ಬೆಳ್ತಗಂಡಿ: ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ವಿಜೃಂಭ್ರಣೆಯಿಂದ ನಡೆಯುತ್ತಿದೆ. ಇಂದು ಅನಂತೇಶ್ವರ ದೇವರಿಗೆ ವಿಶೇಷ ಶಾಂತಿ ಹೋಮ, ವಿಶೇಷ ಪ್ರಾಯಶ್ಚಿತ ಹೋಮ ಪ್ರಾಸಾದ ಪೂಜೆ, ರತ್ನನ್ಯಾಸ ನೂತನ ಪ್ರಾಸಾದದ ಶಿಖರ ಪ್ರತಿಷ್ಠೆ, ಪೂರ್ವಾಹ್ನ ಗಂಟೆ ೯-೨೫ಕ್ಕೆ ನಡೆಯುವ ವೃಷಭ ಲಗ್ನ ಸುಮುಹೂರ್ತದಲ್ಲಿ ಈಶ್ವರ ದೇವರ ಲಿಂಗ ಪುನಃಪ್ರತಿಷ್ಠೆ ಅಷ್ಟಬಂಧ ಪ್ರತಿಷ್ಠೆ, ಜೀವ ಕುಂಭಾಭಿಷೇಕ, ನಿದ್ರಾ ಕಲಶಾಭಿಷೇಕ, ಪ್ರತಿಷ್ಠಾಂಗಪ್ರಾಣನ್ಯಾಸಾದಿ ಪ್ರಕ್ರಿಯೆ, ಪ್ರತಿಷ್ಠಾಪೂಜೆ, ಈಶ್ವರ ದೇವರ ನಿತ್ಯನೈಮಿತಿಕ ವಿಧಿಗಳ ಪ್ರತಿಜ್ಞಾ ಸ್ವೀಕಾರ, ಮಹಾಪೂಜೆ ನಡೆಯಿತು. ಈಶ್ವರ ದೇವರ ಲಿಂಗ ಪ್ರತಿಷ್ಠೆ ಸಂದರ್ಭ ಗರುಡು ಪ್ರದಕ್ಷಿಣೆ ಹಾಕಿತು. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ನೂತನ ಧ್ವಜಸ್ತಂಭದ ನಂದಿವಾಹನಾಧಿವಾಸ, ನೂತನ ಧ್ವಜಸ್ತಂಭಾಧಿವಾಸ, ನೂತನ ಬ್ರಹ್ಮರಥದಲ್ಲಿ ವಾಸ್ತುಪ್ರಕ್ರಿಯೆ, ಏಕೋತ್ತರಶತ ರಥ ಕಲಶಾಧಿವಾಸ, ನೂತನ ರಥಾಧಿವಾಸ, ಅಧಿವಾಸ ಹೋಮಗಳು ಸಂಜೆ ನಡೆಯಲಿದೆ.













