28.6 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ಶುಭ ಜ್ಯುವೆಲ್ಲರ್ಸ್ & ವರ್ಕ್ಸ್ ನಲ್ಲಿ “ಶುಭ-ಗೋಲ್ಡ್” ಸ್ಕೀಮ್ ಪ್ರಾರಂಭ: ಸಂಸ್ಥೆಯ ನೂತನ ರಾಯಭಾರಿ ಚಲನಚಿತ್ರ ನಟಿ ಸಿಂಚನ ಪಿ ರಾವ್ ರಿಂದ ಪೋಸ್ಟರ್ ಅನಾವರಣ

ಉಜಿರೆ: ಉಜಿರೆಯ ಮಾಡ ಕಾಂಪ್ಲೆಕ್ಸ್ ನಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ, ಗ್ರಾಹಕರ ನಂಬಿಕೆಗೆ ಹೆಸರುವಾಸಿಯಾಗಿರುವ ಹಾಗೂ ಸದಾ ನಗುಮೊಗದ ಸೇವೆಯನ್ನು ನೀಡುತ್ತಿರುವ ಸುಧಾಕರ ಆಚಾರ್ಯ ರವರ ಮಾಲಕತ್ವದ ಶುಭ ಜ್ಯುವೆಲ್ಲರ್ಸ್ & ವರ್ಕ್ಸ್ ನಲ್ಲಿ ಚಿನ್ನದ ಬೆಲೆ ಸುರಕ್ಷಿತಗೊಳಿಸಲು ಗ್ರಾಹಕರಿಗಾಗಿ ಶುಭ-ಗೋಲ್ಡ್” ಸ್ಕೀಮ್ ಪ್ರಾರಂಭಗೊಂಡಿರುತ್ತದೆ.

ಸಂಸ್ಥೆಯ ನೂತನ ರಾಯಭಾರಿ ಚಲನಚಿತ್ರ ನಟಿ ಉಜಿರೆಯ ಸಿಂಚನ ಪಿ ರಾವ್ ಅವರು ಗೋಲ್ಡ್ ಸ್ಕೀಮ್ ನ ಪೋಸ್ಟರ್ ನ್ನು ಇತ್ತೀಚಿಗಷ್ಟೇ ಅನಾವರಣ ಮಾಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕ ಸುಧಾಕರ ಆಚಾರ್ಯ, ಸಾಂಘವಿ ಡಿಸೈನ್ಸ್ ಮಾಲಕ ರಾಜೇಂದ್ರ ಗೌಡ ಮತ್ತು ಸತ್ಯನಾರಾಯಣ ಫ್ಯಾನ್ಸಿ ಮಾಲಕ ಆನಂದ ಪೂಜಾರಿ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

ಶುಭ ಗೋಲ್ಡ್ ಯೋಜನೆಯ ಲಾಭಗಳು:- ಚಿನ್ನದ ಬೆಲೆ ಏರಿಕೆಯಿಂದ ಸುರಕ್ಷಿತ. ಕಂತು ಪಾವತಿಯ ದಿನದ ಚಿನ್ನದ ದರದಲ್ಲಿ ನಿವ್ವಳ ತೂಕದ ಚಿನ್ನ ಖಾತೆಗೆ ಜಮಾ. ಕಂತು ಪಾವತಿಗೆ ಮಿತಿಯಿಲ್ಲ. ಅವಧಿ ಪೂರ್ಣ ಕಂತು ಪಾವತಿಗೆ ಬೋನಸ್ ಕೊಡಲಾಗುವುದು.

ಷರತ್ತುಗಳು: ಚಿನ್ನ – ಬೆಳ್ಳಿ ಆಭರಣ ರೂಪದಲ್ಲಿ ಮಾತ್ರ ಕೊಡಲಾಗುವುದು.
ಸದಸ್ಯರು ತಿಂಗಳ ಕಂತನ್ನು ಪ್ರತೀ ತಿಂಗಳ 15ನೇ ತಾರೀಕಿನೊಳಗೆ ಪಾವತಿಸತಕ್ಕದ್ದು.
NEFT/UPI ಮುಖಾಂತರ ಪಾವತಿಸಿದ್ದಲ್ಲಿ ‘Screenshot’ ಅನ್ನು 916 4 916 2 88 ನಂಬರ್‌ಗೆ WhatsApp ಮಾಡತಕ್ಕದ್ದು.
ಯೋಜನೆ ಪೂರ್ಣಗೊಳ್ಳುವ ಮೊದಲೇ ಕಟ್ಟಿದ ಕಂತಿನ ಮೌಲ್ಯದ ಆಭರಣ ಪಡೆದುಕೊಂಡಲ್ಲಿ ಬೋನಸ್ ಪಡೆಯಲು ಅರ್ಹರಲ್ಲ. ಯೋಜನೆಯ ಕೊನೆಗೆ ಅಥವಾ ಮುಂದಿನ 30 ದಿನಗಳ ಒಳಗಾಗಿ ಚಿನ್ನ-ಬೆಳ್ಳಿ ಆಭರಣಗಳನ್ನು ಮಾಡಿಕೊಡಲಾಗುವುದು. ಯೋಜನೆಯ ಕೊನೆಯಲ್ಲಿ ತಮ್ಮ ಕಾರ್ಡ್ ಕಡ್ಡಾಯ.

Related posts

ಸೈಂಟ್‌ ಮೇರಿಸ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ.100 ಫಲಿತಾಂಶ

Suddi Udaya

ಪುದುವೆಟ್ಟು: ಮಿಯಾರು ನಿವಾಸಿ ಶೇಖರ್ ಗೌಡ ವಿಷ ಸೇವಿಸಿ ಆತ್ಮಹತ್ಯೆ

Suddi Udaya

ಬೆಳಾಲು ಶ್ರೀ ಧ.ಮಂ. ಪ್ರೌಢ ಶಾಲೆಯಲ್ಲಿ ಮಕ್ಕಳ ಆರೋಗ್ಯ ತಪಾಸಣೆ

Suddi Udaya

ಲಾಯಿಲ ಗ್ರಾ.ಪಂ. ಅಧ್ಯಕ್ಷರಾಗಿ ಜಯಂತಿ ಎಂ.ಕೆ. ಉಪಾಧ್ಯಕ್ಷರಾಗಿ ಸುಗಂಧಿ ಜಗನ್ನಾಥ್ ಆಯ್ಕೆ

Suddi Udaya

ಬಳಂಜ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಪ್ರವೀಣ್ ಕುಮಾರ್ ಹೆಚ್.ಎಸ್ ಆಯ್ಕೆ

Suddi Udaya

ಲಾಯಿಲ: ಕುಂಟಿನಿ ಸ.ಕಿ.ಪ್ರಾ. ಶಾಲಾ ಪ್ರಾರಂಭೋತ್ಸವ

Suddi Udaya
error: Content is protected !!