ಬೆಳ್ತಂಗಡಿ : ಸುಮಾರು 600 ವರ್ಷಗಳ ಪುರಾತನ ಇತಿಹಾಸ ಹೊಂದಿರುವ ಭ | 1008 ಶ್ರೀಪಾರ್ಶ್ವನಾಥ ಸ್ವಾಮಿಯ ಜಿನ ಮಂದಿರವು ಪರಮಪೂಜ್ಯ ಎಲಚಾರ್ಯ ಮುನಿಶ್ರೀ 108 ಶ್ರೀ ಪ್ರಸಂಗ ಸಾಗರ ಮಹಾರಾಜರ ಮಾರ್ಗದರ್ಶನ ಹಾಗೂ ಪವನಾ ಸಾನಿದ್ಯ ದೊಂದಿಗೆ ಪರಮಾಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಾಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ರವರು ಶ್ರೀ ಜೈನ ಮಠ, ಕಾರ್ಕಳ ರವರ ಮಾರ್ಗದರ್ಶನ ದೊಂದಿಗೆ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಧಿಕಾರಿಗಳಾದ ಡಾ. ಡಿ.
ವೀರೇಂದ್ರ ಹೆಗ್ಗಡೆ ಯವರ ಗೌರವ ಅಧ್ಯಕ್ಷತೆಯಲ್ಲಿ, ಧರ್ಮಸ್ಥಳ ಡಿ. ಹರ್ಷೇಂದ್ರ ಕುಮಾರ್ ಅವರ ಗೌರವ ಸಲಹೆಯೊಂದಿಗೆ ಪೂರ್ಣ ನವೀಕರಣಗೊಂಡು, ಸರಕಾರದ ಅನುದಾನದೊಂದಿಗೆ, ಊರ ಪರ ಊರ ಶ್ರಾವಕ ಶ್ರಾವಕಿಯರ ಸಹಕಾರದೊಂದಿಗೆ ಫೆ. 18 ರಿಂದ ಫೆ. 22 ರವರೆಗೆ ಪಂಚಕಲ್ಯಾಣ ಮಹೋತ್ಸವ ಹಾಗೂ ಧಾಮ ಸಂಪ್ರೂಕ್ಷಣಾ ಪೂರ್ವಕ ನೂತನ ಬಿಂಬ ಪ್ರತಿಷ್ಠಾ ಮಹೋತ್ಸವವು ನಡೆಯಲಿದೆ ಎಂದು ಭಗವಾನ್ ಶ್ರೀಪಾರ್ಶ್ವನಾಥ ಸ್ವಾಮಿ ಬಸದಿಯ ಅಧ್ಯಕ್ಷ ಧನಕೀರ್ತಿ ಅರಿಗ ಧರ್ಮಸ್ಥಳ ತಿಳಿಸಿದ್ದಾರೆ.











