September 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಹಿಂದೂ ಕಮಿಟಿ ಹಾರ್ಝಿಲಿಯ ಇಸ್ರೇಲ್ ಸಂಘಟನೆಯಿಂದ ವೈದ್ಯಕೀಯ ನೆರವು ಹಸ್ತಾಂತರ-ಅಶಕ್ತ ಕುಟುಂಬಕ್ಕೆ ಆರ್ಥಿಕ ಸಹಕಾರ

ಬೆಳ್ತಂಗಡಿ: ಮರೋಡಿ ಗ್ರಾಮದ ಗಿರಿಜಾ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಅವರ ವೈದ್ಯಕೀಯ ಚಿಕಿತ್ಸೆಗಾಗಿ ರೂ 20 ಸಾವಿರ ಹಾಗೂ ಮರೋಡಿ ನಂದಿಲ ಸುಂದರವರು ಒಂದು ಕೈ ಇಲ್ಲದೆ ಅತಿ ಕಡು ಬಡತನದಲ್ಲಿದ್ದು ಅವರ ಮನೆ ದುರಸ್ತಿಗಾಗಿ ರೂ 20 ಸಾವಿರ ನೆರವನ್ನು ಹಿಂದೂ ಕಮಿಟಿ ಹಾರ್ಝಿಲಿಯ ಇಸ್ರೇಲ್ ಸಂಘಟನೆ ಆರ್ಥಿಕ ನೆರವನ್ನು ನೀಡಿ ಸಹಕರಿಸಿದೆ.

ಈ ನೆರವನ್ನು ಮರೋಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರತ್ನಾಕರ್ ಬುಣ್ಣನ್, ಬಾಲಕೃಷ್ಣ ಬಂಗೇರ, ಪದ್ಮಶ್ರೀ ಜೈನ್ ಹಸ್ತಾಂತರಿಸಿದರು. ಮಾಜಿ ಸದಸ್ಯರು ಉಮೇಶ್ ಸಾಲಿಯಾನ್ ಜೊತೆಯಲ್ಲಿದ್ದರು

ಮರೋಡಿ ಹಾಗೂ ನಾರಾವಿ ಪರಿಸರದ ಅನೇಕ ಮಂದಿ ಕಳೆದ ಹಲವು ವರ್ಷಗಳಿಂದ ಇಸ್ರೇಲ್ ನಲ್ಲಿ ಉದ್ಯೋಗದಲ್ಲಿದ್ದು ಅವರು ಊರಿನ ಮೇಲಿನ ಪ್ರೀತಿಯಿಂದ ಇಸ್ರೇಲ್ ನಲ್ಲಿ ಹಿಂದೂ ಕಮಿಟಿ ಹಾರ್ಝಿಲಿಯ ಇಸ್ರೇಲ್ ಸಂಘಟನೆ ಕಟ್ಟಿಕೊಂಡು
ಊರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ,ಅನಾರೋಗ್ಯದಿಂದ ಬಳಲುತ್ತಿರುವ ಕುಟುಂಬಕ್ಕೆ ವೈದ್ಯಕೀಯ ನೆರವು,ಅಶಕ್ತ ಕುಡುಂಬಗಳಿಗೆ ಆರ್ಥಿಕ ನೆರವು ಜೊತೆಗೆ ವಿವಿಧ ರೀತಿಯಲ್ಲಿ ಊರಿಗೆ ಸಹಕಾರ ನೀಡುತ್ತಿದ್ದಾರೆ.

Related posts

ಕುವೆಟ್ಟು ಗ್ರಾ.ಪಂ.ನಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಧರ್ಮಸ್ಥಳ ಭಜನಾ ಪರಿಷತ್ ಪದಾಧಿಕಾರಿಗಳ ವಾರ್ಷಿಕ ಸಭೆ

Suddi Udaya

ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯಲ್ಲಿ “ಪ್ರಥಮ ಚಿಕಿತ್ಸೆ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಶಿಬಿರ

Suddi Udaya

ಮೇಲಂತಬೆಟ್ಟು ವಿಶೇಷಚೇತನರ ಸಮನ್ವಯ ಗ್ರಾಮಸಭೆ

Suddi Udaya

ಉಜಿರೆ : ಕಾಲೇಜು ವಿದ್ಯಾರ್ಥಿ ಚಂದ್ರಶೇಖರ್ ಗೌಡ ನಿಧನ

Suddi Udaya

ಬಂಗ್ವಾಡಿ ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ವಾರ್ಷಿಕ ಮಹಾರಥೋತ್ಸವ

Suddi Udaya
error: Content is protected !!