September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ : ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆ

ಬೆಳ್ತಂಗಡಿ: ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ ಬೆಂಗಳೂರು ಇವರಿಂದ 2025-2026 ನೇ ಸಾಲಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕೌನ್ಸೆಲಿಂಗ್ ವರ್ಗಾವಣೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ವರ್ಗಾವಣೆಗೊಳಿಸುವಂತೆ ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಕಾಶಿಪಟ್ಣ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ರೀಮತಿ ಆಶಾಲತಾ ರವರು ಮೂಡಬಿದಿರೆ ತಾ| ಶಿರ್ತಾಡಿ ಗ್ರಾ.ಪಂ. ಗೆ , ಶಿಬಾಜೆ ಗ್ರಾ.ಪಂ. ಪಿಡಿಒ ಜಯರಾಜ್ ಕೆ. ರವರು ಕಡಬ ತಾ| ನೆಲ್ಯಾಡಿ ಗ್ರಾ.ಪಂ.ಗೆ , ಕಳಿಯ ಗ್ರಾ.ಪಂ. ಪಿಡಿಒ ಸಂತೋಷ್ ಪಾಟೀಲ್ ರವರು ಬೆಳಗಾವಿ ಜಿಲ್ಲೆ ಗೆ , ನಡ ಗ್ರಾ.ಪಂ. ಪಿಡಿಒ ಶ್ರೀನಿವಾಸ್ ರವರು ಮಡಂತ್ಯಾರು ಗ್ರಾ.ಪಂ.ಗೆ, ತೆಕ್ಕಾರು ಗ್ರಾ.ಪಂ. ಪಿಡಿಒ ಸುಮಯ್ಯ ತಣ್ಣೀರುಪಂತ ಗ್ರಾ.ಪಂ., ಮಲವಂತಿಗೆ ಪಿಡಿಒ ಶ್ರೀಮತಿ ರಶ್ಮಿ ಬಿ.ಪಿಇಂದಬೆಟ್ಟು ಗ್ರಾ.ಪಂ., ಕೊಕ್ಕಡ ಗ್ರಾ.ಪಂ. ಪಿಡಿಒ ದೀಪಕ್ ರಾಜ್, ಬಂಟ್ವಾಳ ತಾ| ಕನ್ಯಾನ ಗ್ರಾ.ಪಂ., ಕೊಯ್ಯೂರು ಗ್ರಾ.ಪಂ. ಪಿಡಿಒ ಪ್ರಕಾಶ್ ಎಸ್ ವೇಣೂರು ಗ್ರಾ.ಪಂ. ಗೆ., ಕುಕ್ಕೇಡಿ ಗ್ರಾ.ಪಂ. ಪಿಡಿಒ ನವೀನ್ ಎ. ಮೂಡಬಿದ್ರೆ ತಾ| ಇರುವೈಲು ವರ್ಗಾವಣೆಗೊಂಡಿದ್ದಾರೆ.

ಬಳಂಜ ಗ್ರಾ.ಪಂ ಪಿಡಿಒ ಯಾಗಿ ಶಶಿಕಲಾ ಎಂ ನಿಯುಕ್ತಿಗೊಂಡಿದ್ದಾರೆ.

Related posts

ಬೆಳ್ತಂಗಡಿ: ಹಳೆಕೋಟೆ ಸಮೀಪ ಟಿಪ್ಪರ್ ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತ: ಬೈಕ್ ಸವಾರ ಮೃತ್ಯು

Suddi Udaya

ಮಾಚಾರು ಶ್ರೀ ಲಕ್ಷ್ಮಿ ಜನಾರ್ದನ ದೇವಸ್ಥಾನದ  ವರ್ಷಾವಧಿ ಜಾತ್ರಾ ಮಹೋತ್ಸವ ಆಮಂತ್ರಣ ಬಿಡುಗಡೆ   

Suddi Udaya

ಗುರುವಾಯನಕೆರೆ: ಶ್ರೀ ಶಿವಂ ಟೆಕ್ಸ್‌ಟೈಲ್ಸ್ ಮತ್ತು ರೆಡಿಮೇಡ್ಸ್‌ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಶೇ.10-50 ವಿಶೇಷ ಆಫರ್

Suddi Udaya

ಜೇಸಿ ಚೇಂಬರ್ ಆಫ್ ಕಾಮರ್ಸ್ ಸ್ಥಾಪನೆ: ಸ್ಥಾಪಕ ಚೇರ್ಮನ್ ಆಗಿ ಅಭಿನಂದನ್ ಹರೀಶ್ ಪದ ಸ್ವೀಕಾರ

Suddi Udaya

ಬೆದ್ರಬೆಟ್ಟು ಉದ್ಯಮಿ ಹಮೀದ್ ನಿಧನ

Suddi Udaya

ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಶ್ರೀ ಶಾಸ್ತಾರ ದೇವರ ಪುನಃಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಹೊರೆ ಕಾಣಿಕೆ ಹಾಗೂ ಪಲ್ಲಕ್ಕಿ ಸಮರ್ಪಣೆ

Suddi Udaya
error: Content is protected !!