22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನೆಲ್ಯಾಡಿ ಸಂತ ಅಲ್ಫೋನ್ಸ ವಾರ್ಷಿಕ ಮಹೋತ್ಸವ ಸಂಪನ್ನ

ನೆಲ್ಯಾಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ಏಕೈಕ ಸಂತ ಅಲ್ಫೋನ್ಸ ಪುಣ್ಯಕ್ಷೇತ್ರವಾದ ನೆಲ್ಯಾಡಿಯಲ್ಲಿ ದಶದಿನಗಳ ಕಾಲ ಭಕ್ತಿಭಾವದಿಂದ ನಡೆಯುತ್ತಿದ್ದ ವಾರ್ಷಿಕ ಮಹೋತ್ಸವವು ಅದ್ಧೂರಿ ಹಾಗೂ ಶ್ರದ್ಧಾಪೂರ್ಣ ಸಮಾರೋಪದೊಂದಿಗೆ ಸಂಪನ್ನಗೊಂಡಿತು.

ಜ.16ರಂದು ಆರಂಭಗೊಂಡ ಈ ಮಹೋತ್ಸವವು ಜ. 25ರಂದು ಮುಕ್ತಾಯವಾಯಿತು. ಹಬ್ಬದ ಪ್ರಧಾನ ದಿನವಾದ ಶನಿವಾರ, ವಿಶೇಷ ಪ್ರಾರ್ಥನೆಗಳು, ಧಾರ್ಮಿಕ ವಿಧಿವಿಧಾನಗಳು ಮತ್ತು ಆಕರ್ಷಕ ಶೋಭಾಯಾತ್ರೆ ಮಹೋತ್ಸವದ ವೈಭವಕ್ಕೆ ಮತ್ತಷ್ಟು ಮೆರುಗು ನೀಡಿದವು.

ಶನಿವಾರ ಸಂಜೆ ನಡೆದ ಹಬ್ಬದ ಶೋಭಾಯಾತ್ರೆ ನೆಲ್ಯಾಡಿ ಪೇಟೆಯೊಳಗೆ ಭಕ್ತಿಗೀತಗಳೊಂದಿಗೆ ಸಾಗುತ್ತಾ ಸಂತ ಅಲ್ಫೋನ್ಸ ಪುಣ್ಯಕ್ಷೇತ್ರಕ್ಕೆ ಆಗಮಿಸಿತು. ಶೋಭಾಯಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಸಂತ ಅಲ್ಫೋನ್ಸಮ್ಮನವರಿಗೆ ತಮ್ಮ ಹರಕೆಗಳನ್ನು ಅರ್ಪಿಸಿ, ಆಶೀರ್ವಾದವನ್ನು ಪಡೆದುಕೊಂಡರು. ಭಕ್ತರ ಭಕ್ತಿಗೀತೆಗಳು ಹಾಗೂ ಜಪಮಾಲೆಗಳೊಂದಿಗೆ ಸಂಪೂರ್ಣ ಪ್ರದೇಶ ಭಕ್ತಿ ಸಾಗರವಾಗಿ ಪರಿವರ್ತಿತವಾಯಿತು.

ಮಹೋತ್ಸವದ ದಿನಗಳಲ್ಲಿ ವಿವಿಧ ದಿನಗಳಲ್ಲಿ ವಿಶೇಷ ನವೀನ ಪ್ರಾರ್ಥನೆಗಳು, ಧ್ಯಾನಗಳು, ಪವಿತ್ರ ಬಲಿ ಪೂಜೆಗಳು ಹಾಗೂ ಆತ್ಮೀಯ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಮಹೋತ್ಸವದಲ್ಲಿ ಭಾಗವಹಿಸಿ ಸಂತ ಅಲ್ಫೋನ್ಸಮ್ಮನ ಕೃಪೆಗೆ ಪಾತ್ರರಾದರು.


ವಾರ್ಷಿಕ ಮಹೋತ್ಸವಕ್ಕೆ ಪುಣ್ಯ ಕ್ಷೇತ್ರದ ವಂದನಿಯ ಫಾ. ಶಾಜಿ ಮಾತ್ಯು, ಫಾ. ಅಲೆಕ್ಸ್ ಜೋನ್ಸನ್, ಟ್ರಸ್ಟಿಗಳಾದ ಜೋನ್ಸನ್, ರಾಜೇಶ್ ರೆಜಿ ಜೋಯ್ ಕೋಶಾಧಿಕಾರಿ ಸುರೇಶ್ ಕಾರ್ಯದರ್ಶಿ ಜೆಸ್ಸಿ ಕೇ ಜೇ ಮೊದಲಾದವರು ನೇತೃತ್ವ ವಹಿಸಿದ್ದರು.

Related posts

ಬಳಂಜ: ಅಟ್ಲಾಜೆ ಸರ್ವೋದಯ ಫ್ರೆಂಡ್ಸ್ ಕ್ಲಬ್ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ, ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಬೃಹತ್ ರಕ್ತದಾನ ಶಿಬಿರ

Suddi Udaya

ಬೆಳ್ತಂಗಡಿ ತಾಲೂಕು ತಹಶೀಲ್ದಾರ್ ಆಗಿ ಎಸ್.ಎನ್. ನರಗುಂದ ನೇಮಕ

Suddi Udaya

ಮಾಲಾಡಿ : ಸಂಪತ್ ರಾಜ್ ಭಟ್ ನಿಧನ

Suddi Udaya

ಜಾಗತಿಕ ಸೀರೋ ಮಲಬಾರ್ ಧರ್ಮ ಸಂಸದ್ ಗೆ ಪಾಲಾದಲ್ಲಿ ಸಮಾಪ್ತಿ: ಬೆಳ್ತಂಗಡಿ ಧರ್ಮ ಪ್ರಾಂತ್ಯ ಭಾಗಿ

Suddi Udaya

ಕುವೆಟ್ಟು: ಚರಂಡಿ ವ್ಯವಸ್ಥೆ ದುರಸ್ತಿಗೊಳಿಸಿ, ಕಾಮಗಾರಿ ಪ್ರಾರಂಭ ಮಾಡುವಂತೆ ಕುವೆಟ್ಟು ಗ್ರಾ.ಪಂ. ಅಧ್ಯಕ್ಷೆ ಹಾಗೂ ಪಿಡಿಒ ರವರಿಗೆ ಮನವಿ

Suddi Udaya
error: Content is protected !!