ಬೆಳ್ತಂಗಡಿ: ಕಾರು ಅಪಘಾತದಲ್ಲಿ ಮೃತರಾದ, ಬಿಜೆಪಿ ಕಾರ್ಯಕರ್ತ ಚಂದ್ರಶೇಖರ್ ಗೌಡ ಧರ್ಮದಕಳ ಹಾಗೂ ಹಾವು ಕಡಿತದಿಂದ ಮೃತರಾದ ಕಾರ್ಯಕರ್ತ ಚೋಮ ರವರಿಗೆ ಶಿಶಿಲ ಬಿಜೆಪಿ ಗ್ರಾಮ ಸಮಿತಿ ವತಿಯಿಂದ ನುಡಿನಮನ ಕಾರ್ಯಕ್ರಮ ಮಾ.28ರಂದು ಶಿಶಿಲ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು

ಎಂಎಲ್ಸಿ ಪ್ರತಾಪಸಿಂಹ ನಾಯಕ್ , ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್,ಬಿಜೆಪಿ ಕಾರ್ಯಕರ್ತ ವೃಶಾಂಕ್ ಖಾಡಿಲ್ಕರ್, ಜಿಲ್ಲಾ ಮನ್ ಕೀ ಬಾತ್ ಪ್ರಮುಖ್ ಸೀತಾರಾಮ ಬೆಳಾಲು, ಅರಸಿನಮಕ್ಕಿ ಗ್ರಾ. ಪಂ. ಮಾಜಿ ಉಪಾಧ್ಯಕ್ಷ ಸುಧೀರ್ ಕುಮಾರ್ ಎಂ. ಎಸ್., ಕೊಕ್ಕಡ ಗ್ರಾ. ಪಂ. ಮಾಜಿ ಅಧ್ಯಕ್ಷ ಯೋಗೀಶ್ ಆಲಂಬಿಲ, ಹತ್ಯಡ್ಕ ಸಹಕಾರಿ ಮಾಜಿ ನಿರ್ದೇಶಕ ಕುಶಾಲಪ್ಪ ಗೌಡ ಬದ್ರಿಜಾಲು, ಸುಂದರ್ ಮುದ್ದಿಗೆ, ಬಿಜೆಪಿ ಬೂತ್ 68ರ ಅಧ್ಯಕ್ಷ ಲಕ್ಷ್ಮೀಕಾಂತ್ ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಿಶಿಲ ಗ್ರಾ. ಪಂ. ಮಾಜಿ ಅಧ್ಯಕ್ಷರುಗಳಾದ ಸಂದೀಪ್ ಅಮ್ಮುಡಂಗೆ, ಸುಧೀನ್, ಆನಂದ ಪೂಜಾರಿ, ಶ್ರೀಧರ್ ದಾಮ್ಲೆ, ಧರ್ಮಸ್ಥಳ ಮಹಾಶಕ್ತಿ ಕೇಂದ್ರದ ಮಾಜಿ ಕಾರ್ಯದರ್ಶಿ ಕರುಣಾಕರ ಶಿಶಿಲ, ಬೂತ್ 69ರ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಗುತ್ತು, ಹತ್ಯಡ್ಕ ಸಹಕಾರಿ ಸಂಘದ ನಿರ್ದೇಶಕ ಕೊರಗಪ್ಪ ಗೌಡ, ಧರ್ಮಸ್ಥಳ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಗಣೇಶ್ ಹೊಸ್ತುಟ, ದಿ.ಚಂದ್ರಶೇಖರ್ ರವರ ಪತ್ನಿ ಚೇತನ್ ಚಂದ್ರಶೇಖರ್, ಮಕ್ಕಳಾದ ಚಂದನಾ, ಚಿನ್ಮಯ್, ಮಾಜಿ ಸದಸ್ಯ ಸೂರಜ್ ನೆಲ್ಲಿತ್ತಾಯ, ಪಂ. ಮಾಜಿ ಸದಸ್ಯರಾದ ಲಲಿತಾ, ಕಮಲಾಕ್ಷಿ, ಜಗದೀಶ್ ದೇನೋಡಿ, ದಿ. ಚೋಮರವರ ಪತ್ನಿ ಲಲಿತಾ, ಪುತ್ರಿ ಅಶ್ವಿತಾ, ಬಿಜೆಪಿ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.












