23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಗುರುವಾಯನಕೆರೆ ಯಡೂ೯ರು ರಾತ್ರಿ ಮನೆಯೊಳಗಡೆ ಬಿದ್ದು ರಕ್ತಸ್ರಾವವಾಗಿ ಮುರಳಿಧರ ಭಟ್ ಮೃತ್ಯು

ಗುರುವಾಯನಕೆರೆ: ಇಲ್ಲಿಯ ಯಡೂ೯ರು ಎಂಬಲ್ಲಿ ಯುವಕರೋವ೯ರು ಮನೆಯೊಳಗಡೆ ಬಿದ್ದು ತಲೆಗೆ ಬಿದ್ದ ಏಟಿನಿಂದ ರಕ್ತಸ್ರಾವವಾಗಿ ಮೃತ ಪಟ್ಟಿರುವುದು ಜ.15ರಂದು ಬೆಳಕಿಗೆ ಬಂದಿದೆ.

ಗುರುವಾಯನಕೆರೆ ಯಡೂ೯ರಿನ ದಿ. ಶ್ರೀಧರ ಭಟ್ ಮತ್ತು ಶ್ರೀ ಮತಿ ಗೀತಾ ದಂಪತಿ ಪುತ್ರ ಮುರಳೀಧರ ಭಟ್ (35ವ) ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

ಮುರಳೀಧರ ಭಟ್ ಅವರ ತಾಯಿ ಗೀತಾ ಭಟ್ ಅವರು ಕಾಲಿನ ಆಪರೇಷನ್ ಆಗಿ ಗೇರುಕಟ್ಟೆ ಕುಂಠಿನಿಯ ತಮ್ಮ ಮಗಳ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಇಂದು ಯಡೂ೯ರಿನ ತನ್ನ ಮನೆಗೆ ಬಂದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಬೆಳಿಗ್ಗೆ ಗೀತಾ ಭಟ್ ಮನೆಗೆ ಬಂದಾಗ ಮನೆಯ ಬಾಗಿಲು ಒಳಗಿನಿಂದ ಲಾಕ್ ಮಾಡಲಾಗಿದ್ದು, ಮಗನನ್ನು ಕರೆದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಂತರ ಮನೆಯ ಹಿಂದಿನ ಕಿಟಿಕಿ ಮೂಲಕ ನೋಡಿದಾಗ ಮುರಳಿ ಕವಚಿಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಲೆಯ ಭಾಗದಿಂದ ರಕ್ತ ಹರಿದು ಹೋಗಿರುವುದು ಕಂಡು ಬಂದಿದೆ. ಕೂಡಲೇ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿ, ಬಳಿಕ ಮನೆಯ ಹಿಂದಿನ ಬಾಗಿಲನನ್ನು ತೆರೆದು ನೋಡಿದಾಗ ಮುರಳಿ ಮೃತಪಟ್ಟಿರುವುದು ದೃಢಪಟ್ಟಿದೆ.
ಮುರಳೀಧರ ಭಟ್ ಧರ್ಮಸ್ಥಳದ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಮನೆಯಲ್ಲಿ ಒಬ್ಬರೇ ಇದ್ದರು.

ಅವರ ಸಾವಿಗೆ ಸ್ವಷ್ಟ ಕಾರಣ ಗೊತ್ತಾಗಿಲ್ಲ. ಆದರೆ ರಾತ್ರಿ ‌ಮನೆಯಲ್ಲಿ ಬಿದ್ದು ತಲೆಗೆ ಬಿದ್ದ ಏಟಿನಿಂದ ರಕ್ತಸ್ರಾವವಾಗಿ ಸ್ಥಳದಲ್ಲೇ ಅವರು ಎರಡು ದಿನಗಳ ಹಿಂದೆ ಮೃತಪಟ್ಟಿರಬಹುದೆಂದು ಸಂಶಯಿಸಲಾಗಿದೆ. ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು , ತನಿಖೆ ನಡೆಸುತ್ತಿದ್ದಾರೆ

Related posts

ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘದ ನಿರ್ದೇಶಕ ಸ್ಥಾನದ ಉಪಚುನಾವಣೆಗೆ ಮಾಜಿ ಸೈನಿಕ ತಂಗಚ್ಚನ್ ಅವಿರೋಧ ಆಯ್ಕೆ

Suddi Udaya

ತಣ್ಣೀರುಪಂತ ವಲಯದ ರುದ್ರಗಿರಿ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಬೆಳಾಲು: ನಾಲ್ಕು ತಿಂಗಳ ಹೆಣ್ಣು ಮಗು ಕಾಡಿನಲ್ಲಿ ಪತ್ತೆ: ಸಾರ್ವಜನಿಕರಿಂದ ರಕ್ಷಣೆ

Suddi Udaya

ಭಾರತೀಯ ಜನತಾ ಪಾಟಿ೯ದ.ಕ. ಹಾಗೂ ಉಡುಪಿ ಜಿಲ್ಲೆ ಇದರ ನೇತೃತ್ವದಲ್ಲಿ ಕುಮಾರಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಗೆ ಆಗ್ರಹ – ಬೆಳ್ತಂಗಡಿ ಮಿನಿ ವಿಧಾನಸೌಧ ಮುಂಭಾಗದಲ್ಲಿ ಪ್ರತಿಭಟನೆ ಆರಂಭ

Suddi Udaya

ಸಿಬಿಎಸ್ಇ ಫಲಿತಾಂಶ: ವೇಣೂರಿನ ಆಯಿಶಾ ನೀಮಾ ರವರು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣ

Suddi Udaya

ಮಾಲಾಡಿ ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya
error: Content is protected !!