September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಕುಣಿತ ಭಜನ ತರಬೇತುದಾರರಿಂದ ಕೊಡಗು ಜಿಲ್ಲೆಯಲ್ಲಿ ಕುಣಿತ ಭಜನಾ ತರಬೇತಿ ಪ್ರಾರಂಭ

ಬೆಳ್ತಂಗಡಿ : ಶ್ರೀ‌ ಮಂಜುನಾಥೇಶ್ವರ ಭಜನಾ ಪರಿಷತ್‌ ಧರ್ಮಸ್ಥಳ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಕೊಡಗು ಜಿಲ್ಲೆಯ‌ ಸಹಯೋಗದಲ್ಲಿ ಕುಶಾಲನಗರದಲ್ಲಿ‌ ಕುಣಿತ‌ಭಜನಾ ತರಬೇತಿ‌ ಕಾರ್ಯಾಗಾರ ಅ.26ರಂದು ಆರಂಭಿಸಲಾಯಿತು.

ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಇವರ ಮಾರ್ಗದರ್ಶನದಲ್ಲಿ ಮತ್ತು ರಂಗ ಭಾರತಿ ಕಲಾಮಂದಿರಮ್ ಕುಶಾಲನಗರ ಹಾಗೂ ಬಾಲ‌ಗೋಕುಲ ಬಳಗ‌ ಹಾಗೂ ಸಮಸ್ತ ಭಜನಾ ಮಂಡಳಿಗಳ‌ ಸದಸ್ಯರು ಪಾಲ್ಗೊಂಡರು.


ಈ‌ ತರಬೇತಿಯಲ್ಲಿ ಕುಣಿತ ಭಜನಾ ತಂಡದ ಅಧ್ಯಕ್ಷರು ರಾಜ್ಯಮಟ್ಟದ ಕುಣಿತ ಭಜನಾ ತರಬೇತುದಾರರಾದ‌ ಸಂದೇಶ್ ಮದ್ದಡ್ಕ ತರಬೇತಿಯನ್ನು ನೀಡಿದರು. ಸಹ ತರಬೇತುದಾರರಾದ ಆಕಾಶ್ ಗುರುವಾಯನಕೆರೆ , ಮಂಜುನಾಥೇಶ್ವರ ಭಜನಾ ಪರಿಷತ್ ಬೆಳ್ತಂಗಡಿ ಲಾಯಿಲಾ ಇದರ ಕಾರ್ಯದರ್ಶಿಯವರಾದ ಅಖಿಲೇಶ್ ಮತ್ತು ಕೀರ್ತನ್ ಮಾವಿನಕಟ್ಟೆ ಮತ್ತು ಮೇಲ್ವಿಚಾರಕ ನಾಗರಾಜ್ ಉಪಸ್ಥಿತರಿದ್ದರು.

Related posts

ವೇಣೂರು: ತುಂಗಮ್ಮ ಪೂಜಾರಿ ನಿಧನ

Suddi Udaya

ಕನ್ಯಾಡಿ ಸೇವಾಧಾಮಕ್ಕೆ ಬೆಂಗಳೂರಿನ ಕೆಮ್ ಟ್ರೆಂಡ್ ಕಂಪೆನಿಯ ಭೇಟಿ

Suddi Udaya

ಯುವವಾಹಿನಿ ವೇಣೂರು ಘಟಕದ ಸೇವಾ ಯೋಜನೆ ವತಿಯಿಂದ ಸಹಾಯಧನ ಹಸ್ತಾಂತರ

Suddi Udaya

ಹೊಸಂಗಡಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಕನ್ಯಾಡಿ ಶ್ರೀ ರಾಮ ಕ್ಷೇತ್ರಕ್ಕೆ ಮಾಜಿ ಸಚಿವ ನಾಗರಾಜ ಶೆಟ್ಟಿ ಭೇಟಿ

Suddi Udaya

ಧರ್ಮಸ್ಥಳ ಪ್ರಕರಣ: ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿದ ಖ್ಯಾತ ವಕೀಲ ದೊರೆರಾಜು

Suddi Udaya
error: Content is protected !!