
ಬೆಳ್ತಂಗಡಿ: ಕಾಂತಾರ-1 ಖ್ಯಾತಿಯ ರಿಷಬ್ ಶೆಟ್ಟಿ ಕುಟುಂಬ ಸಮೇತರಾಗಿ ಮಣ್ಣಿನ ಹರಕೆಗೆ ಪ್ರಸಿದ್ಧವಾದ ಸುರ್ಯ ಸದಾಶಿವ ರುದ್ರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಮಣ್ಣಿನ ಹರಕೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ದೇವಸ್ಥಾನದ ಪರವಾಗಿ ಅವರನ್ನು ದೇವಸ್ಥಾನದ ಆನುಅಂಶಿಕ ಆಡಳಿತ ಮೊಕ್ತೇಶ್ವರ ಡಾ. ಸತೀಶ್ಚಂದ್ರ ಸುರ್ಯ ಗುತ್ತು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪ್ರಗತಿ ರಿಷಬ್ ಶೆಟ್ಟಿ , ಸಂದೀಪಾ ಸತೀಶ್ಚಂದ್ರ, ಪ್ರಕಾಶ್ ಭಟ್, ರಾಧಾಕೃಷ್ಣ ಭಟ್,ಕಿರಣ್ ಶೆಟ್ಟಿ,ಪ್ರಸಾದ್ ಉಪಸ್ಥಿತರಿದ್ದರು






