23.5 C
ಪುತ್ತೂರು, ಬೆಳ್ತಂಗಡಿ
June 8, 2026
ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಎಕ್ಸೆಲ್ ಕಾಲೇಜು ಭರವಸೆಯ ಪ್ರತೀಕ, ಶಕ್ತಿಯ ಮೂಲ,ಭವಿಷ್ಯದ ಕೇಂದ್ರ ಶೈಕ್ಷಣಿಕ ಕ್ಷೇತ್ರದ ಅದ್ಬುತ ಯುವ ಸಾಧಕ ಸುಮಂತ್ ಕುಮಾರ್ ರವರ ಇಚ್ಚಾಶಕ್ತಿ ಮತ್ತು ಬದ್ಧತೆಯನ್ನು ಮೆಚ್ಚುವಂತದ್ದು ಎಕ್ಸೆಲ್ ಕಾಲೇಜಿನ ಶೈಕ್ಷಣಿಕ ಸಾಧನೆಯನ್ನು ಕೊಂಡಾಡಿದ ಖ್ಯಾತ ಚಿತ್ರನಟ ರಮೇಶ್ ಅರವಿಂದ್

ಬೆಳ್ತಂಗಡಿ: ಎಕ್ಸೆಲ್ ಎಂದರೆ ಭರವಸೆ,ಎಕ್ಸೆಲ್ ಎಂದರೆ ಸ್ಪೂರ್ತಿ,ಎಕ್ಸೆಲ್ ಎಂದರೆ ಶಕ್ತಿ,ಎಕ್ಸೆಲ್ ಎಂದರೆ ಭವಿಷ್ಯ, ನಮ್ಮಲ್ಲಿರುವ ಶಕ್ತಿಯನ್ನು ಹೊರಗಿನ ಪ್ರಪಂಚಕ್ಕೆ ತೋರಿಸಬೇಕು,ಆವಾಗ ಮಾತ್ರ ಜಗತ್ತು ಸುಂದರವಾಗಿ ಕಾಣುತ್ತದೆ ಎಂದು ಖ್ಯಾತ ಚಿತ್ರನಟ ರಮೇಶ್ ಅರವಿಂದ ಅವರು ಎಕ್ಸೆಲ್ ಕಾಲೇಜಿನ “ಎಕ್ಸೆಲ್ ಪರ್ಬ” ಸಮಾರಂಭದಲ್ಲಿ ನ.28 ರಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ನಮ್ಮನ್ನ ನಾವು ಒಂದು ಒಳ್ಳೆಯ ಉದ್ದೇಶಕ್ಕೆ,ಒಳ್ಳೆಯ ಕೆಲಸಕ್ಕೆ ಉಪಯೋಗಿಸಬೇಕು. ನಾವು ಮಾಡುವ ಪ್ರತಿಯೊಂದು ಕೆಲಸವನ್ನು ದೇವರು ನೋಡುತ್ತಾ ಇರುತ್ತಾರೆ. ಹಾಗಾಗಿ ನಾವು ಮಾಡುವ ಕೆಲಸ ಸರಿಯಾಗಿ ಮಾಡಬೇಕು.ಯಾವುದೇ ಕಲೆಯನ್ನು ತೆಗೆದುಕೊಂಡರು,ಯಾವುದೇ ಜಾಗದಲ್ಲಿದ್ದರು ಅದರಲ್ಲಿ ವಿಶೇಷವಾಗಿ ಸಾಧನೆ ಮಾಡಬೇಕು.

ನಮ್ಮಲ್ಲಿ ನಾವು ಮೌಲ್ಯಯುತವನ್ನು ತೊಡಗಿಸಿಕೊಳ್ಳಬೇಕು.ನಮ್ಮ ಬಗ್ಗೆ ನಾವು ಅನುಮಾನ ಪಡಬಾರದು, ಯಾರಿಗೂ, ಏನೇ ಆದರೂ ಹೆದರಬಾರದು ಆವಾಗ ಮಾತ್ರ ನಾವು ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ.ಜೀವನದಲ್ಲಿ ನಗು ನಗುತ್ತಾ ಇರಬೇಕು,ಖುಷಿ ಖುಷಿಯಿಂದ ಇರಬೇಕು, ಭಯವನ್ನು ಮೊದಲು ತೆಗೆದು ಹಾಕಿದಾಗ ಯಶಸ್ವಿನ ಶಿಖರವೇರಬಹುದು ಎಂದು ರಮೇಶ್ ಅರವಿಂದ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಎಕ್ಸೆಲ್ ಸುಂದರವಾದ ವಿದ್ಯಾಕೇಂದ್ರ, ಇಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವವರು ನಿಜವಾಗಿಯೂ ಭಾಗ್ಯವಂತರು.ನಮ್ಮ ಭವಿಷ್ಯ ನಮ್ಮ ಕೈಯಲೇ ಇದೇ ಹೊರತು ಬೇರಲ್ಲೂ ಇಲ್ಲಾ. ವಿದ್ಯಾರ್ಥಿಗಳು ಉತ್ತಮವಾಗಿ ಕಲಿತು ದೇಶಕ್ಕೆ ಶಕ್ತಿಯಾಗಬೇಕು‌ ಎಂದರು.ಸುಮಂತ್ ಕುಮಾರ್ ಒರ್ವ ಶೈಕ್ಷಣಿಕ ಕ್ಷೇತ್ರದ ಅದ್ಬುತ ಯುವ ಸಾಧಕ.ಅವರ ತ್ಯಾಗ,ಬದ್ದತೆ,ಇಚ್ಛಾಶಕ್ತಿಯಿಂದ ಇಂದು ಎಕ್ಸೆಲ್ ವಿಜೃಂಬಿಸುತ್ತಿದೆ ಎಂದರು.

Related posts

ಕಕ್ಯಪದವು ಎಲ್‌ಸಿಆರ್ ವಿದ್ಯಾಸಂಸ್ಥೆ: ಕಾಲೇಜು ವಿಭಾಗದಲ್ಲಿ ವಾಣಿಜ್ಯ ಚಟುವಟಕೆ

Suddi Udaya

ವೇಣೂರು: ನೂರುಲ್ ಹುಧಾ ಮಸೀದಿಯ ಸಿಬ್ಬಂದಿ ನಝೀರ್ ಹನೀಫಿರವರಿಗೆ ಉಮ್ರಾ ಯಾತ್ರೆಗೆ ಬಿಳ್ಕೋಡುಗೆ

Suddi Udaya

ಉಜಿರೆ :ರೋಟರಿ ಕ್ಲಬ್ ನಲ್ಲಿ ಇಫ್ತಾರ್ ಆಚರಣೆ

Suddi Udaya

ಉಜಿರೆ ಎಸ್.ಡಿ.ಎಂ ಕಾಲೇಜು: ಸಾಧಕರ ದಿನ-229 ವಿದ್ಯಾರ್ಥಿ ಸಾಧಕರಿಗೆ ಪ್ರಶಸ್ತಿ ಪತ್ರ ವಿತರಣೆ

Suddi Udaya

ಲಾಯಿಲ ಶ್ರೀ ವಿಶ್ವಕರ್ಮಾಭ್ಯುದಯ ಸಭಾ ಹಾಗೂ ಶ್ರೀ ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘದಿಂದ ನೂತನ ಸಂಸದ ಕ್ಯಾ| ಬ್ರಿಜೇಶ್ ಚೌಟ ರವರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಬಡಗಕಾರಂದೂರು: ಬಾವಲಿಗುಂಡಿ ಕಿಂಡಿ ಅಣೆಕಟ್ಟು ಬಳಿ ರೂ.3 ಕೋಟಿ ವೆಚ್ಚದ ಕಾಲುವೆ ನಿರ್ಮಾಣಕ್ಕೆ ಭೂಮಿ ಪೂಜೆ

Suddi Udaya
error: Content is protected !!