July 23, 2026
ಅಭಿನಂದನೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಲೋಕೇಶ್ವರಿ ವಿನಯಚಂದ್ರರವರಿಗೆ ಸ್ವಗ್ರಾಮದಲ್ಲಿ ಗೌರವಾರ್ಪಣೆ

ಕಡಿರುದ್ಯಾವರ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಹಾಗೂ ಸಾಹಿತ್ಯ ಸಂಸ್ಕೃತಿಯವರು ೨೦೨೫ನೇ ವರ್ಷದ ಗೌರವ ಪ್ರಶಸ್ತಿ ನೀಡಿ ಗೌರವಿಸಿದ ಕಡಿರುದ್ಯಾವರ ಗ್ರಾಮದ ವಳಂಬ್ರ ಲೋಕೇಶ್ಚರಿ ವಿನಯಚಂದ್ರ ರವರಿಗೆ ಸ್ಥಳೀಯ ಶ್ರೀ ವಿದ್ಯಾ ಸರಸ್ವತಿ ಮಹಿಳಾ ಮಂಡಲ ಹಾಗೂ ಶ್ರೀ ವಿದ್ಯಾ ಸರಸ್ವತಿ ಸ್ವಸಹಾಯದ ವತಿಯಿಂದ ಮಹಿಳಾ ಮಂಡಲದಲ್ಲಿ ಸನ್ಮಾನಿಸಲಾಯಿತು. ಎರಡೂ ಸಂಸ್ಥೆಯ ಸದಸ್ಯರು ತಮ್ಮ ಗ್ರಾಮದವರಾದ ಲೋಕೇಶ್ವರಿಯವರ ವಿಶಿಷ್ಟ ಸಾಧನೆಯಿಂದ ಪಡೆದ ಈ ಪ್ರಶಸ್ತಿಗೆ ಅಭಿನಂದನೆ ಸಲ್ಲಿಸಿ, ತಮ್ಮಲ್ಲಿ ಓರ್ವರಾಗಿ ಎಲ್ಲ ಮಹಿಳಿಯರಿಗೆ ವಿವಿಧ ರೀತಿಯಲ್ಲಿ ಜಾತಿ, ಮತ, ಪಕ್ಷಭೇದ ಮರೆತು ಸಲ್ಲಿಸಿದ ನಿಸ್ವಾರ್ಥ ಸೇವೆಗೆ ದೊರೆತ ಸನ್ಮಾನ ತಮಗೆ ದೊರೆತದ್ದು ಸಂತೋಷವಾಗಿದೆ ಎಂದು ತಿಳಿಸಿ ಶಾಲು ಸ್ಮರಣಿಕೆ ಫಲಪುಷ್ಪ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಭಾರತಿ ಉಪಾಧ್ಯಕ್ಷೆ ರಮಾ ಎಸ್. ಪರಾಂಜಪೆ, ಕೋಶಾಧಿಕಾರಿ ಸಂಧ್ಯಾಕಿರಣ್, ಸದಸ್ಯರಾದ ಭವ್ಯಶ್ರೀ ಕೀರ್ತಿರಾಜ್, ಸೌಮ್ಯ, ರೋಸಮ್ಮ, ಲಿಸ್ಸಿ, ಶಿಭಾ, ವರದಾ ಭಾಯಿ, ವಸಂತಿ, ಡೀಕಮ್ಮ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು ಶುಭಕೋರಿದರು. ಗ್ರಾಮಸ್ಥರ ಸಹಕಾರ ಹಾಗೂ ಪ್ರೋತ್ಸಾಹದಿಂದ ತನಗೆ ದೊರೆತ ಈ ಪ್ರಶಸ್ತಿಗೆ ತಾವೆಲ್ಲರೂ ಭಾಜನರು ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

Related posts

ಇಂದಬೆಟ್ಟುವಿನಲ್ಲಿ ದನದ ಕೊಟ್ಟಿಗೆ, ರಬ್ಬರ್ ಸ್ಮೋಕ್ ಹೌಸ್ ಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಹಾನಿ

Suddi Udaya

ಸುಯ೯ ಕ್ಷೇತ್ರಕ್ಕೆ ಕೃಷಿ ಸಚಿವ ಚೆಲುವರಾಯಸ್ವಾಮಿ ಭೇಟಿ: ವಿಶೇಷ ಪೂಜೆ ಸಲ್ಲಿಸಿದ ಸಚಿವ ದಂಪತಿ

Suddi Udaya

ಯಕ್ಷಧ್ರುವ ಪಟ್ಲ ಘಟಕ ಬೆಳ್ತಂಗಡಿ ವತಿಯಿಂದ ಯಕ್ಷಸಂಭ್ರಮ ಉದ್ಘಾಟನೆ: ನಾಲ್ವರು ಯಕ್ಷಗಾನ ತರಬೇತಿ ಗುರುಗಳಿಗೆ ಗೌರವಾರ್ಪಣೆ: 8 ಶಾಲೆಗಳು 480 ಯಕ್ಷ ವಿದ್ಯಾರ್ಥಿಗಳಿಂದ ಯಕ್ಷಗಾನ ರಂಗಪ್ರವೇಶ

Suddi Udaya

ಪುತ್ತೂರು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಗೆ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ 7 ರ‍್ಯಾಂಕ್‌ಗಳ ದಾಖಲೆ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಭೀಷ್ಮ ಏಕಾದಶೀ ಪ್ರಯುಕ್ತ ವಿಷ್ಣು ಸಹಸ್ರನಾಮ ಪಠಣ

Suddi Udaya

ಉಜಿರೆ ಎಸ್.ಡಿ.ಎಂ ಸಿಬಿಎಸ್ಇ ಶಾಲೆಯಲ್ಲಿ ಪ್ರತಿಭಾ ಕಲರವ ‘ಕಲಾಬ್ದಿ – 2025’: ‘ವಿಷನ್ 25 -26’ ಬಿಡುಗಡೆಗೊಳಿಸಿದ ಡಿ.ಹರ್ಷೇಂದ್ರ ಕುಮಾ‌ರ್

Suddi Udaya
error: Content is protected !!