ಬೆಳ್ತಂಗಡಿ: ಇತ್ತೀಚಿಗೆ ಗುಂಡ್ಯ ಸಮೀಪದ ಬರ್ಚಿನಹಳ್ಳ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಚಂದ್ರಶೇಖರ್ ಗೌಡ ಧರ್ಮದಕಳ ಅವರ ನಿವಾಸಕ್ಕೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಚಂದ್ರಶೇಖರ್ ಗೌಡ ಅವರ ಕುಟುಂಬಸ್ಥರು ಸೇರಿದಂತೆ ಪ್ರಮುಖರಾದ ಕೊರಗಪ್ಪ ನಾಯ್ಕ, ಸಂದೀಪ್ ಅಮ್ಮುಡಂಗೆ, ಕರುಣಾಕರ ಶಿಶಿಲ, ಸುದೀನ್ ಡಿ, ರಾಧಾಕೃಷ್ಣ ಗೌಡ ಗುತ್ತು, ರತೀಶ್ ಬಿ ಹಾಗೂ ಇಂದು ಮೃತರ ತಿಥಿ ಕಾರ್ಯಕ್ರಮ ಇದ್ದುದರಿಂದ ಮೃತರ ಅನೇಕ ಹಿತೈಷಿಗಳು,ಊರಿನವರು ಉಪಸ್ಥಿತರಿದ್ದು ಮೃತರ ಆತ್ಮಕ್ಕೆ ಚಿರಶಾಂತಿ ಕೋರಿದರು.












