26.9 C
ಪುತ್ತೂರು, ಬೆಳ್ತಂಗಡಿ
April 24, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಸಂಘ-ಸಂಸ್ಥೆಗಳು

ಭಂಡಾರಿ ಯುವ ವೇದಿಕೆ ಬೆಳ್ತಂಗಡಿ: ಅಧ್ಯಕ್ಷರಾಗಿ ಪ್ರಶಾಂತ್ ಭಂಡಾರಿ ಅಂಡಿಂಜೆ, ಪ್ರಧಾನ ಕಾರ್ಯದರ್ಶಿಯಾಗಿ ಅಭಿಜಿತ್ ಭಂಡಾರಿ ಕನ್ಯಾಡಿ

ಬೆಳ್ತಂಗಡಿ: ಯುವಶಕ್ತಿ ಯಾವುದೇ ಸಮಾಜದ ಬೆನ್ನೆಲುಬು. ಸಂಘಟಿತ ಯುವಕರಿಂದ ಸಮಾಜದ ಅಭಿವೃದ್ಧಿ ವೇಗವಾಗಿ ನಡೆಯುತ್ತದೆ. ಈ ದಿಟ್ಟ ಉದ್ದೇಶವನ್ನು ಮನದಲ್ಲಿ ಇಟ್ಟುಕೊಂಡು ಭಂಡಾರಿ ಯುವ ವೇದಿಕೆ ಬೆಳ್ತಂಗಡಿ ತನ್ನ ನೂತನ ಸಮಿತಿಯನ್ನು ರಚಿಸಿರುವುದು ಅತ್ಯಂತ ಸಂತಸದ ವಿಷಯವಾಗಿದೆ.

ಭಂಡಾರಿ ಯುವ ವೇದಿಕೆ ಬೆಳ್ತಂಗಡಿ ಇದರ ನೂತನ ಸಮಿತಿ ರಚನೆ ಕಾರ್ಯಕ್ರಮವು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಭಂಡಾರಿ ಸಮಾಜದ ಅಧ್ಯಕ್ಷ ಉಮೇಶ್ ಭಂಡಾರಿ ಉಜಿರೆ ಉಪಸ್ಥಿತರಿದ್ದರು.

2026–27ನೇ ಸಾಲಿನ ಗೌರಾಧ್ಯಕ್ಷರಾಗಿ ವಿಶ್ವನಾಥ್ ಭಂಡಾರಿ ಉಜಿರೆ, ಅಧ್ಯಕ್ಷರಾಗಿ ಪ್ರಶಾಂತ್ ಭಂಡಾರಿ ಅಂಡಿಂಜೆ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಅಭಿಜಿತ್ ಭಂಡಾರಿ ಕನ್ಯಾಡಿ, ಕೋಶಾಧಿಕಾರಿಯಾಗಿ ಗಣೇಶ್ ಭಂಡಾರಿ (ರೇಷ್ಮೆ ರೋಡ್), ಜೊತೆ ಕಾರ್ಯದರ್ಶಿಯಾಗಿ ಸೌದೇಶ್ ಭಂಡಾರಿ (ನೆರಿಯ), ಉಪಾಧ್ಯಕ್ಷರಾಗಿ ಶೋಧನ್ ಭಂಡಾರಿ (ಲಾಯಿಲ), ಸಂಘಟನಾ ಕಾರ್ಯದರ್ಶಿಗಳಾಗಿ ರವಿ ಭಂಡಾರಿ ಹಾಗೂ ಸುರೇಶ್ ಭಂಡಾರಿ (ಅಗರಿ) ಆಯ್ಕೆಯಾದರು.

ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿಗಳಾಗಿ ಸತೀಶ್ ಭಂಡಾರಿ (ನಾಳ) ಹಾಗೂ ಅರ್ಪಿತ್ ಭಂಡಾರಿ (ಕನ್ಯಾಡಿ), ಕ್ರೀಡಾ ಸಮಿತಿ ಕಾರ್ಯದರ್ಶಿಗಳಾಗಿ ಪ್ರಶಾಂತ್ ಭಂಡಾರಿ (ಅರುವ) ಹಾಗೂ ಹಿತೇಶ್ ಭಂಡಾರಿ (ಕೊಂಡೊಟ್ಟು) ಆಯ್ಕೆಯಾದರು.

ಸದಸ್ಯರಾಗಿ ಮಿಥುನ್ ಭಂಡಾರಿ, ರಂಜು (ಕೊಕ್ಕಡ), ಭರತ್ ರಾಜ್ ಭಂಡಾರಿ (ಉಜಿರೆ), ಸುಧಾಕರ ಭಂಡಾರಿ (ಉಜಿರೆ), ವಸಂತ ಭಂಡಾರಿ (ಅಗರಿ), ಹರಿಪ್ರಸಾದ್ ಭಂಡಾರಿ (ನೆರಿಯ), ಸಚಿನ್ ಭಂಡಾರಿ (ಅರುವ), ರವಿಚಂದ್ರ ಭಂಡಾರಿ (ಸೋಮಂತಡ್ಕ ಮತ್ತು ಸುದರ್ಶನ ಭಂಡಾರಿ (ಗರ್ಡಾಡಿ) ಸುರೇಶ್ ಭಂಡಾರಿ (ಅರುವ )ಆಯ್ಕೆಯಾದರು.

ಗೌರವ ಸಲಹೆಗಾರರಾಗಿ ಉಮೇಶ್ ಭಂಡಾರಿ (ಉಜಿರೆ), ಪೂವಪ್ಪ ಭಂಡಾರಿ (ಮದ್ದಡ್ಕ) ಹಾಗೂ ಅಶೋಕ್ ಭಂಡಾರಿ (ಗುಂಡಿಯಲ್ಕೆ) ಆಯ್ಕೆಯಾದರು.

ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರು ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಭಾಂದವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಇದೇ ವೇಳೆ ಏಪ್ರಿಲ್ 14ರಂದು ಗುರುವಾಯನಕೆರೆ ಪಣೆಜಾಲುವಿನಲ್ಲಿ ಭಂಡಾರಿ ಸಮಾಜಕ್ಕೆ ಮೀಸಲಿಟ್ಟ ಜಾಗದಲ್ಲಿ ವಾರ್ಷಿಕ ಸಭೆ, ಸತ್ಯನಾರಾಯಣ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ತೀರ್ಮಾನಿಸಲಾಯಿತು.

Related posts

ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಅಡಿಕೆ ಸಮರ್ಪಣೆ

Suddi Udaya

ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದ ವಿದ್ಯಾರ್ಥಿನಿಯರು: ಬಸ್ ಚಾಲಕ ಮತ್ತು ನಿರ್ವಾಹಕನ ವಿರುದ್ಧ ಪ್ರಕರಣ ದಾಖಲು

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅರ್ಜುನ್ ಜನ್ಯ ದಂಪತಿ ಭೇಟಿ

Suddi Udaya

ಪಣಕಜೆ ನಿವಾಸಿ ನೀಲಯ್ಯ ಮೂಲ್ಯ ಕಡ್ತ್ಯಾರ್ ನಿಧನ

Suddi Udaya

ಬೆಳ್ತಂಗಡಿ: ಶ್ರೀ ಧ.ಮಂ. ಆಂ.ಮಾ. ಶಾಲೆಯಲ್ಲಿ ತಂಬಾಕು ರಹಿತ ದಿನ

Suddi Udaya

ತೆಕ್ಕಾರು ಪ್ರಾ.ಕೃ.ಪ. ಸಹಕಾರಿ ಸಂಘಕ್ಕೆ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಸಾಧನಾ ಪ್ರಶಸ್ತಿ

Suddi Udaya
error: Content is protected !!