22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮುಗೇರಡ್ಕ ದೈವಸ್ಥಾನ ವತಿಯಿಂದ ಅಲೆಕ್ಕಿ ಶಿಶುಮಂದಿರಕ್ಕೆ ಧನ ಸಹಾಯ

ಬೆಳ್ತಂಗಡಿ : ಮೊಗ್ರು ಗ್ರಾಮದ ಮೂವರು ದೈವಗಳ ದೈವಸ್ಥಾನ ಮುಗೇರಡ್ಕದ ವತಿಯಿಂದ  ಮೊಗ್ರು ಗ್ರಾಮದ ಅಲೆಕ್ಕಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀರಾಮ ಶಿಶು ಮಂದಿರದ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲು  ಎಂದು ರೂ. 50000 ದೇಣಿಗೆಯನ್ನು ನೀಡಲಾಯಿತು.

ಮುಗೇರಡ್ಕ ಜಾತ್ರೆಯು ಈ ವರ್ಷ ಜನವರಿ ತಿಂಗಳಲ್ಲಿ ನಡೆದು ಫೆಬ್ರವರಿ ತಿಂಗಳ ಸಂಕ್ರಮಣ ದಿನ ಸ್ವಯಂ ಸೇವಕರಿಗೆ ಅಭಿನಂದನೆ ಮತ್ತು ಲೆಕ್ಕಾಚಾರ ವರದಿ ಮಂಡನೆ ಸಂದರ್ಭದಲ್ಲಿ ಅಲೆಕ್ಕಿ ಶಿಶು ಮಂದಿರದ ಸೇವೆಯನ್ನು ಮನಗಂಡು ಇನ್ನೂ ಹೆಚ್ಚಿನ ಸನಾತನ ಹಿಂದೂ ಸಂಸ್ಕಾರ ಶಿಕ್ಷಣ ನೀಡಲು ಅನುಕೂಲವಾಗಲು ಈ ಮೊತ್ತವನ್ನು ದೈವದ ಪ್ರಸಾದ ಎಂದು ದೈವಸ್ಥಾನ ಸಮಿತಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ನೀಡಲಾಯಿತು.

ಈ ಸಂದರ್ಭದಲ್ಲಿ ಗುತ್ತು ಮನೆ ದೇವಸ್ಯ ರಾಮಣ್ಣ ಗೌಡ ಅಂತರ ಮನೋಹರ್, ಸುಧಾಕರ್ ನ್ಯಾಮರ್, ಬಾಬು ಗೌಡ ಮುಗೇರಡ್ಕ, ಚಂದ್ರಹಾಸ ದೇವಸ್ಯ,ಎರ್ಮಲ  ರಾಮಣ್ಣ ಗೌಡ,ಉಮೇಶ್ ಪರಕಜೆ, ಜಿನ್ನಪ್ಪ ಗೌಡತಿಗೆ, ಕೇಶವ ಜಾಲ್ನಡೆ, ಹಾಗು  ಜೈ ಶ್ರೀರಾಮ ಶಿಶು ಮಂದಿರದ ಅಧ್ಯಕ್ಷರು ಆದ ಅಶೋಕ್ ಬಿ, ರಮೇಶ್ ನೆಕ್ಕರಾಜೆ ಭರತ್ ಜಾಲ್ನಡೆ, ವರುಣ್ ನೆಕ್ಕರಾಜೆ ಮೊದಲದವರು ಉಪಸ್ಥಿತರಿದ್ದರು.

ಅಲೆಕ್ಕಿ ಶಿಶು ಮಂದಿರದ ನಿರ್ಮಾಣ ಸಮಯದಲ್ಲಿ ಇದೇ ರೀತಿಯ ದೊಡ್ಡ ಮೊತ್ತದ ದೇಣಿಗೆ, ಶಿಶು ಮಂದಿರಕ್ಕೆ LED tv ಮತ್ತು DTH ಕೊಡುಗೆ ಹಾಗೇನೇ ಅನ್ನಯಜ್ಞ ಕ್ಕೆ ಪೂರಕವಾಗಿ ದೈವದ ಗದ್ದೆ ನೀಡಿದ ಮತ್ತು ಈ ವರ್ಷ ನೀಡಿದ ದೇಣಿಗೆಗೆ  ದೈವಸ್ಥಾನ ಆಡಳಿತ ಮಂಡಳಿಗೆ ಧನ್ಯವಾದಗಳನ್ನು ಅಶೋಕ್ ಬರುoಗುಡೆಲ್ ಅಧ್ಯಕ್ಷರು ಜೈ ಶ್ರೀರಾಮ್ ಫ್ರೆಂಡ್ಸ್ ಕ್ಲಬ್ ಅಲೆಕ್ಕಿ ಈ ಸಂದರ್ಭದಲ್ಲಿ ತಿಳಿಸಿದರು.

Related posts

ಬ್ರಹ್ಮವಾರ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪ್ರಕರಣ: ವಿಚಾರಣೆಗಾಗಿ ಮಹೇಶ್ ಶೆಟ್ಟಿ ತಿಮರೋಡಿ ಬೆಳ್ತಂಗಡಿ ಪೊಲೀಸ್‌ ಠಾಣೆಗೆ ಹಾಜರು

Suddi Udaya

ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜಿನಲ್ಲಿ ಅಂತರ್ ಕಾಲೇಜು ಭಾಷಣ ಮತ್ತು ಚರ್ಚಾ ಸ್ಪರ್ಧೆಯ ಬಹುಮಾನ ವಿತರಣೆ

Suddi Udaya

ಫೆ.4-5: ಬರ್ಕಜೆ ಶ್ರೀ ದುರ್ಗಾಪರಮೇಶ್ವರಿ ಮತ್ತು ನವಗುಳಿಗ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ

Suddi Udaya

ವಿದ್ಯಾರ್ಥಿಗೆ ಬೆತ್ತದಿಂದ ಥಳಿಸಿದ ಶಿಕ್ಷಕನ ವಿರುದ್ದ ದೂರು ದಾಖಲು

Suddi Udaya

ಮಚ್ಚಿನ ಸರಕಾರಿ ಪ್ರೌಢಶಾಲೆಗೆ ಬ್ಯಾಂಕ್ ಆಫ್ ಬರೋಡ ವತಿಯಿಂದ ಟೇಬಲ್ ಹಾಗೂ ಹಣ್ಣಿನ ಗಿಡ ವಿತರಣೆ

Suddi Udaya

ಉಜಿರೆ ಲಕ್ಷ್ಮೀ ಜನಾರ್ದನ ಹಾಗೂ ಶ್ರೀ ಉಮಾಮಹೇಶ್ವರ ಸಾನಿಧ್ಯದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ನಾಗದೇವರ ಶಿಲಾ ಪ್ರತಿಷ್ಠೆ ಹಾಗೂ ಶ್ರೀ ಪಂಜುರ್ಲಿ ದೈವದ ಪ್ರತಿಷ್ಠಾ ಮಹೋತ್ಸವ ಮತ್ತು ಶ್ರೀ ಲಕ್ಷ್ಮೀ ಜನಾರ್ದನ ಹಾಗೂ ಶ್ರೀ ಉಮಾಮಹೇಶ್ವರ ದೇವರ ಗರ್ಭಗುಡಿಯ ಶಿಲಾನ್ಯಾಸ

Suddi Udaya
error: Content is protected !!