September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಪುತ್ತೂರುವರದಿ

ಎ.16-19: ಪುತ್ತೂರು-‘ಸುಬ್ಬಜ್ಜನ ಮನೆಯಲ್ಲಿ ವಸತಿಯುತ ಬೇಸಿಗೆ ಶಿಬಿರ’

ಪುತ್ತೂರು:- ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರು ತಾಲೂಕಿನ ತಿಂಗಳಾಡಿ ಎಂಬಲ್ಲಿ ನಡೆಯುವ ರಾಜ್ಯಮಟ್ಟದ ‘ಸುಬ್ಬಜ್ಜನ ಮನೆಯಲ್ಲಿ ವಸತಿಯುತ ಬೇಸಿಗೆ ಶಿಬಿರ’ವನ್ನು ಈ ಬಾರಿ ಏ.16 ರಿಂದ 19 ರ ವರೆಗೆ ನಡೆಸಲಾಗುತ್ತಿದೆ. ಕಾಡಿನ ರಹಸ್ಯ ತಿಳಿಯುವಿಕೆಯ ಜೊತೆಗೆ ಟ್ರೆಷರ್ ಹಂಟ್, ವರ್ಲಿ ಆರ್ಟ್, ನೀರಾಟ, ಗೋವು ಮೇವು, ಗೋ ಪೂಜೆ, ನಿತ್ಯ ಪೂಜೆ, ರಾಮಾಯಣ ದೃಶ್ಯ ಕಾವ್ಯ, ಭಗವದ್ ಗೀತೆ ಜೊತೆಗೆ ಜೀವನ ಕೌಶಲ್ಯಗಳನ್ನು ತಿಳಿಸುವ ಹತ್ತು ಹಲವು ಕುತೂಹಲಕಾರಿ ಮನರಂಜನಾ ಆಟಗಳನ್ನು ಜೋಡಿಸಿಕೊಳ್ಳಲಾಗಿದೆ. ಆಕಾಶ ವೀಕ್ಷಣೆ-ನಿದ್ರೆ, ರಂಗೋಲಿ, ಸೌದೆ ಒಲೆ ಅಡಿಗೆ ಕಲಿಕೆ, ಗೆರಟೆ ಚಿತ್ರ, ವ್ಯವಹಾರದ ಪಾಠದ ಜೊತೆ ಮಕ್ಕಳ ನಿತ್ಯ ಕರ್ಮಗಳ ಅಭ್ಯಾಸವು ಸಾಧ್ಯವಾಗುತ್ತಿದೆ.

ಇದರ ಸಂಪೂರ್ಣ ನಿರ್ವಹಣೆಯ ರಾಮಕೃಷ್ಣ ಮಠದ ಭಕ್ತರು ಹಾಗೂ ಮನಃಶಾಸ್ತ್ರಜ್ಞರಾದ ಲಕ್ಷ್ಯ ಸಂಸ್ಥೆಯ ಸಂಸ್ಥಾಪಕ, ಶ್ರೀ ದುರ್ಗಾ ಪರಮೇಶ್ವರ ಭಟ್ ಇವರು ವಹಿಸಿಕೊಂಡಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಪ್ರಕೃತಿ ಜೊತೆಗಿನ ಸಂಪರ್ಕ ಶಾಲಾ ಮಕ್ಕಳಿಗೆ ಕಡಿತವಾಗುತ್ತಿರುವುದರಿಂದ ಸುಬ್ಬಜ್ಜನ ಮನೆ ಶಿಬಿರವು ಮಕ್ಕಳಿಗೆ ಪ್ರಕೃತಿ ಒಡಲಿನ ಅವಶ್ಯಕತೆಯನ್ನು ಹಾಗೂ ಅಗಾಧತೆಯನ್ನು ತಿಳಿಸುತ್ತದೆ. ಮೊದಲು ನೋಂದಾಯಿಸಿಕೊಳ್ಳುವ ಆಸಕ್ತ 30 ಮಕ್ಕಳಿಗೆ ಅವಕಾಶವನ್ನು ನೀಡಲಾಗುತ್ತಿದೆ. ದೂರವಾಣಿ ಸಂಖ್ಯೆ 9740645095 / 9663826972 ಕರೆ ಮಾಡುವುದರ ಮೂಲಕ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Related posts

ವೇಣೂರು ಸರಕಾರಿ ಪ್ರೌಢಶಾಲೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನ: ಚಪ್ಪರ ಹಾಗೂ ಭಜನಾ ಕಾರ್ಯಕ್ರಮ ಉದ್ಘಾಟನೆ

Suddi Udaya

ತೋಟತ್ತಾಡಿ ಚರ್ಚ್ ನಲ್ಲಿ ಯುವಕರಿಂದ ತಯಾರಿಸಲ್ಪಟ್ಟ ೨೨ ಅಡಿ ಎತ್ತರದ ಕ್ರಿಸ್‌ಮಸ್ ನಕ್ಷತ್ರ

Suddi Udaya

ಅರಸಿನಮಕ್ಕಿ: ಬರಮೇಲು ನಿವಾಸಿ ನಾಗಮ್ಮ ನಿಧನ

Suddi Udaya

ಕನ್ನಡ ಸೇನೆ- ಕರ್ನಾಟಕ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಬೆಳ್ತಂಗಡಿ ತಾಲೂಕು ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

Suddi Udaya

ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ ಬಂಗಾಡಿ ಸಹಕಾರಿ ವ್ಯವಸಾಯ ಸಂಘಕ್ಕೆ ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರದಾನ

Suddi Udaya
error: Content is protected !!