July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗುರುವಾಯನಕೆರೆ: ಜನ ಮಂಗಲ ಕಾರ್ಯಕ್ರಮದಡಿ ಯು ಶೇಪ್ ವಾಕರ್ ವಿತರಣೆ

ಗುರುವಾಯನಕೆರೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಗುರುವಾಯನಕೆರೆ ಕುದ್ರಡ್ಕ ಕಾರ್ಯಕ್ಷೇತ್ರದ ಪದ್ಮನಾಭ ಗೌಡ ರವರು ಪಾಶ್ವವಾಯು ಅನಾರೋಗ್ಯದಿಂದ ಇರುವುದರಿಂದ ನಡೆದಾಡಲು ಅನುಕೂಲವಾಗುವಂತೆ ಯು ಸೇಫ್ ವಾಕರ್ ರನ್ನು ವಿತರಣೆ ಮಾಡಲಾಯಿತು.

ಯೋಜನಾಧಿಕಾರಿ ಅಶೋಕ ಮಾತನಾಡಿ ಯೋಜನೆಯ ಜನ ಮಂಗಲ ಕಾರ್ಯಕ್ರಮದಡಿ ಅನಾರೋಗ್ಯ ದಿಂದ ಬಳಲುತ್ತಿರುವವರಿಗೆ ಅಶಕ್ತರಿಗೆ ಅನುಕೂಲವಾಗುವಂತೆ ಯೋಜನೆಯಿಂದ ಅನಾರೋಗ್ಯ ದಿಂದ ಮಲಗಿರುವವರಿಗೆ, ವಾಟರ್ ಬೆಡ್, ಅನಾರೋಗ್ಯ ದಿಂದ, ನಡೆದಾಡಲು ಅಸಾಧ್ಯ ಆದವರಿಗೆ ಕುಳಿತಲ್ಲಿಯೇ ಓಡಾಡಲು ಔಟ್ ಸೈಡ್ ವಿಲಚೆರ್, ನಡೆದಾಡಲು ಅಸಾಧ್ಯವಾಗಿರುವ ಶೌಚಾಲಯಕ್ಕೆ ಹೋಗಲು ಮಾತ್ರ ಕಮಾನ ಚೇರ ವಿತ್ ಚೇರ್, ಕಾಲುಗಳಲ್ಲಿ ಸ್ವಲ್ಪ ಬಲವಿದ್ದು ಎರಡು ಕೈ ಗಳಿಂದ ನಡೆದಾಡಲು ಸಾಧ್ಯವಿರುವವರಿಗೆ, ಯು ಶೇಪ್ ವಾಕರ್ ಹಾಗೂ ಸ್ವಲ್ಪಮಟ್ಟಿಗೆ ನಡೆದಾಡಲು ಅಸಕ್ತರಿಗೆ ವಯೋವೃದ್ದರಿಗೆ, ಊರುಗೋಲು ಹಾಗೂ ಕಾಲುಗಳಿಗೆ ಸ್ವಾಧೀನ ಇಲ್ಲದವರಿಗೆ ನಡೆದಾಡಲು ಉಪಕರಣಗಳನ್ನು ಯೋಜನೆಯ ಜನಮಂಗಲ ಕಾರ್ಯಕ್ರಮದಲ್ಲಿ ತಾಲೂಕಿನಲ್ಲಿ ಅನಾರೋಗ್ಯ ಹಾಗೂ ಆಸಕ್ತರಿಗೆ ವಿತರಿಸಲಾಗುವುದು ಎಂದು ಮಾಹಿತಿ ತಿಳಿಸಿದರು.

ಕುದ್ರಡ್ಕ ಒಕ್ಕೂಟದ ಅಧ್ಯಕ್ಷ ವಿಜಯ ಮಡಕ್ಕಿಲ್ಲ, ವಲಯದ ಮೇಲ್ವಿಚಾರಕರು ಕೇಶವ, ಕೃಷಿ ಮೇಲ್ವಿಚಾರಕರು ಕೃಷ್ಣ ಗೌಡ, ಕುದ್ರಡ್ಕ, ಮಚ್ಚಿನ ಸೇವಾಪ್ರತಿನಿಧಿ ಶ್ರೀ ಮತಿ ನಂದಿನಿ, ಹಾಗೂ ಪರಮೇಶ್ವರ್, ಒಕ್ಕೂಟದ ಜೊತೆ ಕಾರ್ಯದರ್ಶಿ ಜಯಂತಿ ಹಾಗೂ ಇತರರು ಉಪಸಿತರಿದ್ದರು.

Related posts

ವೇಣೂರು ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾರಂಭೋತ್ಸವ

Suddi Udaya

ಮಾಜಿ ಶಾಸಕ ವಸಂತ ಬಂಗೇರ ನಿಧನಕ್ಕೆ ಅಯೋಧ್ಯೆಯಲ್ಲಿರುವ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಸಂತಾಪ

Suddi Udaya

ಬುರುಡೆ ಚಿನ್ನಯ್ಯನಿಂದ ಎಸ್ಐಟಿ ಗೆ ದೂರು

Suddi Udaya

ಶ್ರೀ ಧ. ಮಂ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಪರಸ್ಪರ ಪರಿಚಯ ಕಾರ್ಯಕ್ರಮ

Suddi Udaya

ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಸ್ವಯಂಸೇವಕರಿಗೆ ಪ್ರಶಿಕ್ಷಣ ಕಾರ್ಯಾಗಾರ

Suddi Udaya

ಶ್ರೀ ಕೃಷ್ಣ ಭಜನಾ ಮಂದಿರದ ಸಭಾ ಭವನದ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧ.ಗ್ರಾ. ಯೋ. ವತಿಯಿಂದ ರೂ.2ಲಕ್ಷ ಸಹಾಯಧನ

Suddi Udaya
error: Content is protected !!