ನಾರಾವಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ಗುರುವಾಯನಕೆರೆ ನಾರಾವಿ ವಲಯದ ಮರೋಡಿ ಎ ಕಾರ್ಯಕ್ಷೇತ್ರದ ಸದಸ್ಯರಾದ ಉಮೇಶ್ ಇವರ ತಂದೆ ಅಣ್ಣು ಇವರಿಗೆ ಔಟ್ ಸೈಡ್ ವೀಲ್ ಚೇರ್ ನ್ನು ಜಿಲ್ಲಾ ಭಾರತೀಯ ಜನತಾ ಪಾರ್ಟಿ ಉಪಾಧ್ಯಕ್ಷ ಜಯಂತ್ ಕೋಟ್ಯಾನ್ ಇವರ ಉಪಸ್ಥಿತಿಯಲ್ಲಿ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ರಾಜು ಪೂಜಾರಿ, ವಲಯದ ಮೇಲ್ವಿಚಾರಕಾರದ ವಿಶಾಲ ಕೆ. ಒಕ್ಕೂಟದ ಮಾಜಿ ಅಧ್ಯಕ್ಷರಾದ ಸಂತೋಷ್ ಪೂಜಾರಿ, ಶೌರ್ಯ ವಿಪತ್ತು ಘಟಕದ ಸದಸ್ಯರು ಶೋಭಾ., ಒಕ್ಕೂಟದ ಮಾಜಿ ಪದಾಧಿಕಾರಿ ಸುದರ್ಶನ್, ಸೇವಾಪ್ರತಿನಿಧಿ ಶಶಿಕಲಾ ಹಾಗೂ ಅಣ್ಣು ಅವರ ಮಕ್ಕಳು &ಅಳಿಯ ಉಪಸ್ಥಿತರಿದ್ದರು.
ನಾರಾವಿ ಬಿ ಕಾರ್ಯಕ್ಷೇತ್ರದ ಸದಸ್ಯರಾದ ಸೇಸು ಪೂಜಾರಿ ಇವರಿಗೆ ಕೊಮೊಂಡೋ ವ್ಹೀಲ್ ಚೇರ್ ಯನ್ನು ನಾರಾವಿ ವಲಯದ ಸಂಚಾಲಕರಾದ ವಿನಯ್ ಕುಮಾರ್ ಹೆಗ್ಡೆ ಇವರು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಪ್ರವೀಣ್, ವಲಯದ ಮೇಲ್ವಿಚಾರಕರಾದ ವಿಶಾಲ. ಕೆ, ಸೇವಾಪ್ರತಿನಿಧಿ ಹರಿಣಾಕ್ಷಿ, ಹಾಗೂ ಸೇಸು ಪೂಜಾರಿ ಅವರ ಪತ್ನಿ ಪುಷ್ಪ ಉಪಸ್ಥಿತರಿದ್ದರು.












