July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನ.9: ಬೆಳ್ತಂಗಡಿ ರೋಟರಿ ಕ್ಲಬ್‌ನಿಂದ ದೇಸಿ ನಾಯಿ ಮತ್ತು ಬೆಕ್ಕಿನ ಮರಿಗಳ ಉಚಿತ ದತ್ತು ಕೊಡುವ ಶಿಬಿರ

ಬೆಳ್ತಂಗಡಿ: ಮಂಗಳೂರಿನ ಶಕ್ತಿನಗರದಲ್ಲಿರುವ ಎನಿಮಲ್ ಕೇರ್ ಟ್ರಸ್ಟ್ ಬೆಳ್ತಂಗಡಿ ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ನ. 9ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಉಜಿರೆ ಬಸ್‌ ಸ್ಟ್ಯಾಂಡ್ ಬಳಿ ಸಂಧ್ಯಾ ಟ್ರೇಡರ್ಸ ಎದುರು, ದೇಸಿ ನಾಯಿ ಮತ್ತು ಬೆಕ್ಕಿನ ಮರಿಗಳ ಉಚಿತ ದತ್ತು ಕೊಡುವ ಶಿಬಿರ ಏರ್ಪಡಿಸಿದೆ.

ಎಲ್ಲಾ ಮರಿಗಳಿಗೆ ರೋಗ ನಿರೋಧಕ ಚುಚ್ಚು ಮದ್ದುಗಳನ್ನು ನೀಡಲಾಗಿರುತ್ತದೆ. ಎನಿಮಲ್ ಕೇರ್ ಟ್ರಸ್ಟನವರು ಆದಷ್ಟು ಸಂತಾನವಾಗದಂತೆ ಚಿಕಿತ್ಸೆ ಮಾಡಿದ ಬೆಕ್ಕು/ನಾಯಿ ಮರಿಗಳನ್ನು ತರುವ ಭರವಸೆ ಇತ್ತಿದ್ದಾರೆ. ಒಂದು ವೇಳೆ ಶಿಬಿರಕ್ಕೆ ತಂದಿರುವ ಬೆಕ್ಕು/ ನಾಯಿ ಮರಿಗಳಿಗೆ ಸಂತಾನವಾಗದಂತೆ ಚಿಕಿತ್ಸೆ ಆಗಿರದಿದ್ದರೆ, ಅವರ ಕೇಂದ್ರಕ್ಕೆ ಅವುಗಳನ್ನು ತಂದಲ್ಲಿ, ಉಚಿತವಾಗಿ ಮಾಡಿಕೊಡಲಾಗುವುದು. ಆರ್ಥಿಕವಾಗಿ ದುರ್ಬಲರು ಇದರ ಪ್ರಯೋಜನ ಪಡೆಯಬಹುದು.
ಶಿಬಿರದಲ್ಲಿ ಬೆಕ್ಕು/ನಾಯಿ ಮರಿಗಳನ್ನು ಉಚಿತವಾಗಿ ಪಡೆದುಕೊಳ್ಳ ಬಯಸುವವರು ತಮ್ಮ ವಿಳಾಸದ ನಕಲು ಪತ್ರ ಕೊಡಬೇಕು., ಪಡೆದುಕೊಳ್ಳುವ ಬೆಕ್ಕು/ನಾಯಿ ಮರಿಗಳಿಗೆ ಸಂತಾನವಾಗದAತೆ ಚಿಕಿತ್ಸೆ ಆಗಿರದಿದ್ದರೆ ಅದನ್ನು ಮಾಡಿಸಬೇಕು, ತಿಂಗಳಿಗೊಮ್ಮೆ ಅವುಗಳ ಆರೋಗ್ಯ ವರದಿ ನೀಡಬೇಕು.


ಹೆಚ್ಚಿನ ವಿವರಗಳಿಗೆ ಎನಿಮಲ್ ಕೇರ್ ಟ್ರಸ್ಟ ಸಂಖ್ಯೆ 9902253064 ಸಂಪರ್ಕಿಸಬಹುದು ಎಂದು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪ್ರೊ. ಪ್ರಕಾಶ ಪ್ರಭುರವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Related posts

ರೋಟರಿ ಕ್ಲಬ್ ಬೆಳ್ತಂಗಡಿ : ರಾಷ್ಟ್ರೀಯ ರೈತರ ದಿನ ಆಚರಣೆ

Suddi Udaya

ಗುರುವಾಯನಕೆರೆಯಲ್ಲಿ ಬೃಹತ್‌ ರಕ್ತದಾನ ಶಿಬಿರ

Suddi Udaya

ಉಜಿರೆ ಎಸ್ ಡಿ ಎಮ್ ಪಾಲಿಟೆಕ್ನಿಕ್ ನ ಕಂಪ್ಯೂಟರ್ ಸೈನ್ಸ್ ವಿಭಾಗದ ವತಿಯಿಂದ ಟೆಕ್ ವ್ಯುಹ್ ಕಾರ್ಯಕ್ರಮ

Suddi Udaya

ಕಿರು ನಾಟಕ ಸ್ಪರ್ಧೆ: ಬೆಳ್ತಂಗಡಿ ಸ.ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ

Suddi Udaya

ಜೆಸಿಐ ಕೊಕ್ಕಡ ಕಪಿಲಾ ಘಟಕ ಮತ್ತು ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ನೇತೃತ್ವದಲ್ಲಿ ‘ಚಿಣ್ಣರ ಲೋಕ’ ಶಿಬಿರ ಸಮಾರೋಪ

Suddi Udaya

ತಾಲೂಕಿನಲ್ಲಿ ಮಾಜಿ ಸೈನಿಕರ ಸಂಘ ಬೆಳ್ತಂಗಡಿ ಇದಕ್ಕೆ ಪರ್ಯಾಯವಾದ ಯಾವುದೇ ಮಾಜಿ ಸೈನಿಕರ ಸಂಘವಿರುವುದಿಲ್ಲ: ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಮಹಮ್ಮದ್ ರಫೀ ಸ್ವಷ್ಟನೆ

Suddi Udaya
error: Content is protected !!