22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನ.9: ಬೆಳ್ತಂಗಡಿ ರೋಟರಿ ಕ್ಲಬ್‌ನಿಂದ ದೇಸಿ ನಾಯಿ ಮತ್ತು ಬೆಕ್ಕಿನ ಮರಿಗಳ ಉಚಿತ ದತ್ತು ಕೊಡುವ ಶಿಬಿರ

ಬೆಳ್ತಂಗಡಿ: ಮಂಗಳೂರಿನ ಶಕ್ತಿನಗರದಲ್ಲಿರುವ ಎನಿಮಲ್ ಕೇರ್ ಟ್ರಸ್ಟ್ ಬೆಳ್ತಂಗಡಿ ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ನ. 9ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಉಜಿರೆ ಬಸ್‌ ಸ್ಟ್ಯಾಂಡ್ ಬಳಿ ಸಂಧ್ಯಾ ಟ್ರೇಡರ್ಸ ಎದುರು, ದೇಸಿ ನಾಯಿ ಮತ್ತು ಬೆಕ್ಕಿನ ಮರಿಗಳ ಉಚಿತ ದತ್ತು ಕೊಡುವ ಶಿಬಿರ ಏರ್ಪಡಿಸಿದೆ.

ಎಲ್ಲಾ ಮರಿಗಳಿಗೆ ರೋಗ ನಿರೋಧಕ ಚುಚ್ಚು ಮದ್ದುಗಳನ್ನು ನೀಡಲಾಗಿರುತ್ತದೆ. ಎನಿಮಲ್ ಕೇರ್ ಟ್ರಸ್ಟನವರು ಆದಷ್ಟು ಸಂತಾನವಾಗದಂತೆ ಚಿಕಿತ್ಸೆ ಮಾಡಿದ ಬೆಕ್ಕು/ನಾಯಿ ಮರಿಗಳನ್ನು ತರುವ ಭರವಸೆ ಇತ್ತಿದ್ದಾರೆ. ಒಂದು ವೇಳೆ ಶಿಬಿರಕ್ಕೆ ತಂದಿರುವ ಬೆಕ್ಕು/ ನಾಯಿ ಮರಿಗಳಿಗೆ ಸಂತಾನವಾಗದಂತೆ ಚಿಕಿತ್ಸೆ ಆಗಿರದಿದ್ದರೆ, ಅವರ ಕೇಂದ್ರಕ್ಕೆ ಅವುಗಳನ್ನು ತಂದಲ್ಲಿ, ಉಚಿತವಾಗಿ ಮಾಡಿಕೊಡಲಾಗುವುದು. ಆರ್ಥಿಕವಾಗಿ ದುರ್ಬಲರು ಇದರ ಪ್ರಯೋಜನ ಪಡೆಯಬಹುದು.
ಶಿಬಿರದಲ್ಲಿ ಬೆಕ್ಕು/ನಾಯಿ ಮರಿಗಳನ್ನು ಉಚಿತವಾಗಿ ಪಡೆದುಕೊಳ್ಳ ಬಯಸುವವರು ತಮ್ಮ ವಿಳಾಸದ ನಕಲು ಪತ್ರ ಕೊಡಬೇಕು., ಪಡೆದುಕೊಳ್ಳುವ ಬೆಕ್ಕು/ನಾಯಿ ಮರಿಗಳಿಗೆ ಸಂತಾನವಾಗದAತೆ ಚಿಕಿತ್ಸೆ ಆಗಿರದಿದ್ದರೆ ಅದನ್ನು ಮಾಡಿಸಬೇಕು, ತಿಂಗಳಿಗೊಮ್ಮೆ ಅವುಗಳ ಆರೋಗ್ಯ ವರದಿ ನೀಡಬೇಕು.


ಹೆಚ್ಚಿನ ವಿವರಗಳಿಗೆ ಎನಿಮಲ್ ಕೇರ್ ಟ್ರಸ್ಟ ಸಂಖ್ಯೆ 9902253064 ಸಂಪರ್ಕಿಸಬಹುದು ಎಂದು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪ್ರೊ. ಪ್ರಕಾಶ ಪ್ರಭುರವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Related posts

ಲಾಯಿಲ: ಗುರಿಂಗಾನದಲ್ಲಿ ಅಪಾಯ ಮಟ್ಟದಲ್ಲಿ ನದಿ ನೀರು,: ಸುತ್ತಮುತ್ತಲ ಮನೆಗಳಿಗೆ ತುಂಬಿದ ನೀರು, ಸ್ಥಳಿಯ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ

Suddi Udaya

ಉಜಿರೆ ಸಂತ ಅಂತೋನಿ ಚರ್ಚ್ ಇದರ ಮುಂದಾಳತ್ವದಲ್ಲಿ ಹೊಸ ಮನೆಯ ಆಶೀರ್ವಚನ ಮತ್ತು ಹಸ್ತಾಂತರ ಕಾರ್ಯಕ್ರಮ

Suddi Udaya

ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಶ್ರೀ ಶಾಸ್ತಾರ ದೇವರ ಪುನಃಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಹೊರೆ ಕಾಣಿಕೆ ಹಾಗೂ ಪಲ್ಲಕ್ಕಿ ಸಮರ್ಪಣೆ

Suddi Udaya

ಅಗ್ನಿವೀರ್ ಜಿಡಿ ಹುದ್ದೆಗೆ ಆಯ್ಕೆಯಾದ ಗುರುಕಿರಣ್ ರವರಿಗೆ ಶ್ರೀ ರಾಮ್ ಫ್ರೆಂಡ್ಸ್ ಬಾಜಾರು ವತಿಯಿಂದ ಸನ್ಮಾನ

Suddi Udaya

ಎನ್.ಡಿ.ಪಿ.ಎಸ್ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಒಟ್ಟು 11 ಕೆಜಿ 365 ಗ್ರಾಂ ಗಾಂಜಾ ಹಾಗೂ 42.57 ಗ್ರಾಂ ಎಂ.ಡಿ.ಎಂ.ಎ ಮಾದಕ ವಸ್ತುಗಳ ವಿಲೇವಾರಿ

Suddi Udaya

ಸ್ಪಂದನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಚ್ಚಾಡಿ ಸ.ಕಿ.ಪ್ರಾ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್, ನೋಟ್ ಪುಸ್ತಕ ವಿತರಣೆ

Suddi Udaya
error: Content is protected !!