September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಳಂಜ-ಪೆರೋಡಿತ್ತಾಯಕಟ್ಟೆ, ಆನೆಪಿಲ, ಅಟ್ಲಾಜೆ, ಬಳಂಜ ದೇವಸ್ಥಾನ ರಸ್ತೆ ಡಾಂಬರೀಕರಣ ಹಾಗೂ ಶಾಲಾ ರಂಗಮಂದಿರ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ರೂ.2 ಕೋಟಿ ಅನುದಾನ ಮಂಜೂರು

ಬಳಂಜ: ಈ ಭಾಗದ ಜನರ ಕಳೆದ ಹಲವು ವರ್ಷಗಳ ಬೇಡಿಕೆಯಾದ ಬಳಂಜ ಗ್ರಾಮ‌ ಪಂಚಾಯತ್ ವ್ಯಾಪ್ತಿಯ ಕೆಲ ರಸ್ತೆಗಳ ಅಭಿವೃದ್ಧಿ ಮತ್ತು ಡಾಮರೀಕರಣಕ್ಕೆ ಶಾಸಕ ಹರೀಶ್ ಪೂಂಜರವರು ರೂ 2ಕೋಟಿ ಅನುದಾನ ಮಂಜೂರುಗೊಳಿಸಿ ಇಲ್ಲಿನ ಜನರ ಬೇಡಿಕೆಯನ್ನು ಪೂರೈಸಿದ್ದಾರೆ.

ಬಳಂಜ, ಸುದೆಗಂಡಿ ಪೆರೋಡಿತ್ತಾಯಕಟ್ಟೆ ಸಂಪರ್ಕ ರಸ್ತೆಯ ಮುಂದುವರಿದ ಕಾಂಕ್ರೀಟ್ ಕಾಮಗಾರಿಗೆ ರೂ 1 ಕೋಟಿ ರೂಪಾಯಿ ಅನುದಾನ ಹಾಗೂ ಬಳಂಜ ಆನೆಪಿಲ ರಸ್ತೆಗೆ ರೂ 50 ಲಕ್ಷ, ಅಟ್ಲಾಜೆ ಬದಿನಡೆ ರಸ್ತೆಗೆ ರೂ 50 ಲಕ್ಷ, ಬಳಂಜ ಶಾಲಾ ಕ್ರೀಡಾಂಗಣದ ರಂಗಮಂದಿರ ನಿರ್ಮಾಣಕ್ಕೆ ರೂ 5ಲಕ್ಷ ಹಾಗೂ ಬಳಂಜ ದೇವಸ್ಥಾನದ ರಸ್ತೆ ಡಾಮರೀಕರಣಕ್ಕೆ ರೂ 5ಲಕ್ಷ ಅನುದಾನ ನೀಡಿದ್ದಾರೆ.

ಜನರ ಬೇಡಿಕೆಗೆ ಸ್ಪಂದಿಸಿದ ಶಾಸಕ ಹರೀಶ್ ಪೂಂಜರವರಿಗೆ ಗ್ರಾಮಸ್ಥರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

Related posts

ವೇಣೂರು: 26ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ; ಅಧ್ಯಕ್ಷರಾಗಿ ಜಗದೀಶ್ ಭಟ್ , ಕಾರ್ಯದರ್ಶಿಯಾಗಿ ಪಿ. ಪ್ರಶಾಂತ್ ಹೆಬ್ಬಾರ್

Suddi Udaya

ಬೆಳ್ತಂಗಡಿ: ನೇತಾಜಿ ಸುಭಾಶ್ಚಂದ್ರ ಬೋಸ್ ಆವಾಸೀಯ ವಿದ್ಯಾಲಯದಲ್ಲಿ ಸಂಭ್ರಮ ಶನಿವಾರಕ್ಕೆ ಚಾಲನೆ

Suddi Udaya

ದ.ಕ. , ಉಡುಪಿ ಜಿಲ್ಲೆಯ ವಕೀಲರ ವೇದಿಕೆ ಬೆಂಗಳೂರು ಇದರ ಕಾರ್ಯದರ್ಶಿಯಾಗಿ ಬೆಳ್ತಂಗಡಿಯ ಶೈಲಾ ರಮೇಶ್ ಆಯ್ಕೆ

Suddi Udaya

ಕುವೆಟ್ಟು ಸ.ಉ. ಪ್ರಾ. ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Suddi Udaya

ಬೆಳ್ತಂಗಡಿ: ಸಂತೆಕಟ್ಟೆ ಬಳಿ ಕಾರುಗಳ ನಡುವೆ ಡಿಕ್ಕಿ: ಓರ್ವನ ಸ್ಥಿತಿ ಗಂಭೀರ

Suddi Udaya

ಡಿ.ಕೆ.ಆರ್.ಡಿ.ಎಸ್ ಬೆಳ್ತಂಗಡಿ ನೇತೃತ್ವದಲ್ಲಿ ಕ್ಯಾನ್ಸರ್ ಜನಜಾಗೃತಿ ಹಾಗೂ ಕ್ಯಾನ್ಸರ್ ರೋಗಿಗಳಿಗಾಗಿ ಧನ ಸಹಾಯ ಸಂಗ್ರಹಣಾ ಅಭಿಯಾನ

Suddi Udaya
error: Content is protected !!