September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಜೆಸಿ ಸಪ್ತಾಹ ಅಂಗವಾಗಿ ತರಬೇತಿ ದಿನದ ಆಚರಣೆ

ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿಯ ಜೇಸಿ ಸಪ್ತಾಹ ಅಂಗವಾಗಿ ತರಬೇತಿ ದಿನವನ್ನು ಆಚರಿಸಲಾಯಿತು.

ಉಜಿರೆಯ ಆದಿಗುರು ಕೌಶಲ್ಯ ಕೇಂದ್ರದಲ್ಲಿ ಮಹಿಳೆಯರಿಗಾಗಿ ಕೌಶಲ್ಯ ಅಭಿವೃದ್ಧಿ ತರಬೇತಿ ಹಾಗೂ ಉಜಿರೆಯ ರುಡ್‌ಸೆಟ್ ಸಂಸ್ಥೆ ಇಲ್ಲಿ ಉದ್ಯಮ ಕೌಶಲ್ಯದ ಬಗ್ಗೆ ತರಬೇತಿ ಹಮ್ಮಿಕೊಳ್ಳಲಾಯಿತು.

ವಲಯ ತರಬೇತುದಾರ ಪುತ್ತೂರಿನ ಮರಿಕ್ಕೆ ಸಾವಯುವ ಮಳಿಗೆ ಇದರ ಮಾಲಕ ಜೆಸಿಐ ವಲಯ 15ರ ವಲಯ ಉಪಾಧ್ಯಕ್ಷ ಸುಹಾಸ್ ಮರಿಕೆ ಇವರು ತರಬೇತಿ ನಡೆಸಿಕೊಟ್ಟರು.

ಉಜಿರೆ ರುಡ್ ಸೆಟ್ ನ ನಿರ್ದೇಶಕ ಅಜೇಯ, ಉಪನ್ಯಾಸಕ ಜೇಮ್ಸ್ ಅಬ್ರಹಾಂ, ಕರುಣಾಕರ ಜೈನ್, ಬ್ಯೂಟಿ ಪಾರ್ಲರ್ ಅತಿಥಿ ಉಪನ್ಯಾಸಕಿ ಮಾದವಿ ಮನೋಹರ ರೈ ಉಪಸ್ಥಿತರಿದ್ದರು. ಜೆಸಿಐ ಬೆಳ್ತಂಗಡಿಯ ಅಧ್ಯಕ್ಷೆ ಜೇಸಿ ಆಶಾಲತಾ ಪ್ರಶಾಂತ್ ಸಭಾಧ್ಯಕ್ಷತೆ ವಹಿಸಿ ಸ್ವಾಗತಿಸಿದರು ಜೇಸಿ ಅದ್ವಿತೀ ಕೆಎಸ್ ಜೇಸಿ ವಾಣಿ ಉದ್ಘೋಷಿಸಿದರು. ರಂಜನ್ ಗುಡಿಗಾರ್ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಜೆಸಿ ಭವ್ಯಶ್ರೀ ಕೀರ್ತಿರಾಜ್ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಕಾರ್ಯದರ್ಶಿ ಪ್ರಮೋದ್ ಕೆ ವಂದಿಸಿದರು. ರುಡ್‌ಸೆಟ್ ಸಂಸ್ಥೆಯ ಸಿಬ್ಬಂದಿಗಳು, ಜೇಸಿ ಸದಸ್ಯರು, ಉಪಸ್ಥಿತರಿದ್ದು ಸಹಕರಿಸಿದರು.

Related posts

ಬೂಡುಮುಗೇರು ಶ್ರೀದುರ್ಗಾಪರಮೇಶ್ವರಿದೇವರಬ್ರಹ್ಮಕಲಶಾಭಿಷೇಕ

Suddi Udaya

ಕೇಳ್ತಾಜೆ ಉಮರುಲ್ ಫಾರೂಕ್ ಜುಮಾ ಮಸ್ಜಿದ್ ಮತ್ತು ಸಿರಾಜುಲ್ ಹುದಾ ಮದರಸದಲ್ಲಿ ಈದುಲ್ ಫಿತರ್ ಆಚರಣೆ

Suddi Udaya

ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತ ಕಡಿರುದ್ಯಾವರ ಕಾನರ್ಪ ಕೌಡಂಗೆ ನಿವಾಸಿ ನೇಮಿರಾಜ ಗೌಡ ನಿಧನ

Suddi Udaya

ತೋಟತ್ತಾಡಿ: ಗೋಳಿತ್ತಡಿ ನಿವಾಸಿ ಬಾಬು ಗೌಡ ನಿಧನ

Suddi Udaya

ಗಾಳಿ ಮಳೆಗೆ ಕುಸಿದು ಬಿದ್ದ ಮನೆ : ಉಜಿರೆ ಗ್ರಾ.ಪಂ. ನಿಂದ ರೂ.10 ಸಾವಿರ ಪರಿಹಾರ ಮಂಜೂರು

Suddi Udaya

ಚಾರಣಕ್ಕೆ ಆನ್‌ಲೈನ್ ಟಿಕೆಟ್‌ ಬುಕ್ಕಿಂಗ್ ಸ್ಥಗಿತ

Suddi Udaya
error: Content is protected !!