ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಮ್ಮರ್ ಸ್ಪಾರ್ಕ್ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭ ನಡೆಯಿತು.
ಅತಿಥಿಗಳಾಗಿ ಅಖಿಲ ಕರ್ನಾಟಕ ಜನಾಗೃತಿ ವೇದಿಕೆಯ ಕಾರ್ಯದರ್ಶಿ ವಿವೇಕ್ ವಿನ್ಸೆಂಟ್ ಪಾಯಸ್ ದೀಪ ಬೆಳಗಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಬದುಕು ಸಣ್ಣದು.ಅದನ್ನು ರುಚಿಕರ ಮಾಡುವುದು ವಿದ್ಯಾರ್ಥಿಗಳಾದ ನಿಮ್ಮ ಕೈಲಿ ಇದೆ. ಉತ್ತಮ ಸಂಸ್ಕಾರ ಕೊಟ್ಟಷ್ಟು ಬದುಕು ಬೆಲೆ ಬಾಳುತ್ತದೆ. ಮಾದಕ ವ್ಯಸನಗಳು ಮಜಾ ಅಲ್ಲ ಅದು ಸಜಾ ಎಂದು ತಿಳಿಯಬೇಕು. ಶರೀರ ಎಂಬುದು ಒಂದು ಫ್ಯಾಕ್ಟರಿಯ ಹಾಗೆ. ಹೀಗಿರುವಾಗ ಆಹಾರ ನಮ್ಮನ್ನು ಉಳಿಸಿ ಬೆಳೆಸಿ ಶಕ್ತಿ ಕೊಡುವ ಹಾಗಿರಬೇಕು. ಮಕ್ಕಳ ಆಟ ಮನೆಯ ಜಗಲಿಯ ಮೇಲೆ ಇರಬೇಕು. ಮೊಬೈಲ್ನಲ್ಲಿ ಅಲ್ಲ ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ನಾಟಕ ನಿರ್ದೇಶಕ ಯಶವಂತ್ ಬೆಳ್ತಂಗಡಿ ಉಪಸ್ಥಿತರಿದ್ದರು. ಭಾರ್ಗವಿ ನಿರೂಪಿಸಿ, ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ ವಿ ಸ್ವಾಗತಿಸಿ, ಅರ್ಘ್ಯ ಅತಿಥಿಗಳ ಕಿರುಪರಿಚಯ ಮಾಡಿ ಕಲ್ಪಿತ ಧನ್ಯವಾದವಿತ್ತರು.












