July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅರಸಿನಮಕ್ಕಿಯಲ್ಲಿ ಮಲ್ಲ ಚಾವಡಿ ಹಬ್ಬ , ಸನ್ಮಾನ ಸಮಾರಂಭ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮ

ಅರಸಿನಮಕ್ಕಿ: ಮೂಲ್ಯರ ಯಾನೆ ಕುಲಾಲರ ಕೂಟದ 31ನೇ ಮಲ್ಲ ಚಾವಡಿ ಹಬ್ಬ ಮತ್ತು ಸನ್ಮಾನ ಸಮಾರಂಭ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮವು ಜ.11ರಂದು ಅರಸಿನಮಕ್ಕಿ ಕುಂಭಶ್ರೀ ಚಾವಡಿಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಯರ ಯಾನೆ ಕುಲಾಲರ ಸಂಘದ ಅಧ್ಯಕ್ಷ ಕೆ. ಗಂಗಾಧರ ಕುಲಾಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ನಿವೃತ್ತ ಡೆಪ್ಯುಟಿ ಕಮಾಂಡೆಂಟ್ ಚಂದಪ್ಪ ಮೂಲ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಾಹಿತಿ, ಯಕ್ಷಗಾನ ಕಲಾವಿದ ಮಹೇಶ್ ಕುಲಾಲ್ ಅರ್ತಿಮೂಲೆ, ತಾಲೂಕು ತುಳುನಾಡ ಒಕ್ಕೂಟದ ಅಧ್ಯಕ್ಷ ರಾಜೇಶ್ ಕುಲಾಲ್ ಬೈರೊಟ್ಟು, ಅರಸಿನಮಕ್ಕಿ ಸರಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕಿ ಮಂಜುಳಾ, ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆಯ ವಿಭಾಗೀಯ ಅಧ್ಯಕ್ಷ ಸುಕುಮಾರ್ ಬಂಟ್ವಾಳ, ಕಾಯರ್ತಡ್ಕ ಕುಂಭಶ್ರೀ ಗೆಳೆಯರ ಬಳಗದ ಗೌರವಾಧ್ಯಕ್ಷ ವಿಜಯ್ ಕೆ., ಚಾರ್ಮಾಡಿ ಪಂಚಶ್ರೀ ಕಲಾಕೂಟದ ಅಧ್ಯಕ್ಷ, ರಂಗ ಕಲಾವಿದ ಶ್ರೀನಿವಾಸ ಕುಲಾಲ್ ಕಕ್ಕಿಂಜೆ, ಕಲಾವಿದ ಎಚ್. ಕೆ. ನಯನಾಡು, ರಾಮ ಕುಲಾಲ್ ಉಪ್ಪಿನಂಗಡಿ ಭಾಗವಹಿಸಿದರು.

ಕೊಕ್ಕಡ ಪಂಚಮಿ ಹಿತಾಯುರ್ಧಾಮದ ಹಿರಿಯ ವೈದ್ಯ ಡಾ| ಮೋಹನದಾಸ ಗೌಡ ಕೊಕ್ಕಡ ಇವರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು. ಅಂಗನವಾಡಿಯಿಂದ ಪಿ. ಯು. ಸಿ ವರೆಗಿನ ಮಕ್ಕಳಿಗೆ ಪುಸ್ತಕ ವಿತರಣೆ, ವಿವಿಧ ಸ್ಪರ್ಧೆ ಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ, ಎಸ್. ಎಸ್. ಎಲ್. ಸಿ ಯಲ್ಲಿ ಹೆಚ್ಚು ಅಂಕ ಪಡೆದ ತೇಜಸ್ವಿ ಬಡೆಕ್ಕಲ, ಮಂಗಳೂರಿನಲ್ಲಿ ನಡೆದ ಕುಲಾಲ ಕಲಾವಳಿಯಲ್ಲಿ ನಾಟಕದಲ್ಲಿ ಪ್ರಶಸ್ತಿ ಪಡೆದ ರುಕ್ಮಯ್ಯ ಕುಲಾಲ್ ಮತ್ತು ತಂಡವನ್ನು ಗೌರವಿಸಲಾಯಿತು. ವಿದ್ಯಾ ನಿಧಿಯನ್ನು ಉನ್ನತ ವಿದ್ಯಾಭ್ಯಾಸಕ್ಕಾಗಿ ಬಿಂಧು ಕುಲಾರ್ ರವರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಡೆಪ್ಯುಟಿ ಕಮಾಂಡೆಂಟ್ ಚಂದಪ್ಪ ಮೂಲ್ಯರವರು ಹಿಂದುಗಳು ಭಗವದ್ಗೀತೆ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ನೀಡುವ ಪುಸ್ತಕಗಳನ್ನು ಹಂಚಲಾಯಿತು.

ಮಕ್ಕಳು ಪ್ರಾರ್ಥಿಸಿದರು. ರುಕ್ಮಯ್ಯ ಕುಲಾಲ್ ಸ್ವಾಗತಿಸಿದರು. ಗಣೇಶ್ ಕುಲಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ವಿಜಯ ಯು. ಸಿ. ಕುಲಾಲ್ ವರದಿ ವಾಚಿಸಿದರು. ಪ್ರವೀಣ್ ಯು. ಸಿ. ಕುಲಾಲ್ ಕಾರ್ಯಕ್ರಮ ನಿರೂಪಿಸಿ, ಅಶೋಕ್ ಕುಲಾಲ್ ಧನ್ಯವಾದವಿತ್ತರು.
ಮಧ್ಯಾಹ್ನ ನಂತರ ಮಕ್ಕಳು ಹಾಗೂ ಹವ್ಯಾಸಿ ಕಲಾವಿದರಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.

Related posts

ರಕ್ತೇಶ್ವರಿ ಪದವು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ನಾರಾವಿ ಸಂತ ಅಂತೋನಿ ಪದವಿ ಪೂರ್ವ ಕಾಲೇಜಿಗೆ ಶೇ.94.11 ಫಲಿತಾಂಶ

Suddi Udaya

ರಾಜ್ಯ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿ ಖಂಡಿಸಿ ಬೆಳಾಲು ಗ್ರಾ.ಪಂ. ನಲ್ಲಿ ಪ್ರತಿಭಟನೆ

Suddi Udaya

ಭಕ್ತರ ಭಕುತಿಯ ಭಾವದಲ್ಲಿ ಮುಂಡೂರು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಜಾತ್ರೋತ್ಸವ ಸಂಪನ್ನ

Suddi Udaya

ಸ್ಪರ್ಧಾತ್ಮಕ ಪರೀಕ್ಷೆ: ಕು. ಅಂಚಿತಾ ಡಿ. ಜೈನ್ ಅಂತರ್‌ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

Suddi Udaya

ಬೆಳ್ತಂಗಡಿ ತಾಲೂಕಿನ ಕಲಾವಿದರೇ ನಟಿಸಿ- ನಿರ್ಮಾಣ ಮಾಡಿರುವ ಧರ್ಮಸ್ಥಳ ಕಾತ್ಯಾಯಣಿ ಕ್ರಿಯೆಷನ್‌ನವರ “ತೀರ್ಪು” ಟೆಲಿಫಿಲ್ಮ್ ಯೂಟ್ಯೂಬ್ ನಲ್ಲಿ ಬಿಡುಗಡೆ

Suddi Udaya
error: Content is protected !!