22.6 C
ಪುತ್ತೂರು, ಬೆಳ್ತಂಗಡಿ
July 23, 2026
ನಿಧನ

ನಾರಾವಿ: ಹೊಸಮನೆಯ ಜಿನರಾಜ ಪೂವಣಿ ನಿಧನ

ನಾರಾವಿ: ಇಲ್ಲಿಯ ಹೊಸಮನೆಯ ಹಿರಿಯರು ಹಾಗೂ ಆದರ್ಶ ಮತ್ತು ಸುಸಂಸ್ಕೃತ ನಡವಳಿಕೆಯ ಸ್ನೇಹಪರ ವ್ಯಕ್ತಿತ್ವದ ಜಿನರಾಜ ಪೂವಣಿಯವರು(91ವ) ಮಂಗಳವಾರ ಸಂಜೆ ನಿಧನರಾದರು.

ಮದುವೆಯಾಗಿ ಕೆಲವೇ ಕೆಲವು ವರ್ಷಗಳಲ್ಲಿ ಪತ್ನಿಯನ್ನು ಕಳೆದುಕೊಂಡರಾದರೂ, ಮರು ವಿವಾಹಕ್ಕೆ ಎಷ್ಟೇ ಒತ್ತಡವಿದ್ದರೂ ತನ್ನ ಪುಟ್ಟ ನಾಲ್ಕು ಮಕ್ಜಳ‌ ಭವಿಷ್ಯಕ್ಕಾಗಿ ತನ್ನನ್ನು ತಾನು ಸಮರ್ಪಿಸಿಕೊಂಡ ತ್ಯಾಗಮಯಿ ಎನಿಸಿಕೊಂಡವರು. ಎಳೆಯ ಮಕ್ಕಳನ್ನು ಬಿಟ್ಟು ಉದ್ಯೋಗಕ್ಕೆ ಹೋಗುವುದು ಕಷ್ಟ ಎಂಬುದನ್ನರಿತು ಸಣ್ಣದಾದ ಹೋಟೆಲ್ ನಡೆಸುತ್ತಾ ನಾಲ್ಕು ಮಕ್ಕಳಿಗೂ ತಾಯಿ ಇಲ್ಲ ಎನ್ನುವ ಕೊರಗು ಒಂದು ದಿನವೂ ಬರದಂತೆ ಸಾಕಿ ಸಲಹಿದ ಪರಿಯಂತೂ ಅವರ ಪ್ರಾಂಜಲ ಗುಣಮನಸ್ಸಿಗೆ ಪ್ರತಿಬಿಂಬವಾಗಿದೆ. ಬಡತನ ಬೇಗೆಯ ನಡುವೆಯು ಪತ್ನಿ ಕಳೆದುಕೊಂಡ ಸಂಕಟದಲ್ಲಿಯೂ ಕಷ್ಟವೆಲ್ಲಾ ನನಗಿರಲಿ ಎಂದು ಕಷ್ಟವನ್ನೆಲ್ಲ ಮನದಲ್ಲೆ ನುಂಗಿಕೊಂಡು ಜೀವನ ನಡೆಸಿದ ಪುಣ್ಯಯೋಗಿ ಜಿನರಾಜ ಪೂವಣಿಯವರು‌.

ತಾನು ಹಸಿದುಕೊಂಡಿದ್ದರೂ, ಇನ್ನೊಬ್ಬರ ಸಂಕಷ್ಟಕ್ಕೆ ಸದಾ ಮಿಡಿಯುತ್ತಿದ್ದ ಅವರ ನಿಸ್ವಾರ್ಥ ಮನಸ್ಸು ಮತ್ತು ಗುಣಸ್ವಭಾವ ಅನುಕರಣೀಯ ಮತ್ತು ಅಭಿನಂದನೀಯ.

ಮೂವರು ಸುಪುತ್ರಿಯರು , ಓರ್ವ ಪುತ್ರ ಹಾಗೂ ಅಪಾರ ಸಂಖ್ಯೆಯಲ್ಲಿ ಬಂಧುಬಳಗವನ್ನು ಅಗಲಿದ್ದಾರೆ.

Related posts

ಕಲ್ಮಂಜ: ನಿಡಿಗಲ್ ಆದರ್ಶನಗರದ ನಿವಾಸಿ ಚಂದ್ರಶೇಖರ್ ಎಮ್. ನಿಧನ

Suddi Udaya

ರೆಖ್ಯ: ನಾರಾಯಣ ಕುಲಾಲ್ ನಿಧನ

Suddi Udaya

ಪಿಡಬ್ಲ್ಯೂಡಿ ಗುತ್ತಿಗೆದಾರ ಮಹಮ್ಮದ್ ಮದ್ದಡ್ಕ ಅಸೌಖ್ಯದಿಂದ ನಿಧನ

Suddi Udaya

ಮದ್ದಡ್ಕ ಬಾಲಕೃಷ್ಣ ಶೆಟ್ಟಿ ನಿಧನ

Suddi Udaya

ನಾಟಿ ವೈದ್ಯ ಬಾಬು ಗೌಡ ಅಂಡೆಟ್ಟು ನಿಧನ

Suddi Udaya

ಹನುಮಾನ್ ಟೂರ್ ಆ್ಯಂಡ್ ಟ್ರಾವೆಲ್ಸ್ ಮಾಲಕ ರಾಮಕೃಷ್ಣ ನಿಧನ

Suddi Udaya
error: Content is protected !!