September 6, 2026
ಚಿತ್ರ ವರದಿ

ಉಜಿರೆ: ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಬೆಳ್ತಂಗಡಿ ಸೆಂಟರ್ ವತಿಯಿಂದ ಇಂಜಿನಿಯರ್ಸ್ ಡೇ ಆಚರಣೆ

ಬೆಳ್ತಂಗಡಿ : ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಇಂಡಿಯಾ) ಬೆಳ್ತಂಗಡಿ ಸೆಂಟರ್ ಮತ್ತು ಎಸ್ ಡಿ ಎಂ ಐಟಿ ಉಜಿರೆ ಹಾಗೂ ಎಸ್ ಡಿ ಎಂ ಪಾಲಿಟೆಕ್ನಿಕ್ ಉಜಿರೆ ಸಹಯೋಗದಲ್ಲಿ ಇಂಜಿನಿಯರ್ಸ್ ಡೇ – 2025 ಕಾರ್ಯಕ್ರಮ ಆಯೋಜಿಸಲಾಯಿತು.

ಬೆಳ್ತಂಗಡಿಯಿಂದ ಎಸ್ ಡಿ ಎಂ ಐಟಿ ವರೆಗೆ ಮೋಟಾರ್ ರ್ಯಾಲಿ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.ಎಸ್ ಡಿ ಎಂ ಐಟಿ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಂದ ಪ್ರಾರ್ಥನೆ, ಅತಿಥಿಗಳಿಂದ ದೀಪ ಪ್ರಜ್ವಲನ ಹಾಗೂ ವಿಶ್ವೇಶರಯರಿಗೆ ಪುಷ್ಪಾರ್ಚನೆ ನೆರವೇರಿತು.

ಸ್ವಾಗತ ಭಾಷಣವನ್ನು Er. ತೃಪ್ತಿ ರತನ್ (HOD, SDM ಪಾಲಿಟೆಕ್ನಿಕ್) ಮಾಡಿದರು.ಎಮಿನೆಂಟ್ ಇಂಜಿನಿಯರ್ 2025 ಗೌರವವನ್ನು Er. ಆನಂದ ಭಟ್ ಮತ್ತು Er. ವಿಜಯ ವಿಷ್ಣು ಮಯ್ಯ ಟಿ. ಅವರಿಗೆ ನೀಡಲಾಯಿತು. SDMIT ಮತ್ತು SDM ಪಾಲಿಟೆಕ್ನಿಕ್‌ನ ಶ್ರೇಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೂ ಸನ್ಮಾನ ನೀಡಲಾಯಿತು.

ಪ್ರಾಂಶುಪಾಲರ ಸಂದೇಶದ ನಂತರ Er. ಜಗದೀಶ್ ಪ್ರಸಾದ್ ಎನ್. (ಅಧ್ಯಕ್ಷರು, ACCE[I] ಬೆಳ್ತಂಗಡಿ ಕೇಂದ್ರ) KPCEA 2024 ಕುರಿತ ಮಾಹಿತಿ ಹಂಚಿದರು. ಕಾರ್ಯಕ್ರಮದ ನಿರೂಪಣೆ Dr. ರವೀಶ್ ಪಡುಮಲೆ (HOD, SDM IT, ಉಜಿರೆ) ನಡೆಸಿದರು.

ಕೊನೆಯಲ್ಲಿ Er. ಕೇಶವ್ ವಂದನೆ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಸೆಂಟರ್‌ನ ಅನೇಕ ಇಂಜಿನಿಯರ್‌ಗಳು, SDM ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ಅರಸಿನಮಕ್ಕಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಜಯಪ್ರಸಾದ್ ಶೆಟ್ಟಿಗಾರ್ ಆಯ್ಕೆ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳನ್ನು ಮೆಚ್ಚಿ ಉಜಿರೆಯಲ್ಲಿ 3 ಹೊಸ ಸಂಘ ರಚನೆ

Suddi Udaya

ಮಡಂತ್ಯಾರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಪ್ರಮೋದ್ ಕುಮಾರ್

Suddi Udaya

ನೆರಿಯ: ಶ್ರೀ ಕ್ಷೇತ್ರ ಕುಡುಮಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಶಾಸಕ ಹರೀಶ್‌ ಪೂಂಜ ಭೇಟಿ

Suddi Udaya

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ಭಜನಾ ಮಂಡಳಿಯ 46ನೇ ವರ್ಷದ ಭಜನಾ ಸಪ್ತಾಹ

Suddi Udaya

ಕೇಲ್ತಾಜೆ ಸಿರಾಜುಲ್ ಹುದಾ ಮದರಸ ಮತ್ತು ಜುಮಾ ಮಸ್ಜಿದ್ ಇದರ ಅಧ್ಯಕ್ಷರಾಗಿ ಕೆ ಹನೀಫ್ ಪುನರಾಯ್ಕೆ

Suddi Udaya
error: Content is protected !!