22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜಿಲ್ಲಾ ವಖ್ಫ್ ಕಾರ್ಯಾಲಯದ ವತಿಯಿಂದ ಉಮಿದ್ ಪೋರ್ಟಲ್ ಬಗ್ಗೆ ಮಾಹಿತಿ ಕಾರ್ಯಾಗಾರ

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲಾ ವಖ್ಫ್ ಕಾರ್ಯಾಲಯದ ವತಿಯಿಂದ ಹಾಗೂ ವಖ್ಫ್ -ಮೈನಾರಿಟಿ ಇನ್ಫೋ ಇದರ ಸಹಯೋಗದೊಂದಿಗೆ ಬೆಳ್ತಂಗಡಿ ತಾಲೂಕಿಗೊಳಪಟ್ಟ ಎಲ್ಲಾ ಮೊಹಲ್ಲಾಗಳ ನಾಯಕರುಗಳಿಗೆ ಉಮಿದ್ ಪೋರ್ಟಲ್ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಗುರುವಾಯನಕೆರೆ ಸಮುದಾಯ ಭವನ ಸಭಾಂಗಣದಲ್ಲಿ ನಡೆಸಲಾಯಿತು. ತಾಲೂಕಿನ ಹಲವು ಮಸೀದಿ, ಮೊಹಲ್ಲಾದ ನಾಯಕರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿಯನ್ನು ಪಡೆದುಕೊಂಡರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ದ.ಕ ಜಿಲ್ಲಾ ವಕ್ಫ್ ಕಾರ್ಯಾಲಯದ ಆಡಿಟರ್ ಅನ್ವರ್ ಮುಸ್ತಫ ಉಮಿದ್ ಪೋರ್ಟಲ್ ನಲ್ಲಿ ವಖ್ಫ್ ಆಸ್ತಿಗಳ ಮಾಹಿತಿ ತುಂಬುವುದರ ಬಗ್ಗೆ ವಿವರವಾಗಿ ವಿವರಿಸಿದರು. ವಖ್ಫ್-ಮೈನಾರಿ ಟಿ ಇನ್ಫೋ ಇದರ ಅಡ್ಮಿನ್ ಅಬ್ದುಲ್ ಖಾದರ್ ನಾವೂರು ಪ್ರಸ್ತಾವಿಕ ಹಾಗೂ ಸ್ವಾಗತ ಭಾಷಣ ಮಾಡಿದರು. ವೇದಿಕೆಯಲ್ಲಿ ಎಕ್ಸ್ ಮಿಲಿಟರಿ ಮಹಮ್ಮದ್ ರಫಿ, ದ.ಕ ಜಿಲ್ಲಾ ವಖ್ಫ್ ಸಲಹಾ ಸಮಿತಿಯ ಮಾಜಿ ಸದಸ್ಯರಾದ ಸಿದ್ದೀಕ್ ಕಾಜೂರು ಹಾಗೂ ಸಾಧಿಕ್ ಮಾಸ್ಟರ್ ಮಲೆಬೆಟ್ಟು
ಉಪಸ್ಥಿತರಿದ್ದರು.

ಉಮೀದ್ ಪೋರ್ಟಲ್ ಮಾಹಿತಿ ತುಂಬುವ ಬಗ್ಗೆ ಆನ್ಲೈನ್ ಡೆಮೋ ತೋರಿಸಲಾಯಿತು. ಬೆಳ್ತಂಗಡಿ ಖಿಲ್ರ್ ಜುಮಾ ಮಸೀದಿ ಅಧ್ಯಕ್ಷ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಗುರುವಾಯನಕೆರೆ ಮಸೀದಿಯ ಕಾರ್ಯದರ್ಶಿ ಹನೀಫ್, ಜಮೀಯತುಲ್ ಫಲಾಹ್ ಬೆಳ್ತಂಗಡಿ ಪೂರ್ವ ಅಧ್ಯಕ್ಷ ಅಲಿಯಬ್ಬ ಪುಲಾಬೆ, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಮುಖಂಡ ಕರೀಮ್ ಗೇರುಕಟ್ಟೆ ಮುಂತಾದವರು ಉಪಸ್ಥಿತರಿದ್ದರು.

Related posts

ನಾಡಿನ ಪುಣ್ಯಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ಸಾಗಿ ಬಂದ ಸಾವಿರ ಸಾವಿರ ಭಕ್ತರು ಶ್ರೀ ಕ್ಷೇತ್ರದ ಮುಖ್ಯ ದ್ವಾರದಲ್ಲಿ ಡಿ.ಹರ್ಷೆಂದ್ರ ಕುಮಾರ್ ರವರಿಂದ ಭಕ್ತರಿಗೆ ಭವ್ಯ ಸ್ವಾಗತ

Suddi Udaya

ಚಾರ್ಮಾಡಿ ಪ್ರದೇಶದಲ್ಲಿ ಮತ್ತೆ ಪ್ರತ್ಯಕ್ಷಗೊಂಡ ಚಿರತೆಗಳು

Suddi Udaya

ಸೆ.26-27: ಬೆಳ್ತಂಗಡಿಯಲ್ಲಿ ಊದು ಪೂಜೆ ಮತ್ತು ಬೋಳ್ತೆರ್ದ ಪಿಲಿಕುಲೆನ ಅಬ್ಬರದ ನಲಿಕೆ

Suddi Udaya

ಆಳ್ವಾಸ್‌ನಲ್ಲಿ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವ

Suddi Udaya

ಬಂದಾರು: ಆದಿಪೂಜಿತ ಸಿದ್ದಿವಿನಾಯಕ ಕನ್ನಡ ಭಕ್ತಿಗೀತೆ ಆಡಿಯೋ ಬಿಡುಗಡೆ

Suddi Udaya

ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದಿಂದ
ಮಕ್ಕಳ ಶಿಕ್ಷಣಕ್ಕಾಗಿ ರೂ. 2೦ ಸಾವಿರ ನೆರವು

Suddi Udaya
error: Content is protected !!