September 6, 2026
Uncategorized

ಶಿರ್ಲಾಲುವಿನಲ್ಲಿ ಮೊಬೈಲ್ ಟವರನ್ನು ನುಂಗಿದ ಕಳೆಗಿಡಗಂಟಿ ಬಳ್ಳಿಗಳು, ಅಧಿಕಾರಿಗಳ ನಿರ್ಲಕ್ಷ್ಯ

ಶಿರ್ಲಾಲು: ಮೊಬೈಲ್ ಟವರ್ ಸರಬರಾಜು ಕಚೇರಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮೊಬೈಲ್ ಟವರಲ್ಲಿ ಗಿಡಗಂಟಿ, ಬಳ್ಳಿಗಳು ಬೆಳೆದು ಮುತ್ತಿಕೊಂಡು, ಮೊಬೈಲ್ ಟವರನ್ನೇ ಬಳ್ಳಿಗಳು ನುಂಗಿ ಅಪಾಯಕ್ಕೆ ಆಹ್ವಾನ ನೀಡುವಂತಿವೆ.

ಶಿರ್ಲಾಲು ಗ್ರಾಮ ಪಂಚಾಯತ್ ನ ಪಕ್ಕದಲ್ಲಿರುವ ಮೊಬೈಲ್ ಟವರ್ ನ ಬುಡದಿಂದ ಕೊಡಿಯವರೆಗೆ ಸಂಪೂರ್ಣ ಬಳ್ಳಿಗಳು ಮುತ್ತಿಕೊಂಡಿದೆ. ಈ ರೀತಿ ಬಳ್ಳಿಗಳು ಬೆಳೆಯಲು ಸುಮಾರು ಸಮಯ ಬೇಕಾಗುತ್ತೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಿದೆ ಹೋಗಿದ್ದು ಮಾತ್ರ ವಿಪರ್ಯಾಸ ಎಂದು ಶಿರ್ಲಾಲು ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಬೆಳ್ತಂಗಡಿ ಸುದ್ದಿ ಉದಯ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಕಳೆದ ಕೆಲವು ಸಮಯದಲ್ಲಿ ಶಿರ್ಲಾಲು ಪರಿಸರದಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ಎಲ್ಲರಿಗೂ ತೊಂದರೆಯಾಗಿದೆ. ಶಿರ್ಲಾಲುವಿನ‌ ಸಾರ್ವಜನಿಕರು ಎಷ್ಟೋ ಸಲ ಅಧಿಕಾರಿಗಳಿಗೆ ನೆಟ್ವರ್ಕ್ ಸಮಸ್ಯೆಯ ಗಂಭೀರತೆ ಬಗ್ಗೆ ತಿಳಿಸಿದರು ಯಾವುದೇ ಪ್ರಯೋಜನವಾಗಲಿಲ್ಲ. ಈ ರೀತಿ ಟವರಲ್ಲಿ ಬಳ್ಳಿಗಳು ಬೆಳೆದರೆ ನೆಟ್ವರ್ಕ್ ಬರುವುದಾದರೂ ಹೇಗೆ ಎಂದು ಸಾರ್ವಜನಿಕರು ಮಾತಾಡುತ್ತಿದ್ದಾರೆ‌.

ಮೊಬೈಲ್ ಟವರ್ ಸುತ್ತ ಮರಗಳು ಬೆಳೆದಿದೆ. ಜೊತೆಗೆ ಬಳ್ಳಿಗಳ ರಾಶಿಯಿದೆ. ಆದರೂ ಇದರ ಬಗ್ಗೆ ಗಮನಹರಿಸುವವರು ಅಥವಾ ಕೇಳುವವರು ಇಲ್ಲದಾಗಿದೆ. ಜನರಿಗೆ ಪ್ರಯೋಜನವಾಗದ ಮೊಬೈಲ್ ಟವರ್ ಇದ್ದರೇನು, ಬಿಟ್ಟರೇನು ಎಂದು ಜನರು ಅಧಿಕಾರಿಗಳನ್ನು ದೂರುತ್ತಿದ್ದಾರೆ.

Related posts

ಬೆಳ್ತಂಗಡಿ :ರಿಕ್ಷಾ ಚಾಲಕ ನೀಲಯ್ಯ ಗೌಡ ನಿಧನ

Suddi Udaya

ಗುರಿಪಳ್ಳ: ಸಂಜೀವ ಶೆಟ್ಟಿ ನಿಧನ

Suddi Udaya

ನಮ್ಮ ಬದುಕನ್ನು ರೂಪಿಸುವ ಅಡಿಪಾಯವೇ ಶಿಕ್ಷಣ-ಡಾ. ನವೀನ್ ಕುಮಾರ್ ಜೈನ್.

Suddi Udaya

ಭಾರಿ ಮಳೆ: ಆ.29ರಂದು ದ.ಕ.ಜಿಲ್ಲಾ ಶಾಲಾ ಕಾಲೇಜುಗಳಿಗೆ ರಜೆ

Suddi Udaya

ದ.ಕ ಜಿಲ್ಲೆಯಲ್ಲಿ ವ್ಯಾಪಕ ಮಳೆಯ ಹಿನ್ನಲೆ: ಜು.7 ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Suddi Udaya

ಕುಂಟಿನಿ ಅಂಗನವಾಡಿ ಕೇಂದ್ರದಲ್ಲಿ ಪೋಲಿಯೋ ಲಸಿಕೆ ಅಭಿಯಾನಕ್ಕೆ ಚಾಲನೆ

Suddi Udaya
error: Content is protected !!