25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ನಿಡಿಗಲ್: ನಡ್ವಾಲ್ ಸಿರಿಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಕಲ್ಮಂಜ: ಇತಿಹಾಸ ಪ್ರಸಿದ್ಧ ಸಿರಿಗಳ ಆಲಡೆ ಕ್ಷೇತ್ರ ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನ ನಿಡಿಗಲ್ ನಲ್ಲಿ ಮಾ31ರಿಂದ ಎ.4ರವರೆಗೆ ನಡೆಯುವ ಇತಿಹಾಸ ಪ್ರಸಿದ್ಧ ನಡ್ವಾಲ್ ಸಿರಿಜಾತ್ರ ಮಹೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಮಾ.8ರಂದು ದೇವಸ್ಥಾನದ ವಠಾರದಲ್ಲಿ ನಡೆಯಿತು.

ಆಮಂತ್ರಣ ಪತ್ರಿಕೆಯನ್ನು ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ ಸ್ವಾಮಿ ಪ್ರಸಾದ್ ನಿಡ್ಲೆ ಬಿಡುಗಡೆಗೊಳಿಸಿ ಕ್ಷೇತ್ರದಲ್ಲಿ ನಡೆಯುವ ನಡ್ವಾಲ್ ಸಿರಿಜಾತ್ರ ಮಹೋತ್ಸವ ವಿಜೃಂಭಣೆಯಿಂದ ಅಚ್ಚುಕಟ್ಟಾಗಿ ನಡೆಯಬೇಕು ಹಾಗೂ ಸಮಿತಿಯವರು ಹಾಗೂ ಊರವರೆಲ್ಲರೂ ಸೇರಿ ಈ ವರ್ಷ ಅದ್ದೂರಿಯಾಗಿ ಮಾದರಿ ಜಾತ್ರೋತ್ಸವ ನಡೆಸೋಣ ಜಾತ್ರೋತ್ಸವದ ಯಶಸ್ಸಿನಲ್ಲಿ ತಮ್ಮೆಲ್ಲರ ಸಹಕಾರ ಇರಲಿ ಎಂದರು.

ವೇದಿಕೆಯಲ್ಲಿ ಜಾತ್ರೋತ್ಸವ ಸಮಿತಿಯ ಪ್ರಧಾನ ಸಂಚಾಲಕ ಪಾಂಡುರಂಗ ಮರಾಟೆ ಹಡೀಲು, ಚಂದ್ರಹಾಸ ಪಟವರ್ಧನ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗುರುರಾಜ್ ಗುರಿಪಳ್ಳ, ಜಾತ್ರೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸದಾನಂದ ಪೂಜಾರಿ ಕೊಡೆಕ್ಕಲ್, ಅರ್ಚಕರಾದ ಹೆಚ್ ಎಸ್ ಮಾಧವ ಶರ್ಮ, ಮಂಗಳೂರಿನ ವಕೀಲರಾದ ಹರೀಶ್ ಆಳ್ವಾ, ಶ್ರೀಮತಿ ಸುಧಾ ನಾಗೇಶ್ ಕುಮಾರ್ ಗೌಡ, ಸಮಿತಿ ಸದಸ್ಯರಾದ ಯಶೋಧರ ಗೌಡ ಕೊಡ್ಡೋಲು, ಪ್ರಸಾದ್ ಕುಮಾರ್, ನಾಗೇಶ್ ಎಂ, ನಾಣ್ಯಪ್ಪ ಪೂಜಾರಿ, ಗುರುರಾಘವೇಂದ್ರ ಭಜನಾ ಮಂದಿರದ ಅಧ್ಯಕ್ಷರಾದ ಹರೀಶ್ ಕೆ, ಪ್ರಕಾಶ್ ಕುಮಾರ್ ಎಳನೀರು , ರಾಜೇಶ್ ಪೂಜಾರಿ ಗೋಳಿದೊಟ್ಟು, ಶ್ರೀಮತಿ ಬೇಬಿ ಉಮೇಶ್, ಶ್ರೀಮತಿ ಕುಸುಮ ಶೆಟ್ಟಿ ಕೋಡ್ಡೋಳು, ಅಂಜಲಿ ಶೆಟ್ಟಿ ಸುಪ್ರೀತಾ ಶೆಟ್ಟಿ ಗುತ್ತಿಲ್ಲಾರಬೆಟ್ಟು, ರತ್ನಾಕರ ಪೂಜಾರಿ ಗೋಲಿದೊಟ್ಟು ಸಂತೋಷ್ ಗೌಡ ಗೋಳಿದೊಟ್ಟು, ಸುಭಾಷ್ ಶೆಟ್ಟಿಗಾರ್, ಶ್ರೀಮತಿ ರೇಖಾ ಭಾಲಕೃಷ್ಣ ನಾಯ್ಕ , ವಿಘ್ನೇಶ್ ನಾಯ್ಕ, ಪ್ರವೀಣ್ ಗೌಡ, ಜಯಾನಂದ ಪಾಲೆದಡಿ, ಶ್ರೀಮತಿ ವಿನಯಪ್ರಕಾಶ್ ಶೆಟ್ಟಿ, ಶ್ರೀಮತಿ, ಗಂಗಯ್ಯ ಕುಂಬಾರ, ವಿಘ್ನೇಶ್ ಪೂಜಾರಿ, ಪ್ರಜ್ವಲ್ ಹೆಬ್ಬಾರ್ಧೋಡಿ, ಸೀತಾಲಕ್ಷ್ಮಿ ಹಾಗೂ ಊರವರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಆಗ್ರಹಿಸಿ ವಿಮೆನ್ ಇಂಡಿಯಾ ಮೂವ್ಮೆಂಟ್ ವತಿಯಿಂದ ನಗರ ಪಂಚಾಯತ್ ಗೆ ಮನವಿ

Suddi Udaya

ಕಳೆಂಜ : ಬಿಜೆಪಿ ಕಾರ್ಯಕರ್ತರಿಂದ ಬೈಕ್ ಜಾಥಾ

Suddi Udaya

ಎರಡು ವರ್ಷಗಳ ಹಿಂದೆ ನಡೆದಿದ್ದ ಮನೆ ಕಳವು ಪ್ರಕರಣ ಭೇದಿಸಿದ ಬೆಳ್ಳಾರೆ ಪೊಲೀಸರು: ಆರೋಪಿ ನೆರಿಯದ ಶರತ್ ಬಂಧನ

Suddi Udaya

ನಾವೂರು ಗ್ರಾಮ ಪಂಚಾಯತ್ ನ ವಿಶೇಷ ಗ್ರಾಮ ಸಭೆ

Suddi Udaya

ಭಾರತ್ ಕೋ ಆಪರೇಟಿವ್ ಬ್ಯಾಂಕ್ ಮುಂಬೈ ಲಿಮಿಟೆಡ್ ಇದರ ನೂತನ ನಿರ್ದೇಶಕರಾಗಿ ಮುಂಬಯಿ ಉದ್ಯಮಿ ನಾರಾಯಣ ಸುವರ್ಣ ಮರೋಡಿ ಆಯ್ಕೆ

Suddi Udaya

ಉಜಿರೆ ಎಸ್.ಡಿ.ಎಮ್ ಸಮೂಹ ಶಿಕ್ಷಣ ಸಂಸ್ಥೆಗಳಿಂದ ಶಾಲಾ ವಿದ್ಯಾರ್ಥಿಗಳಿಗೆ ‘ಮ್ಯೂಸಿಯಂ ಆನ್ ವೀಲ್’ ಕಾರ್ಯಾಗಾರ

Suddi Udaya
error: Content is protected !!