July 23, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮಿತ್ತಬಾಗಿಲು ವಿಭಾಷ್ ಮತ್ತು ವಿಭಾ – ಕರಾಟೆ ಅಖಾಡದಲ್ಲಿ ಚಾಂಪಿಯನ್‌ಶಿಪ್‌ ದ್ವಿರತ್ನ ಸಾಧನೆ

ಬೆಳ್ತಂಗಡಿ: ಟೆಂಪಲ್ ಆಫ್ ಮಾರ್ಷಲ್ ಆರ್ಟ್ಸ್ ಮತ್ತು ಒಕಿನಾವನ್ ಶೋಟೋಕನ್ ಕರಾಟೆ-ಡೋ ಇಂಟರ್ನ್ಯಾಷನಲ್ ಅವರ ಆಶ್ರಯದಲ್ಲಿ ನಡೆದ 4ನೇ ದಕ್ಷಿಣ ಭಾರತ ಓಪನ್ ಕರಾಟೆ ಚಾಂಪಿಯನ್‌ಶಿಪ್ – 2025 ಸ್ಪರ್ಧೆ, ನ.9ರಂದು ಜೆ.ಪಿ.ನಗರದ ಟ್ರಾನ್ಸೆಂಡ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್, ಜೆ. ಪಿ ನಗರ, ಬೆಂಗಳೂರು ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು.

ಈ ಸ್ಪರ್ಧೆಯಲ್ಲಿ ಜೆ.ಪಿ.ನಗರದ ಯಲೆಚೆನಹಳ್ಳಿಯ ಸನ್ ಜ್ಯುಪಿಟರ್ ಇಂಟರ್‌ನ್ಯಾಷನಲ್ ಶಾಲೆಯ 3ನೇ ತರಗತಿ ವಿದ್ಯಾರ್ಥಿಗಳು ಎ. ವಿಭಾಷ್ ವಿನಯಚಂದ್ರ ಮತ್ತು ಎ. ವಿಭಾ ವಿನಯಚಂದ್ರ (ಹಳದಿ ಬೆಲ್ಟ್, ಕಿರಿಯ ವಿಭಾಗ) ಅವರು ಭಾಗವಹಿಸಿ, ತಲಾ ಎರಡು ಟ್ರೋಫಿಗಳನ್ನು ಗೆದ್ದು ತಮ್ಮ ಅಪಾರ ಪ್ರತಿಭೆ ಮತ್ತು ಕ್ರೀಡಾ ಕೌಶಲ್ಯವನ್ನು ಪ್ರದರ್ಶಿಸಿದರು.

ಮಿತ್ತಬಾಗಿಲು ಗ್ರಾಮದ ಆಚಾರಿಬೆಟ್ಟು ಮನೆಯ ಈ ಅವಳಿ ಮಕ್ಕಳು ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಇವರ ಪೋಷಕರು ವಿನಯಚಂದ್ರ (ವಕೀಲರು, ಕರ್ನಾಟಕ ಹೈಕೋರ್ಟ್) ಮತ್ತು ಶ್ರೀಮತಿ ಅಮಿತಾ. ಈ ಇಬ್ಬರ ಅದ್ಭುತ ಪ್ರದರ್ಶನವು ಸ್ಪರ್ಧೆಯ ಪ್ರಮುಖ ಆಕರ್ಷಣೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಇವರ ತರಬೇತಿದಾರರಾದ ರಾಜೇಂದ್ರ ಬಾಬು ಮತ್ತು ಗೀತಾ ಅವರು ಮಾರ್ಗದರ್ಶನ ನೀಡಿದರು.

Related posts

72ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಅಂಗವಾಗಿ ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನಡೆಯುವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕಳೆ ತೆಗೆಯುವ ಯಂತ್ರಕ್ಕೆ ಸಿಲುಕಿ ಎದೆಗೆ ಬಡಿದ ರಬ್ಬರ್ ಕಪ್‌ನ ಸರಿಗೆ: ಕಾಯರ್ತಡ್ಕ ನಿವಾಸಿ ಕೊರಗಪ್ಪ ಗೌಡ ಸಾವು

Suddi Udaya

ಬೆಂಗಳೂರು ಕಾವ್ಯಶ್ರೀ ಸೇವಾ ಟ್ರಸ್ಟ್” ವತಿಯಿಂದ ಬಜಿರೆ ಶಾಲೆಯ ಇಬ್ಬರು ಅತಿಥಿ ಶಿಕ್ಷಕಿಯರಿಗೆ ಅತ್ಯುತ್ತಮ ಅತಿಥಿ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ

Suddi Udaya

ಕಾಯರ್ತಡ್ಕ : ಪುತ್ಯೆ ನಿವಾಸಿ ಮೋಹನ ಗೌಡ ಹೃದಯಾಘಾತದಿಂದ ನಿಧನ

Suddi Udaya

ಭರತನಾಟ್ಯ ಶಾಸ್ತ್ರೀಯ ನೃತ್ಯದ ಜೂನಿಯರ್ ಗ್ರೇಡ್ ಪರೀಕ್ಷೆ: ಮಡಂತ್ಯಾರು ನಿಯತಿ ನೃತ್ಯ ನಿಕೇತನ ವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

Suddi Udaya

ಮೇಲಂತಬೆಟ್ಟು: ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ವರ್ಷಾವಧಿ ಜಾತ್ರೆ

Suddi Udaya
error: Content is protected !!