23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗುರುವಾಯನಕೆರೆ: ಜನ ಮಂಗಲ ಕಾರ್ಯಕ್ರಮದಡಿ ಯು ಶೇಪ್ ವಾಕರ್ ವಿತರಣೆ

ಗುರುವಾಯನಕೆರೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಗುರುವಾಯನಕೆರೆ ಕುದ್ರಡ್ಕ ಕಾರ್ಯಕ್ಷೇತ್ರದ ಪದ್ಮನಾಭ ಗೌಡ ರವರು ಪಾಶ್ವವಾಯು ಅನಾರೋಗ್ಯದಿಂದ ಇರುವುದರಿಂದ ನಡೆದಾಡಲು ಅನುಕೂಲವಾಗುವಂತೆ ಯು ಸೇಫ್ ವಾಕರ್ ರನ್ನು ವಿತರಣೆ ಮಾಡಲಾಯಿತು.

ಯೋಜನಾಧಿಕಾರಿ ಅಶೋಕ ಮಾತನಾಡಿ ಯೋಜನೆಯ ಜನ ಮಂಗಲ ಕಾರ್ಯಕ್ರಮದಡಿ ಅನಾರೋಗ್ಯ ದಿಂದ ಬಳಲುತ್ತಿರುವವರಿಗೆ ಅಶಕ್ತರಿಗೆ ಅನುಕೂಲವಾಗುವಂತೆ ಯೋಜನೆಯಿಂದ ಅನಾರೋಗ್ಯ ದಿಂದ ಮಲಗಿರುವವರಿಗೆ, ವಾಟರ್ ಬೆಡ್, ಅನಾರೋಗ್ಯ ದಿಂದ, ನಡೆದಾಡಲು ಅಸಾಧ್ಯ ಆದವರಿಗೆ ಕುಳಿತಲ್ಲಿಯೇ ಓಡಾಡಲು ಔಟ್ ಸೈಡ್ ವಿಲಚೆರ್, ನಡೆದಾಡಲು ಅಸಾಧ್ಯವಾಗಿರುವ ಶೌಚಾಲಯಕ್ಕೆ ಹೋಗಲು ಮಾತ್ರ ಕಮಾನ ಚೇರ ವಿತ್ ಚೇರ್, ಕಾಲುಗಳಲ್ಲಿ ಸ್ವಲ್ಪ ಬಲವಿದ್ದು ಎರಡು ಕೈ ಗಳಿಂದ ನಡೆದಾಡಲು ಸಾಧ್ಯವಿರುವವರಿಗೆ, ಯು ಶೇಪ್ ವಾಕರ್ ಹಾಗೂ ಸ್ವಲ್ಪಮಟ್ಟಿಗೆ ನಡೆದಾಡಲು ಅಸಕ್ತರಿಗೆ ವಯೋವೃದ್ದರಿಗೆ, ಊರುಗೋಲು ಹಾಗೂ ಕಾಲುಗಳಿಗೆ ಸ್ವಾಧೀನ ಇಲ್ಲದವರಿಗೆ ನಡೆದಾಡಲು ಉಪಕರಣಗಳನ್ನು ಯೋಜನೆಯ ಜನಮಂಗಲ ಕಾರ್ಯಕ್ರಮದಲ್ಲಿ ತಾಲೂಕಿನಲ್ಲಿ ಅನಾರೋಗ್ಯ ಹಾಗೂ ಆಸಕ್ತರಿಗೆ ವಿತರಿಸಲಾಗುವುದು ಎಂದು ಮಾಹಿತಿ ತಿಳಿಸಿದರು.

ಕುದ್ರಡ್ಕ ಒಕ್ಕೂಟದ ಅಧ್ಯಕ್ಷ ವಿಜಯ ಮಡಕ್ಕಿಲ್ಲ, ವಲಯದ ಮೇಲ್ವಿಚಾರಕರು ಕೇಶವ, ಕೃಷಿ ಮೇಲ್ವಿಚಾರಕರು ಕೃಷ್ಣ ಗೌಡ, ಕುದ್ರಡ್ಕ, ಮಚ್ಚಿನ ಸೇವಾಪ್ರತಿನಿಧಿ ಶ್ರೀ ಮತಿ ನಂದಿನಿ, ಹಾಗೂ ಪರಮೇಶ್ವರ್, ಒಕ್ಕೂಟದ ಜೊತೆ ಕಾರ್ಯದರ್ಶಿ ಜಯಂತಿ ಹಾಗೂ ಇತರರು ಉಪಸಿತರಿದ್ದರು.

Related posts

ಎಸ್.ಡಿ.ಎಮ್ ಕಾಲೇಜಿನಲ್ಲಿ ಆಂಗ್ಲ ವಿಭಾಗದಿಂದ ಅಧ್ಯಯನ ವಿನಿಮಯ ಕಾರ್ಯಕ್ರಮ 

Suddi Udaya

ಭುಜಬಲಿ ಧರ್ಮಸ್ಥಳ ರವರಿಗೆ “ಶ್ರೀ ಯಕ್ಷಾಂಜನೆಯ ಪ್ರಶಸ್ತಿ” ಪ್ರದಾನ

Suddi Udaya

ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಉಪಾಧ್ಯಕ್ಷೆಯಾಗಿ ವಿಜಯಾ ಆರಂಬೋಡಿ, ಕಾರ್ಯದರ್ಶಿಯಾಗಿ ಅಮಿತಾ ಕುಶಾಲಪ್ಪ ಗೌಡ ನೇಮಕ

Suddi Udaya

ಧರ್ಮಸ್ಥಳ ಪಾಂಗಳ ಕ್ರಾಸ್ ನಲ್ಲಿ ಗುಂಪುಗಳ ನಡುವೆ ಅಹಿತಕರ ಘಟನೆ: ಧರ್ಮಸ್ಥಳ ಠಾಣೆಯಲ್ಲಿ 4 ಪ್ರಕರಣ ಹಾಗೂ ಬೆಳ್ತಂಗಡಿ ಠಾಣೆಯಲ್ಲಿ 3 ಪ್ರಕರಣ ದಾಖಲು

Suddi Udaya

ಬೆಳ್ತಂಗಡಿಗೆ ಹೊಸ ನ್ಯಾಯಾಲಯ ಕಟ್ಟಡ ಮಂಜೂರುಗೊಳಿಸುವಂತೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ರವರಿಗೆ ರಕ್ಷಿತ್ ಶಿವಾರಂ ರಿಂದ ಮನವಿ

Suddi Udaya

ಬಂದಾರು ಸ.ಹಿ. ಪ್ರಾ. ಶಾಲೆಯಲ್ಲಿ ಬೂತ್ ಸಂಖ್ಯೆ 217ರಲ್ಲಿ ತ್ರಾಂತಿಕ ದೋಷದಿಂದ ಮತದಾನ ಸ್ಥಗಿತ

Suddi Udaya
error: Content is protected !!