29.8 C
ಪುತ್ತೂರು, ಬೆಳ್ತಂಗಡಿ
June 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ಶುಭ ಜ್ಯುವೆಲ್ಲರ್ಸ್ & ವರ್ಕ್ಸ್ ನಲ್ಲಿ “ಶುಭ-ಗೋಲ್ಡ್” ಸ್ಕೀಮ್ ಪ್ರಾರಂಭ: ಸಂಸ್ಥೆಯ ನೂತನ ರಾಯಭಾರಿ ಚಲನಚಿತ್ರ ನಟಿ ಸಿಂಚನ ಪಿ ರಾವ್ ರಿಂದ ಪೋಸ್ಟರ್ ಅನಾವರಣ

ಉಜಿರೆ: ಉಜಿರೆಯ ಮಾಡ ಕಾಂಪ್ಲೆಕ್ಸ್ ನಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ, ಗ್ರಾಹಕರ ನಂಬಿಕೆಗೆ ಹೆಸರುವಾಸಿಯಾಗಿರುವ ಹಾಗೂ ಸದಾ ನಗುಮೊಗದ ಸೇವೆಯನ್ನು ನೀಡುತ್ತಿರುವ ಸುಧಾಕರ ಆಚಾರ್ಯ ರವರ ಮಾಲಕತ್ವದ ಶುಭ ಜ್ಯುವೆಲ್ಲರ್ಸ್ & ವರ್ಕ್ಸ್ ನಲ್ಲಿ ಚಿನ್ನದ ಬೆಲೆ ಸುರಕ್ಷಿತಗೊಳಿಸಲು ಗ್ರಾಹಕರಿಗಾಗಿ ಶುಭ-ಗೋಲ್ಡ್” ಸ್ಕೀಮ್ ಪ್ರಾರಂಭಗೊಂಡಿರುತ್ತದೆ.

ಸಂಸ್ಥೆಯ ನೂತನ ರಾಯಭಾರಿ ಚಲನಚಿತ್ರ ನಟಿ ಉಜಿರೆಯ ಸಿಂಚನ ಪಿ ರಾವ್ ಅವರು ಗೋಲ್ಡ್ ಸ್ಕೀಮ್ ನ ಪೋಸ್ಟರ್ ನ್ನು ಇತ್ತೀಚಿಗಷ್ಟೇ ಅನಾವರಣ ಮಾಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕ ಸುಧಾಕರ ಆಚಾರ್ಯ, ಸಾಂಘವಿ ಡಿಸೈನ್ಸ್ ಮಾಲಕ ರಾಜೇಂದ್ರ ಗೌಡ ಮತ್ತು ಸತ್ಯನಾರಾಯಣ ಫ್ಯಾನ್ಸಿ ಮಾಲಕ ಆನಂದ ಪೂಜಾರಿ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

ಶುಭ ಗೋಲ್ಡ್ ಯೋಜನೆಯ ಲಾಭಗಳು:- ಚಿನ್ನದ ಬೆಲೆ ಏರಿಕೆಯಿಂದ ಸುರಕ್ಷಿತ. ಕಂತು ಪಾವತಿಯ ದಿನದ ಚಿನ್ನದ ದರದಲ್ಲಿ ನಿವ್ವಳ ತೂಕದ ಚಿನ್ನ ಖಾತೆಗೆ ಜಮಾ. ಕಂತು ಪಾವತಿಗೆ ಮಿತಿಯಿಲ್ಲ. ಅವಧಿ ಪೂರ್ಣ ಕಂತು ಪಾವತಿಗೆ ಬೋನಸ್ ಕೊಡಲಾಗುವುದು.

ಷರತ್ತುಗಳು: ಚಿನ್ನ – ಬೆಳ್ಳಿ ಆಭರಣ ರೂಪದಲ್ಲಿ ಮಾತ್ರ ಕೊಡಲಾಗುವುದು.
ಸದಸ್ಯರು ತಿಂಗಳ ಕಂತನ್ನು ಪ್ರತೀ ತಿಂಗಳ 15ನೇ ತಾರೀಕಿನೊಳಗೆ ಪಾವತಿಸತಕ್ಕದ್ದು.
NEFT/UPI ಮುಖಾಂತರ ಪಾವತಿಸಿದ್ದಲ್ಲಿ ‘Screenshot’ ಅನ್ನು 916 4 916 2 88 ನಂಬರ್‌ಗೆ WhatsApp ಮಾಡತಕ್ಕದ್ದು.
ಯೋಜನೆ ಪೂರ್ಣಗೊಳ್ಳುವ ಮೊದಲೇ ಕಟ್ಟಿದ ಕಂತಿನ ಮೌಲ್ಯದ ಆಭರಣ ಪಡೆದುಕೊಂಡಲ್ಲಿ ಬೋನಸ್ ಪಡೆಯಲು ಅರ್ಹರಲ್ಲ. ಯೋಜನೆಯ ಕೊನೆಗೆ ಅಥವಾ ಮುಂದಿನ 30 ದಿನಗಳ ಒಳಗಾಗಿ ಚಿನ್ನ-ಬೆಳ್ಳಿ ಆಭರಣಗಳನ್ನು ಮಾಡಿಕೊಡಲಾಗುವುದು. ಯೋಜನೆಯ ಕೊನೆಯಲ್ಲಿ ತಮ್ಮ ಕಾರ್ಡ್ ಕಡ್ಡಾಯ.

Related posts

ಮಡಂತ್ಯಾರು ಬ್ರದರ್ಸ್ ಸಾಲುಮರ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಕಳೆಂಜ: ವಳಗುಡ್ಡೆ ನಿವಾಸಿ ಶೀನಪ್ಪ ಗೌಡ ನಿಧನ

Suddi Udaya

ಬ್ರಾಂಡೆಡ್ ಬಟ್ಟೆ ಖರೀದಿಗೆ ಸುವರ್ಣಾವಕಾಶ! ಶೇ.80 ರವರೆಗೆ ಬ್ರಾಂಡೆಡ್ ಬಟ್ಟೆಗಳ ಮೇಲೆ ಭಾರೀ ರಿಯಾಯಿತಿ

Suddi Udaya

ಮೃತದೇಹ ಹೂತು ಹಾಕಿದ ಪ್ರಕರಣ: 8ನೇ ಗುರುತು ಮಾಡಿದ ಜಾಗದಲ್ಲಿ ಸಿಗದ ಕಳೇಬರ

Suddi Udaya

ಧರ್ಮಸ್ಥಳ ನೇತ್ರಾವತಿ ಸೇತುವೆಯ ಬಳಿ ಅಪರಿಚಿತ ಮಹಿಳೆಯ ಶವ ಪತ್ತೆ : ವಾರೀಸುದಾರರು ಧರ್ಮಸ್ಥಳ ಠಾಣೆಯನ್ನು ಸಂಪರ್ಕಿಸುವಂತೆ ಮನವಿ

Suddi Udaya

ಲಾಯಿಲ ಗ್ರಾಮಸಭೆಯಲ್ಲಿ ಗ್ರಾ.ಪಂ ಮತ್ತು ಅಧಿಕಾರಿಗಳ ನಿದ್ರಾವಸ್ಥೆಯನ್ನು ಖಂಡಿಸಿ ಶೇಖರ್ ಲಾಯಿಲ ಪಂಚಾಯತ್ ಸಭಾಭವನದ ಎದುರು ನಿದ್ದೆ ಮಾಡುವ ಮೂಲಕ ಆಕ್ರೋಶ

Suddi Udaya
error: Content is protected !!