22.6 C
ಪುತ್ತೂರು, ಬೆಳ್ತಂಗಡಿ
July 23, 2026
ಚಿತ್ರ ವರದಿ

ಉಜಿರೆ: ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಬೆಳ್ತಂಗಡಿ ಸೆಂಟರ್ ವತಿಯಿಂದ ಇಂಜಿನಿಯರ್ಸ್ ಡೇ ಆಚರಣೆ

ಬೆಳ್ತಂಗಡಿ : ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಇಂಡಿಯಾ) ಬೆಳ್ತಂಗಡಿ ಸೆಂಟರ್ ಮತ್ತು ಎಸ್ ಡಿ ಎಂ ಐಟಿ ಉಜಿರೆ ಹಾಗೂ ಎಸ್ ಡಿ ಎಂ ಪಾಲಿಟೆಕ್ನಿಕ್ ಉಜಿರೆ ಸಹಯೋಗದಲ್ಲಿ ಇಂಜಿನಿಯರ್ಸ್ ಡೇ – 2025 ಕಾರ್ಯಕ್ರಮ ಆಯೋಜಿಸಲಾಯಿತು.

ಬೆಳ್ತಂಗಡಿಯಿಂದ ಎಸ್ ಡಿ ಎಂ ಐಟಿ ವರೆಗೆ ಮೋಟಾರ್ ರ್ಯಾಲಿ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.ಎಸ್ ಡಿ ಎಂ ಐಟಿ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಂದ ಪ್ರಾರ್ಥನೆ, ಅತಿಥಿಗಳಿಂದ ದೀಪ ಪ್ರಜ್ವಲನ ಹಾಗೂ ವಿಶ್ವೇಶರಯರಿಗೆ ಪುಷ್ಪಾರ್ಚನೆ ನೆರವೇರಿತು.

ಸ್ವಾಗತ ಭಾಷಣವನ್ನು Er. ತೃಪ್ತಿ ರತನ್ (HOD, SDM ಪಾಲಿಟೆಕ್ನಿಕ್) ಮಾಡಿದರು.ಎಮಿನೆಂಟ್ ಇಂಜಿನಿಯರ್ 2025 ಗೌರವವನ್ನು Er. ಆನಂದ ಭಟ್ ಮತ್ತು Er. ವಿಜಯ ವಿಷ್ಣು ಮಯ್ಯ ಟಿ. ಅವರಿಗೆ ನೀಡಲಾಯಿತು. SDMIT ಮತ್ತು SDM ಪಾಲಿಟೆಕ್ನಿಕ್‌ನ ಶ್ರೇಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೂ ಸನ್ಮಾನ ನೀಡಲಾಯಿತು.

ಪ್ರಾಂಶುಪಾಲರ ಸಂದೇಶದ ನಂತರ Er. ಜಗದೀಶ್ ಪ್ರಸಾದ್ ಎನ್. (ಅಧ್ಯಕ್ಷರು, ACCE[I] ಬೆಳ್ತಂಗಡಿ ಕೇಂದ್ರ) KPCEA 2024 ಕುರಿತ ಮಾಹಿತಿ ಹಂಚಿದರು. ಕಾರ್ಯಕ್ರಮದ ನಿರೂಪಣೆ Dr. ರವೀಶ್ ಪಡುಮಲೆ (HOD, SDM IT, ಉಜಿರೆ) ನಡೆಸಿದರು.

ಕೊನೆಯಲ್ಲಿ Er. ಕೇಶವ್ ವಂದನೆ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಸೆಂಟರ್‌ನ ಅನೇಕ ಇಂಜಿನಿಯರ್‌ಗಳು, SDM ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ಚಂದ್ರಯಾನ -3 ಯಶಸ್ವಿಯಾಗಲೆಂದು ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ

Suddi Udaya

ಲಾಯಿಲ : ಕುಂಟಿನಿ ಅಲ್ ಬುಖಾರಿ ಜುಮ್ಮಾ ಮಸೀದಿಯಲ್ಲಿ ಈದುಲ್ ಫಿತ್ರ್ ಆಚರಣೆ

Suddi Udaya

ಭೂಸೇನೆಯಲ್ಲಿ 22 ವರ್ಷ ಕರ್ತವ್ಯ ಸಲ್ಲಿಸಿದ್ದ ಸೋಮಂತಡ್ಕ ನಿವಾಸಿ ಫ್ರಾನ್ಸಿಸ್ ಜೆ. ನಿವೃತ್ತಿ‌

Suddi Udaya

ವೇಣೂರು: ಅಕ್ರಮವಾಗಿ ಸಾಗಿಸುತ್ತಿದ್ದ 125 ಕೆ‌ಜಿ ರಕ್ತ ಚಂದನ: ವಾಹನ ಸಮೇತ ರಕ್ತ ಚಂದನ ವಶಕ್ಕೆ ಪಡೆದ ವೇಣೂರು ಅರಣ್ಯಧಿಕಾರಿಗಳು

Suddi Udaya

ಪುಂಜಾಲಕಟ್ಟೆ : ಆಟೋ ಚಾಲಕರಿಂದ ರಿಕ್ಷಾ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ನಿಲುಗಡೆ ಬೋರ್ಡ್ ಅಳವಡಿಕೆ

Suddi Udaya

ಬೆಳ್ತಂಗಡಿ ಸಂತೆಕಟ್ಟೆ ಹೆರಾಜೆ ಕಾಂಪ್ಲೆಕ್ಸ್ ನಲ್ಲಿ ಮಾನ್ವಿ ಲೈಟ್ ಹೌಸ್ ಶುಭಾರಂಭ

Suddi Udaya
error: Content is protected !!