ಬೆಳ್ತಂಗಡಿ: ಮಡಂತ್ಯಾರು ಗ್ರಾಮ ಪಂಚಾಯತದ ಕುಕ್ಕಳ ಗ್ರಾಮದ ಪುಂಜಾಲಕಟ್ಟೆ ಸೇತುವೆ ಬಳಿ ಕಸ ಎಸೆಯುತ್ತಿರುವ ಬಗ್ಗೆ ಗ್ರಾಮ ಪಂಚಾಯತ್ ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಶ್ರೀನಿವಾಸ ಡಿಪಿ ಗ್ರಾ.ಪಂ. ಸಿಬ್ಬಂದಿ ಉಮೇಶ್ ರೊಂದಿಗೆ ಸ್ಥಳ ಭೇಟಿ ನೀಡಿ ಪರಿಶೀಲಿಸಿದಾಗ ಕಸದ ರಾಶಿಯಲ್ಲಿ ಕಸ ಬಿಸಾಡಿದವರ ಮಾಹಿತಿ ದೊರಕ್ಕಿದ್ದು, ಸದ್ರಿಯವರನ್ನು ವಿಚಾರಿಸಿದಾಗ ಕಸ ಬಿಸಾಡಿದ್ದನ್ನು ಸ್ವತಃ ಒಪ್ಪಿಕೊಂಡು, ರೂ.500 ದಂಡನೆಯನ್ನು ವಸೂಲಿ ಮಾಡಿ ಕಸ ಬಿಸಾಡದಂತೆ ಎಚ್ಚರಿಕೆ ನೀಡಲಾಯಿತು.






