September 6, 2026
ಅಭಿನಂದನೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಲೋಕೇಶ್ವರಿ ವಿನಯಚಂದ್ರರವರಿಗೆ ಸ್ವಗ್ರಾಮದಲ್ಲಿ ಗೌರವಾರ್ಪಣೆ

ಕಡಿರುದ್ಯಾವರ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಹಾಗೂ ಸಾಹಿತ್ಯ ಸಂಸ್ಕೃತಿಯವರು ೨೦೨೫ನೇ ವರ್ಷದ ಗೌರವ ಪ್ರಶಸ್ತಿ ನೀಡಿ ಗೌರವಿಸಿದ ಕಡಿರುದ್ಯಾವರ ಗ್ರಾಮದ ವಳಂಬ್ರ ಲೋಕೇಶ್ಚರಿ ವಿನಯಚಂದ್ರ ರವರಿಗೆ ಸ್ಥಳೀಯ ಶ್ರೀ ವಿದ್ಯಾ ಸರಸ್ವತಿ ಮಹಿಳಾ ಮಂಡಲ ಹಾಗೂ ಶ್ರೀ ವಿದ್ಯಾ ಸರಸ್ವತಿ ಸ್ವಸಹಾಯದ ವತಿಯಿಂದ ಮಹಿಳಾ ಮಂಡಲದಲ್ಲಿ ಸನ್ಮಾನಿಸಲಾಯಿತು. ಎರಡೂ ಸಂಸ್ಥೆಯ ಸದಸ್ಯರು ತಮ್ಮ ಗ್ರಾಮದವರಾದ ಲೋಕೇಶ್ವರಿಯವರ ವಿಶಿಷ್ಟ ಸಾಧನೆಯಿಂದ ಪಡೆದ ಈ ಪ್ರಶಸ್ತಿಗೆ ಅಭಿನಂದನೆ ಸಲ್ಲಿಸಿ, ತಮ್ಮಲ್ಲಿ ಓರ್ವರಾಗಿ ಎಲ್ಲ ಮಹಿಳಿಯರಿಗೆ ವಿವಿಧ ರೀತಿಯಲ್ಲಿ ಜಾತಿ, ಮತ, ಪಕ್ಷಭೇದ ಮರೆತು ಸಲ್ಲಿಸಿದ ನಿಸ್ವಾರ್ಥ ಸೇವೆಗೆ ದೊರೆತ ಸನ್ಮಾನ ತಮಗೆ ದೊರೆತದ್ದು ಸಂತೋಷವಾಗಿದೆ ಎಂದು ತಿಳಿಸಿ ಶಾಲು ಸ್ಮರಣಿಕೆ ಫಲಪುಷ್ಪ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಭಾರತಿ ಉಪಾಧ್ಯಕ್ಷೆ ರಮಾ ಎಸ್. ಪರಾಂಜಪೆ, ಕೋಶಾಧಿಕಾರಿ ಸಂಧ್ಯಾಕಿರಣ್, ಸದಸ್ಯರಾದ ಭವ್ಯಶ್ರೀ ಕೀರ್ತಿರಾಜ್, ಸೌಮ್ಯ, ರೋಸಮ್ಮ, ಲಿಸ್ಸಿ, ಶಿಭಾ, ವರದಾ ಭಾಯಿ, ವಸಂತಿ, ಡೀಕಮ್ಮ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು ಶುಭಕೋರಿದರು. ಗ್ರಾಮಸ್ಥರ ಸಹಕಾರ ಹಾಗೂ ಪ್ರೋತ್ಸಾಹದಿಂದ ತನಗೆ ದೊರೆತ ಈ ಪ್ರಶಸ್ತಿಗೆ ತಾವೆಲ್ಲರೂ ಭಾಜನರು ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

Related posts

ಬೆಳ್ತಂಗಡಿ: ದಿವ್ಯಜ್ಯೋತಿ ನವೋದಯ ಸಂಘದಿಂದ ಸುನಂದರಿಗೆ ಚೈತನ್ಯ ವಿಮೆ ವಿತರಣೆ

Suddi Udaya

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ

Suddi Udaya

ಶ್ರೀ ಧ.ಮಂ.ಅ.ಹಿ ಪ್ರಾ. ಶಾಲಾ ಪ್ರಾರಂಭೋತ್ಸವ

Suddi Udaya

ಕಲ್ಮಂಜದಲ್ಲಿ ಬಿಜೆಪಿ ಕಾರ್ಯಕರ್ತರ‌ ವಿಜಯೋತ್ಸವ

Suddi Udaya

ಸೋಣಂದೂರು: ಪೊಮ್ಮಾಜೆ ಜನರಿಗೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾದ ಏರ್‌ಟೆಲ್ ಹಾಗೂ ಬಿಎಸ್‌ಎನ್‌ಎಲ್ ಟವರ್

Suddi Udaya

ಬದ್ಯಾರು ಶ್ರೀ ಲೋಕನಾಥೇಶ್ವರ ದೇವರ ವಾರ್ಷಿಕ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!