22.6 C
ಪುತ್ತೂರು, ಬೆಳ್ತಂಗಡಿ
July 23, 2026
ಕರಾವಳಿಗ್ರಾಮಾಂತರ ಸುದ್ದಿಚಿತ್ರ ವರದಿಧಾರ್ಮಿಕಪ್ರಮುಖ ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಎಸ್ ಡಿ ಎಂ ಪದವಿ ಪೂರ್ವ ಕಾಲೇಜಿನಲ್ಲಿ ಆಟಿದ ಆಯನ ವಿಶೇಷ ಕಾರ್ಯಕ್ರಮ

ಉಜಿರೆ ಇಲ್ಲಿನ ಎಸ್‌ಡಿಎಂ ಪದವಿ ಪೂರ್ವ ಕಾಲೇಜಿನಲ್ಲಿ ಆಟಿ ತಿಂಗಳ ವಿಶಿಷ್ಟ ಆಚರಣೆ ಆತಿದ ಆಯನ ವಿಶೇಷ ಕಾರ್ಯಕ್ರಮ ಆ.10ರಂದು ನಡೆಯಿತು.
ಪರಶುರಾಮ ಸೃಷ್ಟಿಯ ತುಳುನಾಡಿನಲ್ಲಿ ಸಂಭ್ರಮಾಚಾರಣೆಗಳಿಗೆ ಕೊರತೆ ಇರಲಿಲ್ಲ ಪ್ರಕೃತಿಯನ್ನು ಆರಾಧಿಸುತ್ತಾ ಪ್ರಕೃತಿದತ್ತ ಆಹಾರ ಸ್ವೀಕರಿಸುತ್ತಾ ಆರೋಗ್ಯ ಕಾಳಜಿ ಮೆರೆಯುತ್ತಿದ್ದ ನಾಡೆಂದರೆ ಅದುವೇ ತುಳುನಾಡು.ಆದರೆ ಆಧುನಿಕತೆಯ ಭರಾಟೆಯಲ್ಲಿ ಸಾಂಪ್ರದಾಯಿಕ ಆಹಾರ, ಜೀವನಶೈಲಿ ಮರೆಯಾಗುತ್ತಿದೆ.ಆದರೆ ನಾವಿನ್ಯತೆಗಳ ನಡುವೆಯೂ ತುಳುನಾಡಿನ ಸಂಸ್ಕೃತಿ,ವೈಶಿಷ್ಟ್ಯ ಹಾಗೂ ಸಂಪ್ರದಾಯಗಳನ್ನು ಇಂದಿನ ಯುವಜನತೆ ಗೆ ಪರಿಚಯಿಸಲು ಆಯೋಜಿಸಿದ ‘ಆಟಿದ ಆಯನೊ’ ಎಂಬ ಕಾರ್ಯಕ್ರಮ ಶ್ಲಾಘನೀಯ ಎಂದು ಸಾಹಿತಿ,ನಾಟಕಕಾರ ಸದಾನಂದ ಮುಂಡಾಜೆ ಅಭಿಪ್ರಾಯ ಪಟ್ಟರು.ಅವರು ಎಸ್ ಡಿ ಎಂ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ಆಟಿ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ,ತುಳುವರ ಪ್ರತಿಯೊಂದು ಆಚರಣೆಯಲ್ಲಿಯೂ ವೈಜ್ಞಾನಿಕತೆ ಇದೆ ಎಂದು ಉದಾಹರಣೆ ಸಹಿತ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ ಮಾತನಾಡಿ
ತುಳುನಾಡಿನ ವಿಶಿಷ್ಟ ಆಚಾರಗಳ ಪರಿಚಯವನ್ನು ವಿದ್ಯಾರ್ಥಿಗಳಿಗೆ ಮಾಡಿಕೊಟ್ಟಾಗ ಮುಂದಿನ ಪೀಳಿಗೆಗೆ ತುಳುನಾಡಿನ ಪರಂಪರೆಯನ್ನು ಮುಂದುವರಿಸಬಹುದು.ವೈಜ್ಞಾನಿಕ ದೃಷ್ಟಿಕೋನದಿಂದ ಈ ಆಚರಣೆಯನ್ನು ವಿದ್ಯಾರ್ಥಿಗಳು ಸಂಘಟಿಸಿರುವುದು ಶ್ಲಾಘನೀಯ ಎಂದರು.
ಇದೇ ಸಂದರ್ಭದಲ್ಲಿ ಆಟಿ ತಿಂಗಳ ವಿಶೇಷ ಖಾದ್ಯಗಳು, ಸಲಕರಣೆಗಳು ಹಾಗೂ ಗಿಡಮೂಲಿಕೆ ಔಷಧಿ ಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ವಿದ್ಯಾರ್ಥಿ ಶರಣ್ ಸ್ವಾಗತಿಸಿ,ಶ್ರೇಯಾ ವಂದಿಸಿದರು.ವಿದ್ಯಾರ್ಥಿನಿಯರಾದ ಸ್ವಪ್ನ ಹಾಗೂ ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.ಕಾಲೇಜಿನ ಕಲಾವಿಭಾಗವು ಕಾರ್ಯಕ್ರಮವನ್ನು ಸಂಘಟಿಸಿ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು.

Related posts

ಉಜಿರೆ :ಶ್ರೀ ಧ. ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿನಿಯರ ಬೀಳ್ಕೊಡುಗೆ

Suddi Udaya

ಮುಂಡಾಜೆ ಚಿತ್ಪಾವನ ಸಂಘಟನೆಯ ವಾರ್ಷಿಕೋತ್ಸವ: ಪದಗ್ರಹಣ ಸಮಾರಂಭ

Suddi Udaya

ಧರ್ಮಸ್ಥಳ ಶ್ರೀ ಕ್ಷೇತ್ರ ಮಂಜುನಾಥೇಶ್ವರ ಸ್ವಾಮಿ ಸನ್ನಿಧಿಯಲ್ಲಿ ನಾಗರಪಂಚಮಿ ಪ್ರಯುಕ್ತ ನಾಗದೇವರಿಗೆ ವಿಶೇಷ ಪೂಜೆ

Suddi Udaya

ಮಿತ್ತಬಾಗಿಲು: ವಿಷಸೇವಿಸಿ ಆತ್ಯಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಸಾವು

Suddi Udaya

ಅಳದಂಗಡಿ ಸೊಸೈಟಿಯಿಂದ ಕಾಳುಮೆಣಸು ಮತ್ತು ಕಾಫಿ ಬೆಳೆಯ ಕೃಷಿ ಮಾಹಿತಿ ಹಾಗೂ ಸಂವಾದ: ಸುವರ್ಣ ಸಂಭ್ರಮ-2026 ಚಾಲನೆ,ಕೃಷಿ ತರಬೇತುದಾರರಿಗೆ ಸನ್ಮಾನ,ಸಾಧಕ ಕೃಷಿಕರಿಗೆ ಗೌರವಾರ್ಪಣೆ: ದ.ಕ. ಜಿಲ್ಲೆಯ ಕೃಷಿಕರು ಚಂಚಲ ಮನಸ್ಥಿತಿಯವರು: ಶಾಸಕ ಹರೀಶ್ ಪೂಂಜ

Suddi Udaya

ನಡ ಮೂಡಾಯಿಬೆಟ್ಟು ಹಂದಿ ಸಾಕಾಣಾ ಕೇಂದ್ರದಿಂದ ಹಂದಿಯನ್ನು ಎಳೆದೊಯ್ದ ಚಿರತೆ

Suddi Udaya
error: Content is protected !!