23.7 C
ಪುತ್ತೂರು, ಬೆಳ್ತಂಗಡಿ
April 24, 2026
Uncategorized

ನಡ ಕುತ್ರೋಟ್ಟು ಬಳಿ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿ: ಬಾಲಕ ಮೃತ್ಯು,

ನಡ :ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿ ಬಾಲಕ ಸಾವನ್ನಪ್ಪಿರುವ ಘಟನೆ ನಡ ಗ್ರಾಮದ ಹೊಕ್ಕಿಲ ಕುತ್ರೊಟ್ಟು
ನರ್ಜೆ ಕ್ರಾಸ್ ಬಳಿ ನ. 16 ರಂದು ರಾತ್ರಿ ನಡೆದಿದೆ.

ನಾವೂರು ಗ್ರಾಮದ ಗಣೇಶ್ ಎಂಬವರು ಪುತ್ರ
ತನ್ವಿತ್ (12ವ) ಮೃತಪಟ್ಟ ಬಾಲಕ
ನಾವೂರು ಕುಂಡಡ್ಕ ಕಡೆಯಿಂದ ಶಶಿ ಎಂಬವರ ರಿಕ್ಷಾದಲ್ಲಿ
ಧರ್ಮಸ್ಥಳ ಲಕ್ಷ ದೀಪೋತ್ಸವಕ್ಕೆ ಕುತ್ರೋಟ್ಟು – ಟಿ.ಬಿ ಕ್ರಾಸ್ ಮೂಲಕ ಉಜಿರೆ ಹಳೆ ಪೇಟೆಗೆ ಹತ್ತಿರ ರಸ್ತೆಯಲ್ಲಿ ಬರುತ್ತಿದ್ದ ಸಮಯ ಕುತ್ರೋಟ್ಟು ಬಳಿ ಘಟನೆ ನಡೆದಿದೆ.
ಬಾಲಕ ಸೇರಿದಂತೆ ಆಟೋದಲ್ಲಿ ಕೆಲ ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ . ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿದೆ. ಆಟೋ ಪಲ್ಟಿಯಾಗಿ ಪ ರಿಣಾಮ ಬಾಲಕನ ತಲೆಯ ಭಾಗಕ್ಕೆ ಗಂಭೀರ ಗಾಯವಾಗಿದ್ದ ಬಾಲಕನನ್ನು ತಕ್ಷಣ ಸ್ಥಳೀಯ ನಿವಾಸಿಗಳ ಸಹಕಾರ ದಲ್ಲಿ. ಆಸ್ಪತ್ರೆಗೆ ಕರೆದುಕೊಂಡು ಬಂದರೂ, ಪ್ರಯೋಜನ ವಾಗದೆ ಬಾಲಕ ಮೃತಪಟ್ಟನೆನ್ನಲಾಗಿದೆ. ಆಟೋದಲ್ಲಿದ್ದ ಇನ್ನುಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Related posts

ಉಜಿರೆ ಟೆಕ್ಸ್ ಟೈಲ್ಸ್ ಉದ್ಯಮಿಯಿಂದ ಲೈಂಗಿಕ ದೌರ್ಜನ್ಯ ಆರೋಪ: ಕೆಲಸಕ್ಕೆ ಬಂದ ಮಹಿಳೆಯಿಂದ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲು

Suddi Udaya

ಬೆಳಾಲು : ವಿಶ್ವಕರ್ಮ ಸಂಘದ ಪೂರ್ವಭಾವಿ ಸಭೆ ಹಾಗೂ ನೂತನ ಸಮಿತಿ ರಚನೆ

Suddi Udaya

ಗುರುವಾಯನಕೆರೆ ಅರೆಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ಕ್ಷೇತ್ರಕ್ಕೆಖ್ಯಾತ ಉದ್ಯಮಿಗಳಾದ ದಿನೇಶ್ ಅಮರನಾಥ ಶೆಟ್ಟಿ ಪೂನಾ ಭೇಟಿ

Suddi Udaya

ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮಕ್ಕೆ ಚಾಲನೆ

Suddi Udaya

ಶ್ರೀ ಗುರುದೇವಾ ದತ್ತಾಂಜನೆಯ ಭಜನೆ ಸಮಿತಿಯಿಂದ ಸಮಾಜ ಮುಖಿ ಕಾರ್ಯ: ಕರಂಬಾರು ಅಂಗನವಾಡಿ ಕೇಂದ್ರಕ್ಕೆ ನೀರಿನ ಟ್ಯಾಂಕ್ ಹಸ್ತಾಂತರ

Suddi Udaya

ಅರಸಿನಮಕ್ಕಿ ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya
error: Content is protected !!