Udaya

ಕನ್ಯಾಡಿ II ಸ. ಉ. ಹಿ.ಪ್ರಾ. ಶಾಲೆಯಲ್ಲಿ ನೂತನ ಎಲ್‌ಕೆಜಿ ತರಗತಿ ಶುಭಾರಂಭ

Suddi Udaya

ಆರಂಬೋಡಿ: ಕುಂಟಾಲ ಪಲ್ಕೆ ಯುವತಿ ನಾಪತ್ತೆ

Suddi Udaya

ಇಂದು ಕಾಶಿ ಬೆಟ್ಟುನಲ್ಲಿ ಸಂಸದ ಬ್ರಿಜೇಶ್ ಚೌಟ ಹಾಗೂ ಶಾಸಕ ಹರೀಶ್ ಪೂಂಜರಿಂದ ಚಾಲನೆ

Suddi Udaya

ಕರ್ನಾಟಕ ದೇವಸ್ಥಾನ- ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಜಿಲ್ಲಾ ಮಟ್ಟದ ಪರಿಷತ್ತು

Suddi Udaya
error: Content is protected !!