ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಾ.26ರಿಂದ ಮಾ.28ರವರೆಗೆ ಬಿ.ಸಿರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಲಿದರುವ ದ.ಕ. ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನೀಡಲಾಗುವ `ಕನ್ನಡ ಸಿರಿ’ ಪ್ರಶಸ್ತಿಗೆ ತಾಲೂಕಿನ ನಾಲ್ಕು ಮಂದಿ ಸಾಧಕರು ಆಯ್ಕೆಯಾಗಿದ್ದಾರೆ.
ಸಾಹಿತ್ಯ, ಕಲೆ, ಸಂಸ್ಕೃತಿ, ಸಾಮಾಜಿಕ, ಮಾಧ್ಯಮ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದ ಸಾಧಕರಾದ ಶ್ರೀ.ಧ.ಮಂ. ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಮತ್ತು ವಾಗ್ಮಿ ಡಾ. ರವೀಶ್ ಪಡುಮಲೆ(ದೈವನರ್ತಕರು), ಸದಾನಂದ ನಾರಾವಿ (ಸಾಹಿತಿಗಳು), ರಾಜರಾಮ ಶರ್ಮ ಬೆಳಾಲು(ವಾಸ್ತು ತಜ್ಞರು) ದೇವಿಪ್ರಸಾದ್(ಮಾಧ್ಯಮ ಕ್ಷೇತ್ರ) ಇವರನ್ನು ಆಯ್ಕೆ ಮಾಡಲಾಗಿದೆ.












