22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ತಣ್ಣೀರುಪಂತ ಸಹಕಾರ ಸಂಘಗಳ ವ್ಯಾಪ್ತಿಯಲ್ಲಿ ರಾಸುಗಳ ಭ್ರೂಣ ವರ್ಗಾವಣೆ ಕಾರ್ಯಕ್ರಮ

ಬೆಳ್ತಂಗಡಿ: ರಾಷ್ಟ್ರೀಯ ಗೋಕುಲ್ ಮೀಷನ್ ಯೋಜನೆ, ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ಬೆಂಗಳೂರು, ದಕ್ಷಿಣ ಕನ್ನಡ ಸಹಕಾರ ಹಾಲು ಉತ್ಪಾದಕರ ಸಂಘ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ತಣ್ಣೀರುಪಂತ, ಬಂದಾರು, ಪದ್ಮುಂಜ, ಬನ್ನಂಗಳ, ಪಿಲಿಗೂಡು ಹಾಲು ಉತ್ಪಾದಕರ ಸಹಕಾರ ಸಂಘಗಳ ವ್ಯಾಪ್ತಿಯಲ್ಲಿ ರಾಸುಗಳಲ್ಲಿ ಭ್ರೂಣ ವರ್ಗಾವಣೆ ಕಾರ್ಯಕ್ರಮ ತಣ್ಣೀರುಪಂತ ಹಾಲು ಉತ್ಪಾದಕರ ಮೇವು ಘಟಕದಲ್ಲಿ ಅ.11 ರಂದು ನಡೆಯಿತು.

ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಮಾತನಾಡಿ ಇದೊಂದು ವಿನೂತನ ಕಾರ್ಯಕ್ರಮ ಉಭಯ ಜಿಲ್ಲೆಗಳಲ್ಲಿ ಒಕ್ಕೂಟದ ಮುಖಾಂತರ ತಣ್ಣೀರುಪಂತ ಹಾಲು ಉತ್ಪಾದಕರ ಸಂಘದ ಮೂಲಕ ಪ್ರಾರಂಭವಾಗಿದೆ. ಉತ್ಕೃಷ್ಠ ತಳಿಯ, ಅತ್ಯಧಿಕ ಹಾಲು ನೀಡುವ ರಾಸುಗಳ ಅಂಡಾಣುಗಳನ್ನು ಸಂಗ್ರಹಿಸಿ, ಉತ್ಕೃಷ್ಠ ತಳಿಯ ಹೋರಿಯ ಲಿಂಗ ವರ್ಗೀಕೃತ ವೀರ್ಯಾಣುವಿನೊಂದಿಗೆ ಪ್ರಯೋಗ ಶಾಲೆಯಲ್ಲಿ ಫಲೀಕರಿಸಿ ತಯಾರಾಗುವ ಭ್ರೂಣವನ್ನು ಆರೋಗ್ಯವಂತ ಬದಲಿ ತಾಯಿ ದನದ ಗರ್ಭಕೋಶಕ್ಕೆ ವರ್ಗಾಯಿಸುವ ಪ್ರಕ್ರಿಯೆಯನ್ನು ಭ್ರೂಣ ವರ್ಗಾವಣೆ ಎನ್ನುತ್ತಾರೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಗೋಕುಲ್ ಯೋಜನೆಯಡಿ ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯಿಂದ ಅನುಷ್ಠಾನಗೊಳ್ಳುತ್ತಿರುವ ಈ ಕಾರ್ಯಕ್ರಮದಲ್ಲಿ ಈಗಾಗಲೇ ದೇಶಾದ್ಯಂತ ರಾಸುಗಳಲ್ಲಿ ಭ್ರೂಣ ವರ್ಗಾವಣೆ ನಡೆಯುತ್ತಿದೆ.

ಕರ್ನಾಟಕ ರಾಜ್ಯದಲ್ಲಿ ನಂದಿನಿ ವೀರ್ಯಾಣು ಕೇಂದ್ರದ ಬುಲ್ ಮದರ್ ಫಾರ್ಮ್ ನಲ್ಲಿ ಈ ಕಾರ್ಯಕ್ರಮ ಯಶಸ್ಸನ್ನು ಕಂಡಿದ್ದು, ಶೇ.30 ರಾಸುಗಳ ಗರ್ಭಧರಿಸಿ ಕೆಲವು ಕರುಗಳ ಜನನವು ಆಗಿರುತ್ತದೆ. ಕೋಲಾರ, ಬೆಂಗಳೂರು, ಮಂಡ್ಯ, ಚಾಮರಾಜನಗರ ಹಾಲು ಒಕ್ಕೂಟಗಳಲ್ಲಿ ಈ ಯೋಜನೆಯ ವಿವಿಧ ಹಂತಗಳಲ್ಲಿ ಅನುಷ್ಠಾನಗೊಂಡಿರುತ್ತದೆ. ಒಟ್ಟು 350 ಕ್ಕೂ ಅಧಿಕ ಭ್ರೂಣ ವರ್ಗಾವಣೆಗಳನ್ನು ನಡೆಸಲಾಗಿದ್ದು, ಇದೀಗ ನಮ್ಮ ಒಕ್ಕೂಟದ ವ್ಯಾಪ್ತಿಯಲ್ಲಿ ಮೊದಲು ಬಾರಿಗೆ ತಣ್ಣೀರುಪಂತ, ಬನ್ನಂಗಳ, ಪದ್ಮುಂಜ, ಬಂದಾರು, ಪಿಲಿಗೂಡು ಹಾಲು ಉ.ಸ.ಸಂಘಗಳ ವ್ಯಾಪ್ತಿಯ ಸುಮಾರು 20 ದನಗಳ ಭ್ರೂಣ ವರ್ಗಾವಣೆಗಳನ್ನು ನಡೆಸಲಾಗುತ್ತಿದೆ.ರಾಷ್ಟ್ರೀಯ ಗೋಕುಲ್ ಮಿಷನ್ ಯೋಜನೆ ಅನುದಾನದಲ್ಲಿ ಐದು ಸಾವಿರ, ಕರ್ನಾಟಕ ಹಾಲು ಉತ್ಪಾದಕರ ಮಂಡಳಿಯಿಂದ ಹತ್ತು ಸಾವಿರ, ದಕ್ಷಿಣ ಕನ್ನಡ ಹಾಲು ಒಕ್ಕೂಟದ ವತಿಯಿಂದ ಐದು ಸಾವಿರ ಅನುದಾನ ರೈತರಿಗೆ ಸಿಗುತ್ತಾದೆ. ಭ್ರೂಣ ವರ್ಗಾವಣೆಯ ಮುಖಾಂತರ ರಾಸುಗಳ ಗರ್ಭಧರಿಸಿರುವುದು. ದೃಢಪಡಿಸಿದ ನಂತರವಷ್ಟೇ ಮೊತ್ತವನ್ನು ಸಂಗ್ರಹಿಸಿ ಸೇವಾದಾರರಿಗೆ ಶುಲ್ಕ ಪಾವತಿಸಲಾಗುವುದು ಸೇವಾದಾರರಾಗಿ ರಾಹುರಿ ಸ್ಪರ್ಮ್ ಸ್ಟೇಷನ್ ಮಹಾರಾಷ್ಟ್ರ ಇವರು ನಿಯೋಜಿತರಾಗಿರುತ್ತಾರೆ. ಅಧಿಕ ಹಾಲಿನ ಇಳುವರಿಯ ಉತ್ಕೃಷ್ಟ ಹೆಣ್ಣು ಕರುಗಳನ್ನು ಪಡೆಯಲು ಭ್ರೂಣ ವರ್ಗಾವಣೆಯು ಸಹಕಾರಿಯಾಗಿದ್ದು, ವಿವಿಧ ಅನುದಾನಗಳು ಲಭ್ಯವಿರುವುದರಿಂದ ಇದು ರೈತರಿಗೆ ಕಡಿಮೆ ದರದಲ್ಲಿ ಲಭಿಸುತ್ತದೆ ಎಂದು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಹೇಳಿದರು.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಉದಯ ಕೋಟ್ಯಾನ್, ದಕ್ಷಿಣ ಕನ್ನಡ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ಚಂದ್ರಶೇಖರ್ ರಾವ್, ಭರತ್ ಎನ್., ಪ್ರಭಾಕರ್ ಆರಂಬೋಡಿ, ನಿರ್ದೇಶಕಿ ಸವಿತಾ ಎನ್., ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ., ತಣ್ಣೀರುಪಂತ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಜಯರಾಜ್, ಬೆಳ್ತಂಗಡಿ ಪಶು ಅಧಿಕಾರಿ ರವಿಕುಮಾ‌ರ್ ಉಪಸ್ಥಿತರಿದ್ದರು.
ತಣ್ಣೀರುಪಂತ ಹಾಲು ಉತ್ಪಾದಕರ ಕಾರ್ಯದರ್ಶಿ ಜಯರಾಜ್, ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕ ರವಿರಾಜ್ ಉಡುಪ ಸ್ವಾಗತಿಸಿ, ಕಾರ್ಯಕ್ರಮವನ್ನು ಜಾನೆಟ್ ನಿರೂಪಿಸಿದರು.

Related posts

ರಾತ್ರಿ ಬೀಟ್ ಕರ್ತವ್ಯದ ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆ ಪ್ರಕರಣ : ಕೇರಳಕ್ಕೆ ಪರಾರಿಯಾಗಿದ್ದ ಆರೋಪಿಗಳಾದ ಅರಸಿನಮಕ್ಕಿಯ ಸಚಿನ್ ಹಾಗೂ ನೆಲ್ಯಾಡಿಯ ಚಂದನ್ ಬಂಧನ*

Suddi Udaya

ಉಜಿರೆ ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಕೈತೋಟ ನಿರ್ವಹಣೆ ಮತ್ತು ಸಹಜ ಕೃಷಿ ಹಾಗೂ ಓರಿಗಾಮಿ ತರಬೇತಿ

Suddi Udaya

ಬೆಳ್ತಂಗಡಿ ಭಕ್ತಿ ಹೆಜ್ಜೆ ಬಳಗದಿಂದ “ಭಜಕೆರೆ ಆಟಿದ ಕಮ್ಮೆನ ಜನಪದ ಮಿನದನ” ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬುರುಡೆ ಪ್ರಕರಣ: ಬೆಂಗಳೂರಿನ ಜಯಂತ್ ಟಿ ಬಾಡಿಗೆ ಮನೆ ಮೇಲೆ ಎಸ್.ಐ.ಟಿ ದಾಳಿ

Suddi Udaya

ವೇಣೂರು: ಅಕ್ರಮ ಮರಳು ಸಾಗಟ: ರೂ.6 ಸಾವಿರ ಮೌಲ್ಯದ ಮರಳು ವಶಪಡಿಸಿಕೊಂಡ ವೇಣೂರು ಪೊಲೀಸರು

Suddi Udaya

ದೀಪಕ್ ಜಿ ಯವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Suddi Udaya
error: Content is protected !!