ಗೇರುಕಟ್ಟೆ: ದ್ವಿತೀಯ ಸಮೂಹ ಸಂಪನ್ಮೂಲ ಕೇಂದ್ರ ಗುರುವಾಯನಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಳ ಇವರ ಆಶ್ರಯದಲ್ಲಿ ನಡೆದ ಪ್ರತಿಭಾ ಕಾರಂಜಿ 2025 ಕಾರ್ಯಕ್ರಮ ಹಿರಿಯ ಪ್ರಾಥಮಿಕ ಶಾಲೆ ನಾಳ ಇಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ರಕ್ತೇಶ್ವರಿಪದವು ಇಲ್ಲಿಯ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ ಲಭಿಸಿದೆ. ಕಿರಿಯರ ವಿಭಾಗದ ಧಾರ್ಮಿಕ ಪಠಣ – ಸಂಸ್ಕೃತ -ಗೌತಮಿ ಕೆ ಗೌಡ 4ನೇ ಪ್ರಥಮ, ಕ್ಲೇ ಮೊಡೆಲಿಂಗ್- ಮನೀಷ್ ಕೆ ಗೌಡ 3 ನೇ ಪ್ರಥಮ, ಕಥೆ ಹೇಳುವುದು -ಶಾರ್ವಿ ಕೆ 4ನೇ- ಪ್ರಥಮ, ವರ್ಷ 4ನೇ -ಅಭಿನಯ ಗೀತೆ ತೃತೀಯ ಮತ್ತು ಆಶುಭಾಷಣ ತೃತೀಯ,
ನಿಧಿ ಎಂ 4ನೇ- ದೇಶ ಭಕ್ತಿ ಗೀತೆ ತೃತೀಯ ಬಹುಮಾನವನ್ನು ಪಡೆದಿರುತ್ತಾರೆ.

ಹಿರಿಯ ವಿಭಾಗದ ವೀಕ್ಷಾ ಬಿ ಕೆ 5ನೇ ತರಗತಿ ಕಥೆ ಹೇಳುವಿಕೆಯಲ್ಲಿ ಪ್ರಥಮ ಮತ್ತು ಅಭಿನಯ ಗೀತೆಯಲ್ಲಿ ದ್ವಿತೀಯ,
ಕೀರ್ತಿ 5ನೇ ಕನ್ನಡ ಕಂಠ ಪಾಠದಲ್ಲಿ ದ್ವಿತೀಯ ಬಹುಮಾನವನ್ನು ಪಡೆದಿರುತ್ತಾರೆ. ಇವರಿಗೆ ಶಾಲಾ ಮುಖ್ಯ ಶಿಕ್ಷಕರಾದ ಚೈತ್ರಪ್ರಭಾ ಶ್ರೀಶಾಂ ಮತ್ತು ಸಹ ಶಿಕ್ಷಕಿ ಲಾವಣ್ಯ ಇವರು ಮಾರ್ಗದರ್ಶನ ನೀಡಿರುತ್ತಾರೆ.ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಕೆ ಕುಶಾಲಪ್ಪ ಗೌಡ ಹಾಗೂ ಎಸ್.ಡಿ.ಎಂ.ಸಿ ಪೋಷಕರು ಭಾಗವಹಿಸಿದ್ದರು..













