22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಲೇಖಕಿ ಪದ್ಮಲತಾ ಮೋಹನ್ ನಿಡ್ಲೆರವರ ಎಲ್ ಬಿಡಬ್ಲೂ ಮತ್ತು ವಿದ್ಯಾಸಾರಥಿ ಮತ್ತು ಮನೋಸಾರಥಿ ಪುಸ್ತಕ ಬಿಡುಗಡೆ

ಬೆಳ್ತಂಗಡಿ: ಬಿ‌ಎಂ ಶ್ರೀ ಪ್ರತಿಷ್ಟಾನ ಬೆಂಗಳೂರಿದಲ್ಲಿ ಲೇಖಕಿ ಪದ್ಮಲತಾ ಮೋಹನ್ ನಿಡ್ಲೆ ಇವರ ಎಲ್ ಬಿ ಡಬ್ಲ್ಯೂ ಮತ್ತು ವಿದ್ಯಾಸಾರಥಿ ಮತ್ತು ಮನೋಸಾರಥಿ ( ನಿರಂತರ ಸಂಸ್ಥೆ ಪ್ರಕಾಶಿಸಿದ) ಎರಡು ಪುಸ್ತಕಗಳು ಲೋಕಾರ್ಪಣೆಗೊಂಡವು. ವಿದ್ಯಾಸಾರಥಿ ಮತ್ತು ಮನೋಸಾರಥಿ ಪುಸ್ತಕವನ್ನು ಉಪನ್ಯಾಸಕಿಯೂ ಆಗಿರುವ, ಲೇಖಕಿ ಪದ್ಮಲತಾ ಮೋಹನ್ ಅವರ ವಿದ್ಯಾರ್ಥಿಗಳ ಕೈಯಲ್ಲೇ ಬಿಡುಗಡೆ ಮಾಡಿಸಿದ್ದು ವಿಶೇಷವಾಗಿತ್ತು.

ಪುಸ್ತಕ ವಿಮರ್ಶೆ ಮಾಡಿದ ,ವಿಜಯವಾಣಿ ಡೆಪ್ಯೂಟಿ ಎಡಿಟರ್ ನಾಗರಾಜ ಇಳೆಗುಂಡಿಯವರು ಎಲ್ ಬಿಡಬ್ಲೂ ಕಾದಂಬರಿ ಕೇವಲ ಕ್ರಿಕೆಟ್ ಆಟ ಮಾತ್ರವಲ್ಲದೇ ಬೇರೆ ಯಾವುದೇ ವೃತ್ತಿ ಇರಲಿ, ವೃತ್ತಿ ಜೊತೆಗೆ ವೈಯುಕ್ತಿಕ ಜೀವನವನ್ನು ಹೇಗೆ ಸಮತೋಲನದಲ್ಲಿ ತೆಗೆದುಕೊಂಡು ಹೋಗಬೇಕೆಂಬ ತತ್ವವನ್ನು ಹೇಳಿದೆ ಎಂದರು. ‌ವಿದ್ಯಾಸಾರಥಿ ಮತ್ತು ಮನೋಸಾರಥಿ ಇಂದಿನ ಬದಲಾಗುತ್ತಿರುವ ಶಿಕ್ಷಣದ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಮಾತ್ರವಲ್ಲದೇ ಶಿಕ್ಷಕರು ಪೋಷಕರು ಓದಲೇಬೇಕಾದ ಪುಸ್ತಕವೆಂದರು.

ಪತ್ರಕರ್ತ, ಸಿ ಇ ಓ ಕ್ಯೂ ಪ್ರಚಾರ ಅಲ್ಮಾ ಮೀಡಿಯಾ ಸ್ಕೂಲ್ ಗೌರೀಶ್ ಅಕ್ಕಿಯವರು (ಮುಖ್ಯ ಅತಿಥಿ) ಎಐ ಯುಗದಲ್ಲಿ ಚ್ಯಾಟ್ ಜಿಪಿಟಿನೇ ಕವನ ಕಥೆಗಳನ್ನು ಬರೆಯುತ್ತಿರುವುದರಿಂದ ಇಂದಿನ ಬರಹಗಾರರರು ವಿಶೇಷವಾಗಿ ಎಐ ಗಿಂತಲ್ಲೂ ಮೇಲ್ಮಟ್ಟದಲ್ಲಿ ಯೋಚಿಸುವ ಅಗತ್ಯ ಈಗಿನ ಕಾಲಘಟ್ಟದಲ್ಲಿ ಇದೆ. ಪೋಷಕರು ಮಕ್ಕಳನ್ನು ಓದಿಸಲು ಪ್ರೇರೇಪಿಸಲು ತಾವೇ ಪುಸ್ತಕ ಓದುವ ಮೂಲಕ ಮಾದರಿಯಾಗಬೇಕು ಎಂದು ಹೇಳಿದರು. ಡಾ ಬೈರಮಂಗಲ ರಾಮೇಗೌಡರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಬರಹಗಾರರು ತಮ್ಮ‌ ಓದುಗರ ಮನಸ್ಥಿತಿ ಏನು ಅವರಿಗೆ ಏನು ಬೇಕು ?ಎಂಬ ಅರಿವಿನೊಂದಿಗೆ ಬರೆಯಬೇಕಾಗಿದೆ ಎಂದರು ಹಾಗೇ ತಮ್ಮ ನೈಜ ಬಾಲ್ಯವನ್ನು ಕಳೆದುಕೊಳ್ಳುತ್ತಿರುವ ಇಂದಿನ‌ ಮಕ್ಕಳ‌ ಜೀವನ ಶೈಲಿ ಬಗ್ಗೆ ಖೇದ ವ್ಯಕ್ತಪಡಿಸಿದರು.

ವಿದ್ಯಾಸಾರಥಿ ಮತ್ತು ಮನೋಸಾರಥಿಯಂತಹ ಪುಸ್ತಕ ಇಂದಿನ ವಿದ್ಯಾರ್ಥಿಗಳು ಅಗತ್ಯವಾಗಿ ಓದಲೇಬೇಕಾದ ಪುಸ್ತಕ ವೆಂದರು. ಲೇಖಕಿ ಪದ್ಮಲತಾ ಮೋಹನ್ ತಮ್ಮ ಬರಹಕ್ಕೆ ಓದುಗರೇ ಸ್ಪೂರ್ತಿ ಪುಸ್ತಕವನ್ನು ಕೊಂಡು ಓದುವ ಓದುಗರೇ ಲೇಖಕರ ಶಕ್ತಿ ಎಂದು ಉಲ್ಲೇಖಿಸಿದರು. ನಿರಂತರ ಸಂಸ್ಥೆಯಿಂದ ಬಿಡುಗಡೆಯಾಗುತ್ತಿರುವ ಲೇಖಕಿಯ ನಾಲ್ಕಕನೇ ಮತ್ತು ಐದನೇ ಪುಸ್ತಕಗಳ ಈ ಸಂದರ್ಭದಲ್ಲಿ ಪದ್ಮಲತಾ ಮೋಹನ್ ರನ್ನು ಪ್ರಕಾಶಕರು ಗೌರವಿಸಿದರು.
ಕುಮಾರಿ ಅಭಿಜ್ಞಾ ಎಂ‌ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶ್ರೀಮತಿ ಅಂಭುಜಾಕ್ಷಿ ಬಿರೇಶ್ ನಾಡಗೀತೆಯನ್ನು ಪ್ರಸ್ತುತ ಪಡಿಸಿದರು. ಲೇಖಕಿ ಮಾನಸ ಕೆ.ಕೆ ಸ್ವಾಗತಿಸಿದರು. ಪ್ರವೀಣ್ ಜಗಾಟ ವಂದಿಸಿದರು. ಬಾಲಮುರಳಿಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

ಕೃತಿಗಳು ಎಲ್ ಬಿ ಡಬ್ಲೂ ಮತ್ತು ವಿದ್ಯಾಸಾರಥಿ‌ ಮತ್ತು ಮನೋಸಾರಥಿ ಇದೀಗ ಮಾರಾಟಕ್ಕೆ ಲಭ್ಯವಿದೆ
ಮೂಲತಃ 150+150= 300 ಬೆಲೆಯ ಪುಸ್ತಕಗಳು ಡಿಸ್ಕೌಂಟ್ ದರದಲ್ಲಿ (120+120)= 240+ 40 postal charge= 280 ಕೆಲವು ದಿನಗಳು ದೊರಕುತ್ತವೆ. ನಿಮ್ಮ‌ಪ್ರತಿಗಾಗಿ‌ ಸಂಪರ್ಕಿಸಿರಿ 9448332553.

Related posts

ಮುಡಾ ಹಗರಣದಲ್ಲಿ ಹೈಕೋರ್ಟ್‌ ತೀರ್ಪು ಬಿಜೆಪಿ ಹೋರಾಟಕ್ಕೆ ಸಂದ ಜಯ: ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯನವರು ತಕ್ಷಣ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ಶಾಸಕ ಹರೀಶ್ ಪೂಂಜ

Suddi Udaya

ಮಾಳಿಗೆ ಪ್ರದೇಶಕ್ಕೆ ವಿದ್ಯುತ್ ಸಂಪರ್ಕ ಶಾಸಕರಿಂದ ಆಗಿದೆಯೇ; ಅಳದಂಗಡಿ ಜನಸ್ಪಂದನ ಸಭೆಯಲ್ಲಿ ಶಾಸಕರಿಗೆ ಗ್ರಾಮಸ್ಥರ ಪ್ರಶ್ನೆ

Suddi Udaya

ಕನ್ಯಾಡಿ ಶ್ರೀರಾಮ ಕ್ಷೇತ್ರದ ಪೀಠಾಧಿಪತಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮಿಜೀಯರಿಂದ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟ

Suddi Udaya

ಕುತ್ಲುರು ಸರಕಾರಿ ಶಾಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಎರಡು ಕಂಪ್ಯೂಟರ್ ಹಾಗೂ ಪ್ರೊಜೆಕ್ಟರ್ ಕೊಡುಗೆ

Suddi Udaya

ಲಾಯಿಲ ಪ್ರಸನ್ನ ಪ.ಪೂ. ಕಾಲೇಜಿಗೆ ಶೇ.98 ಫಲಿತಾಂಶ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಶ್ರೀ ರಕ್ತೇಶ್ವರಿ ಗುಡಿ, ಶ್ರೀ ನಾಗದೇವರ ಕಟ್ಟೆ, ಹಾಗೂ ಶ್ರೀ ಪಂಜುರ್ಲಿ ದೈವದ ಕಟ್ಟೆಗಳಿಗೆ ಶಿಲಾನ್ಯಾಸ ಕಾರ್ಯಕ್ರಮ

Suddi Udaya
error: Content is protected !!