July 23, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಬೆಳ್ತಂಗಡಿ

ಪೆರಿಂಜೆ ಮದರಸದಲ್ಲಿ ಇಶಲ್ ಮದೀನ ಕಾರ್ಯಕ್ರಮ

ವೇಣೂರು: ಪೆರಿಂಜೆಯ ಮುನವ್ವರುಲ್ ಇಸ್ಲಾಮಿಕ್ ಮದರಸದಲ್ಲಿ ಮಿಲಾದ್ ಪ್ರಯುಕ್ತ ಮದರಸ ವಿದ್ಯಾರ್ಥಿಗಳ ಪ್ರತಿಭಾ ಸ್ಪರ್ಧೆ ‘ಇಶಲ್ ಮದೀನ’ ಕಾರ್ಯಕ್ರಮವು ಮದರಸ ಸಮಿತಿಯ ಅಧ್ಯಕ್ಷ ಅಶ್ರಫ್ ಗಾಂಧಿನಗರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮದರಸದ ಧರ್ಮಗುರುಗಳಾದ ಅಶ್ರಫ್ ಅಲ್ ಅಝಹರಿ ಸುಳ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಡ್ಡಂದಡ್ಕ ಮಸೀದಿಯ ಖತೀಬರಾದ ಖಲಂದರ್ ಶಾಫಿ ಬಾಖವಿ ಖಾಮಿಲ್ ಮನ್ನಾನಿ ಕರಾಯ ಅವರು ಮಿಲಾದ್ ಸಂದೇಶ ನೀಡಿದರು.

ಪಡ್ಡಂದಡ್ಕ ಮಸೀದಿ ಕಮಿಟಿಯ ಅಧ್ಯಕ್ಷ ಕೆ. ಇಸ್ಮಾಯಿಲ್ ಪೆರಿಂಜೆ, ಪತ್ರಕರ್ತ ಹೆಚ್. ಮುಹಮ್ಮದ್ ವೇಣೂರು, ಮದರಸ ಸಮಿತಿಯ ಗೌರವಾಧ್ಯಕ್ಷ ಯಾಕೂಬ್ ಪೆರಿಂಜೆ, ಮುಹಮ್ಮದ್ ಶಾಫಿ ಕಿರೋಡಿ, ನಝೀರ್ ಪೆರಿಂಜೆ, ಪಿ.ವಿ.ಅಬ್ದುಲ್ ರಹ್ಮಾನ್ ಪೆರಿಂಜೆ ಮುಂತಾದವರು ಈ ಸಂದರ್ಭದಲ್ಲಿ ಭಾಗವಹಿಸಿ ಶುಭಹಾರೈಸಿದರು. ‌

ಪಡ್ಡಂದಡ್ಕ ಮಸೀದಿ ಕಮಿಟಿಯ ಪ್ರಧಾನ ಕಾರ್ಯದರ್ಶಿ ರಫೀಕ್, ಜೊತೆ ಕಾರ್ಯದರ್ಶಿ ಅಬ್ದುಸ್ಸಲಾಂ ಶಾಂತಿನಗರ, ಲೆಕ್ಕ ಪರಿಶೋಧಕ ಇದ್ರಿಸ್ ಪೂಲಬೆ, ಸದಸ್ಯ ಅಶ್ರಫ್ ಕಿರೋಡಿ, ಶಾಂತಿನಗರ ಮದರಸ ಸಮಿತಿಯ ಅಧ್ಯಕ್ಷ ಪಿ.ಹೆಚ್. ಅಶ್ರಫ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ತೌಫೀಕ್ ಸ್ವಾಗತಿಸಿ ಮಿಶಾಲ್ ವಂದಿಸಿದರು. ಹಾಫಿಲ್ ಕಾರ್ಯಕ್ರಮ ನಿರೂಪಿಸಿದರು.

Related posts

ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ ಸಂಘ : ವೀಲ್ ಚೇರ್ ಹಸ್ತಾಂತರ

Suddi Udaya

ಪುಂಜಾಲಕಟ್ಟೆಯಲ್ಲಿ ಹೆಸರಾಂತ ಬಿ.ಪುಂಡಲೀಕ ಬಾಳಿಗಾ & ಸನ್ಸ್ ಜ್ಯುವೆಲ್ಲರ್‍ಸ್ ವಿಸ್ತೃತ ನೂತನ ಮಳಿಗೆಯ ಶುಭಾರಂಭ

Suddi Udaya

ಮಚ್ಚಿನ ಹಾಗೂ ಕೊರಂಜ ಶಾಲೆ ಕರ್ನಾಟಕ ಪಬ್ಲಿಕ್ ಸ್ಕೂಲ್ಆಗಿ ಮೇಲ್ದರ್ಜೆಗೆ  : ಶಾಸಕ ಹರೀಶ್ ಪೂಂಜ

Suddi Udaya

ಸುಲ್ಕೇರಿ ಗ್ರಾ.ಪಂ ನಲ್ಲಿ ವಿಶೇಷ ಚೇತನರ ಸಮನ್ವಯ ಸಭೆ

Suddi Udaya

ಬೆಳ್ತಂಗಡಿ ಯುವಮೋರ್ಚಾ ಮಂಡಲ ವತಿಯಿಂದ ಸಂಘಟನಾತ್ಮಕ ಸಭೆ

Suddi Udaya

ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ: ರೂ.229.55 ಕೋಟಿ ವ್ಯವಹಾರ-ರೂ.82.10 ಲಕ್ಷ ಲಾಭ- ಶೇ 10.50 ಡಿವಿಡೆಂಡ್

Suddi Udaya
error: Content is protected !!