September 6, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಬೆಳ್ತಂಗಡಿ

ಪೆರಿಂಜೆ ಮದರಸದಲ್ಲಿ ಇಶಲ್ ಮದೀನ ಕಾರ್ಯಕ್ರಮ

ವೇಣೂರು: ಪೆರಿಂಜೆಯ ಮುನವ್ವರುಲ್ ಇಸ್ಲಾಮಿಕ್ ಮದರಸದಲ್ಲಿ ಮಿಲಾದ್ ಪ್ರಯುಕ್ತ ಮದರಸ ವಿದ್ಯಾರ್ಥಿಗಳ ಪ್ರತಿಭಾ ಸ್ಪರ್ಧೆ ‘ಇಶಲ್ ಮದೀನ’ ಕಾರ್ಯಕ್ರಮವು ಮದರಸ ಸಮಿತಿಯ ಅಧ್ಯಕ್ಷ ಅಶ್ರಫ್ ಗಾಂಧಿನಗರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮದರಸದ ಧರ್ಮಗುರುಗಳಾದ ಅಶ್ರಫ್ ಅಲ್ ಅಝಹರಿ ಸುಳ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಡ್ಡಂದಡ್ಕ ಮಸೀದಿಯ ಖತೀಬರಾದ ಖಲಂದರ್ ಶಾಫಿ ಬಾಖವಿ ಖಾಮಿಲ್ ಮನ್ನಾನಿ ಕರಾಯ ಅವರು ಮಿಲಾದ್ ಸಂದೇಶ ನೀಡಿದರು.

ಪಡ್ಡಂದಡ್ಕ ಮಸೀದಿ ಕಮಿಟಿಯ ಅಧ್ಯಕ್ಷ ಕೆ. ಇಸ್ಮಾಯಿಲ್ ಪೆರಿಂಜೆ, ಪತ್ರಕರ್ತ ಹೆಚ್. ಮುಹಮ್ಮದ್ ವೇಣೂರು, ಮದರಸ ಸಮಿತಿಯ ಗೌರವಾಧ್ಯಕ್ಷ ಯಾಕೂಬ್ ಪೆರಿಂಜೆ, ಮುಹಮ್ಮದ್ ಶಾಫಿ ಕಿರೋಡಿ, ನಝೀರ್ ಪೆರಿಂಜೆ, ಪಿ.ವಿ.ಅಬ್ದುಲ್ ರಹ್ಮಾನ್ ಪೆರಿಂಜೆ ಮುಂತಾದವರು ಈ ಸಂದರ್ಭದಲ್ಲಿ ಭಾಗವಹಿಸಿ ಶುಭಹಾರೈಸಿದರು. ‌

ಪಡ್ಡಂದಡ್ಕ ಮಸೀದಿ ಕಮಿಟಿಯ ಪ್ರಧಾನ ಕಾರ್ಯದರ್ಶಿ ರಫೀಕ್, ಜೊತೆ ಕಾರ್ಯದರ್ಶಿ ಅಬ್ದುಸ್ಸಲಾಂ ಶಾಂತಿನಗರ, ಲೆಕ್ಕ ಪರಿಶೋಧಕ ಇದ್ರಿಸ್ ಪೂಲಬೆ, ಸದಸ್ಯ ಅಶ್ರಫ್ ಕಿರೋಡಿ, ಶಾಂತಿನಗರ ಮದರಸ ಸಮಿತಿಯ ಅಧ್ಯಕ್ಷ ಪಿ.ಹೆಚ್. ಅಶ್ರಫ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ತೌಫೀಕ್ ಸ್ವಾಗತಿಸಿ ಮಿಶಾಲ್ ವಂದಿಸಿದರು. ಹಾಫಿಲ್ ಕಾರ್ಯಕ್ರಮ ನಿರೂಪಿಸಿದರು.

Related posts

ಅಳದಂಗಡಿ: ಆಟೋ ಪಲ್ಟಿಯಾಗಿ ಚಾಲಕ ಸಾವು

Suddi Udaya

ಕೊಕ್ಕಡ: ಕೊಲ್ಲಾಜೆಪಳಿಕೆ ನಿವಾಸಿ ನಾರಾಯಣ ನಿಧನ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆ ವಿದ್ಯಾರ್ಥಿಗಳಿಗೆ ಬಹುಮಾನ

Suddi Udaya

ಅರಸಿನಮಕ್ಕಿ: ಶ್ರೀ ಕ್ಷೇತ್ರ ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ: ನೂತನ ಶಿಲಾಮಯ ದೀಪಸ್ಥಂಭ ಉದ್ಘಾಟನೆ

Suddi Udaya

ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ವಾರ್ಷಿಕ ಮಹಾಸಭೆ

Suddi Udaya

ಬೆಳಾಲು: ಅಕ್ರಮ ಕೋಳಿ ಅಂಕದ ಮೇಲೆ ಧರ್ಮಸ್ಥಳ ಪೊಲೀಸರ ದಾಳಿ

Suddi Udaya
error: Content is protected !!