22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಾರ್ಷಿಕ ವರ್ಧಂತಿ ಉತ್ಸವ:

ಅಳದಂಗಡಿ: ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಮಹಾಗಣಪತಿ ದೇವರ ಪ್ರತಿಷ್ಠಾ ದಿನದ ಸಲುವಾಗಿ ವಾರ್ಷಿಕ ವರ್ಧಂತಿ ಉತ್ಸವವು (ವಾರ್ಷಿಕ ಜಾತ್ರೆ) ಕ್ಷೇತ್ರದ ತಂತ್ರಿವರ್ಯರಾದ ಪೊಳಲಿ ಕೋಡಿಮಜಲು ಶ್ರೀ ಅನಂತ ಪದ್ಮನಾಭ ಉಪಧ್ಯಾಯರ ನೇತೃತ್ವದಲ್ಲಿ ಫೆ.7ರಂದು ನಡೆಯಿತು,

ಬೆಳಿಗ್ಗೆ 12 ತೆಂಗಿನಕಾಯಿ ಗಣಹವನ, 25 ಕಲಶಾಭಿಷೇಕ, ಪ್ರಧಾನ ಹವನ, ಸ್ಥಳೀಯರಿಂದ ಭಜನಾ ಸತ್ಸಂಗ, ಮಧ್ಯಾಹ್ನ ಪ್ರಸನ್ನ ಪೂಜೆ, ಮಹಾ ಮಂಗಳಾರತಿ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಶಶಿಧರ ಡೋಂಗ್ರೆ ಸೇನರೆಬೈಲು, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸತೀಶ್ ಪೂಜಾರಿ ನಮನ, ಪ್ರಧಾನ ಅರ್ಚಕರಾದ ಎ.ಸೋಮನಾಥ ಮಯ್ಯ, ಪ್ರವೀಣ ಮಯ್ಯ, ಸದಸ್ಯರಾದ ದೀಪಕ್ ಎಚ್.ಡಿ. ಬಳಂಜ, ಸದಾನಂದ ತೋಟದಪಲ್ಕೆ, ಜಿನ್ನಪ್ಪ ಶೆಟ್ಟಿ ಕೆದ್ದು, ಸತೀಶ್ ದೇವಾಡಿಗ ಸಾರಬೈಲು, ಶ್ರೀಮತಿ ಲಾವಣ್ಯ ದೇವಿಪ್ರಸಾದ್ ಶೆಟ್ಟಿ ಬಡಗಕಾರಂದೂರು ಶ್ರೀಮತಿ ಸುಮಲತ ನೀರಲ್ಕೆ ಹಾಗೂ ಊರವರು ಉಪಸ್ಥಿತರಿದ್ದರು.

ಸಂಜೆ ಬಳಂಜ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಮತ್ತು ನಾಲ್ಕೂರು ಪಂಚಶ್ರೀ ಕುಣಿತ ಭಜನಾ ಮಂಡಳಿಯವರಿಂದ ನೃತ್ಯ ಭಜನೆ, ಶ್ರೀರಂಗಪೂಜೆ, ರಾತ್ರಿ ಶ್ರೀ ದೇವರ ಉತ್ಸವ, ಉಪಾಹಾರ, ಸಾಂಸ್ಕೃತಿಕ ಕಾರ್ಯಕ್ರಮ, ಕದಂಬ ನಾಟಕ ತಂಡದಿಂದ ರಂಗಭೂಷಣ ಮಣಿ ಕೋಟೆಬಾಗಿಲು ಕಥೆ ಸಂಭಾಷಣೆ ನಿರ್ದೇಶನ ಸಾರಥ್ಯದ ಪಿಂಗಾರ ಕಲಾವಿದೆರ್ ಬೆದ್ರ ಅಭಿನಯಿಸುವ ತುಳು ಹಾಸ್ಯ ನಾಟಕ “ಓಂಕಾರ” ಪ್ರದರ್ಶನಗೊಳ್ಳಲಿದೆ.

Related posts

ಹೊಸಂಗಡಿ ಗ್ರಾ.ಪಂ. ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ‘ನನ್ನ ಗಿಡ ನನ್ನ ಮರ’ ಮತ್ತು ‘ನನ್ನ ನೆಲ ನನ್ನ ಜಲ’ ವಿನೂತನ ಸಪ್ತಾಹ

Suddi Udaya

ಗುಡ್ ಫ್ಯೂಚರ್ ಶಾಲೆಯಲ್ಲಿ ಮಕ್ಕಳ ದಿನಾಚರಣೆ, ವಾರ್ಷಿಕ ಕ್ರೀಡಾಕೂಟ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ:ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯರಾಗಿ ಹರಿದಾಸ್ ಡೋಗ್ರಾರವರು ಮಂಗಳೂರು ವಿಭಾಗದಿಂದ ಆಯ್ಕೆ

Suddi Udaya

ಮಚ್ಚಿನ ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಶ್ರೀ ಈಶ್ವರ ದೇವರ ಗರ್ಭಗುಡಿಯ ಷಡಾಧಾರ ಪ್ರತಿಷ್ಠೆ

Suddi Udaya

ಪದ್ಮುಂಜ ಪ.ಪೂ. ಕಾಲೇಜಿಗೆ ಶೇ. 100 ಫಲಿತಾಂಶ

Suddi Udaya

ಕೊಕ್ಕಡ ಸ.ಪ. ಪೂ. ಕಾಲೇಜಿನಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ

Suddi Udaya
error: Content is protected !!