25.5 C
ಪುತ್ತೂರು, ಬೆಳ್ತಂಗಡಿ
June 8, 2026
ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಎಕ್ಸೆಲ್ ಕಾಲೇಜು ಭರವಸೆಯ ಪ್ರತೀಕ, ಶಕ್ತಿಯ ಮೂಲ,ಭವಿಷ್ಯದ ಕೇಂದ್ರ ಶೈಕ್ಷಣಿಕ ಕ್ಷೇತ್ರದ ಅದ್ಬುತ ಯುವ ಸಾಧಕ ಸುಮಂತ್ ಕುಮಾರ್ ರವರ ಇಚ್ಚಾಶಕ್ತಿ ಮತ್ತು ಬದ್ಧತೆಯನ್ನು ಮೆಚ್ಚುವಂತದ್ದು ಎಕ್ಸೆಲ್ ಕಾಲೇಜಿನ ಶೈಕ್ಷಣಿಕ ಸಾಧನೆಯನ್ನು ಕೊಂಡಾಡಿದ ಖ್ಯಾತ ಚಿತ್ರನಟ ರಮೇಶ್ ಅರವಿಂದ್

ಬೆಳ್ತಂಗಡಿ: ಎಕ್ಸೆಲ್ ಎಂದರೆ ಭರವಸೆ,ಎಕ್ಸೆಲ್ ಎಂದರೆ ಸ್ಪೂರ್ತಿ,ಎಕ್ಸೆಲ್ ಎಂದರೆ ಶಕ್ತಿ,ಎಕ್ಸೆಲ್ ಎಂದರೆ ಭವಿಷ್ಯ, ನಮ್ಮಲ್ಲಿರುವ ಶಕ್ತಿಯನ್ನು ಹೊರಗಿನ ಪ್ರಪಂಚಕ್ಕೆ ತೋರಿಸಬೇಕು,ಆವಾಗ ಮಾತ್ರ ಜಗತ್ತು ಸುಂದರವಾಗಿ ಕಾಣುತ್ತದೆ ಎಂದು ಖ್ಯಾತ ಚಿತ್ರನಟ ರಮೇಶ್ ಅರವಿಂದ ಅವರು ಎಕ್ಸೆಲ್ ಕಾಲೇಜಿನ “ಎಕ್ಸೆಲ್ ಪರ್ಬ” ಸಮಾರಂಭದಲ್ಲಿ ನ.28 ರಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ನಮ್ಮನ್ನ ನಾವು ಒಂದು ಒಳ್ಳೆಯ ಉದ್ದೇಶಕ್ಕೆ,ಒಳ್ಳೆಯ ಕೆಲಸಕ್ಕೆ ಉಪಯೋಗಿಸಬೇಕು. ನಾವು ಮಾಡುವ ಪ್ರತಿಯೊಂದು ಕೆಲಸವನ್ನು ದೇವರು ನೋಡುತ್ತಾ ಇರುತ್ತಾರೆ. ಹಾಗಾಗಿ ನಾವು ಮಾಡುವ ಕೆಲಸ ಸರಿಯಾಗಿ ಮಾಡಬೇಕು.ಯಾವುದೇ ಕಲೆಯನ್ನು ತೆಗೆದುಕೊಂಡರು,ಯಾವುದೇ ಜಾಗದಲ್ಲಿದ್ದರು ಅದರಲ್ಲಿ ವಿಶೇಷವಾಗಿ ಸಾಧನೆ ಮಾಡಬೇಕು.

ನಮ್ಮಲ್ಲಿ ನಾವು ಮೌಲ್ಯಯುತವನ್ನು ತೊಡಗಿಸಿಕೊಳ್ಳಬೇಕು.ನಮ್ಮ ಬಗ್ಗೆ ನಾವು ಅನುಮಾನ ಪಡಬಾರದು, ಯಾರಿಗೂ, ಏನೇ ಆದರೂ ಹೆದರಬಾರದು ಆವಾಗ ಮಾತ್ರ ನಾವು ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ.ಜೀವನದಲ್ಲಿ ನಗು ನಗುತ್ತಾ ಇರಬೇಕು,ಖುಷಿ ಖುಷಿಯಿಂದ ಇರಬೇಕು, ಭಯವನ್ನು ಮೊದಲು ತೆಗೆದು ಹಾಕಿದಾಗ ಯಶಸ್ವಿನ ಶಿಖರವೇರಬಹುದು ಎಂದು ರಮೇಶ್ ಅರವಿಂದ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಎಕ್ಸೆಲ್ ಸುಂದರವಾದ ವಿದ್ಯಾಕೇಂದ್ರ, ಇಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವವರು ನಿಜವಾಗಿಯೂ ಭಾಗ್ಯವಂತರು.ನಮ್ಮ ಭವಿಷ್ಯ ನಮ್ಮ ಕೈಯಲೇ ಇದೇ ಹೊರತು ಬೇರಲ್ಲೂ ಇಲ್ಲಾ. ವಿದ್ಯಾರ್ಥಿಗಳು ಉತ್ತಮವಾಗಿ ಕಲಿತು ದೇಶಕ್ಕೆ ಶಕ್ತಿಯಾಗಬೇಕು‌ ಎಂದರು.ಸುಮಂತ್ ಕುಮಾರ್ ಒರ್ವ ಶೈಕ್ಷಣಿಕ ಕ್ಷೇತ್ರದ ಅದ್ಬುತ ಯುವ ಸಾಧಕ.ಅವರ ತ್ಯಾಗ,ಬದ್ದತೆ,ಇಚ್ಛಾಶಕ್ತಿಯಿಂದ ಇಂದು ಎಕ್ಸೆಲ್ ವಿಜೃಂಬಿಸುತ್ತಿದೆ ಎಂದರು.

Related posts

ಮುಂಡಾಜೆ ಸ.ಉ.ಹಿ.ಪ್ರಾ. ಶಾಲೆಯಲ್ಲಿ ಮಾದಕ ವ್ಯಸನ ಮುಕ್ತ ಹಾಗೂ ಆರೋಗ್ಯ ನೈರ್ಮಲ್ಯದ ಬಗ್ಗೆ ಮಾಹಿತಿ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ರಾಜ್ಯ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾಗಿ ಡಾ. ಕೆ ಜಯಕೀರ್ತಿ ಜೈನ್ , ಉಪಾಧ್ಯಕ್ಷರಾಗಿ ಚಿದಾನಂದ ಎಸ್. ಹೂಗಾರ್ ಅವಿರೋಧ ಆಯ್ಕೆ

Suddi Udaya

ಓಡಿಲ್ನಾಳ ಶಾಲಾ ವಿದ್ಯಾರ್ಥಿಗಳಿಗೆ ನೆರಿಯ ಸ್ಟೇಶನ್ ಇಂಚಾರ್ಜ್ ಪೆಟ್ರೋನೆಟ್ ವತಿಯಿಂದ ಬ್ಯಾಗ್ ಹಾಗೂ ಲೇಖನಿ ಸಾಮಾಗ್ರಿ ವಿತರಣೆ

Suddi Udaya

ರಾಜ್ಯಮಟ್ಟದ ಭಾಷಣ ಸ್ಪರ್ಧೆ: ಪಿಲ್ಯದ ಧನುಶ್ರೀ ಎಸ್. ಕುಲಾಲ್ ಪ್ರಥಮ: ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರಿಂದ ಪ್ರಶಸ್ತಿ ಪ್ರದಾನ

Suddi Udaya

ಗುಂಡೂರಿ: ಸಮೃದ್ದಿ ಗೃಹಪ್ರವೇಶ ಮುಂದೂಡಿಕೆ

Suddi Udaya

ಲಾಯಿಲ ಗ್ರಾಮ ಪಂಚಾಯತ್ ವಾರ್ಡ್ ಸಭೆಯಲ್ಲಿ ಗ್ರಾಮಸ್ಥರ ಆಕ್ರೋಶ

Suddi Udaya
error: Content is protected !!