ಬೆಳ್ತಂಗಡಿ: ಎ 9 ಕಳೆದ 10 ದಿನಗಳಿಂದ ಗೇರುಕಟ್ಟೆ ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೇರುಕಟ್ಟೆ ಜನತಾ ಕಾಲೋನಿ ಪ್ರದೇಶಕ್ಕೆ ಪಂಚಾಯತ್ ವತಿಯಿಂದ ನೀರು ಸರಬರಾಜು ಮಾಡುತ್ತಿರುವ ಕೊಳವೆ ಬಾವಿ ಬತ್ತಿ ಹೋಗಿ ಇಲ್ಲಿನ ನಿವಾಸಿಗಳಿಗೆ ತುಂಬಾ ತೊಂದರೆಯಾಗಿ ಸ್ಥಳೀಯ ನಿವಾಸಿ ಗಿರೀಶ್ ಶೆಟ್ಟಿ ಖಂಡಿಗ ರವರಿಂದ ಖಾಸಗಿಯಾಗಿ ನೀರು ಸಂಪರ್ಕ ನೀಡಿ ಮತ್ತು ತುರ್ತು ಅವಶ್ಯಕತೆಗಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಮುತುವರ್ಜಿಯಿಂದ ಸಿಬ್ಬಂದಿ ರವಿ ಎಚ್ ಮತ್ತು ಸುರೇಶ್ ಗೌಡ ಟ್ಯಾಂಕರ್ ನಲ್ಲಿ ನೀರು ಸರಬರಾಜು ಮಾಡಿ, ಈ ಸಮಸ್ಯೆಯನ್ನು ಮನಗಂಡು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮತ್ತು ಕಳಿಯ ಪಂಚಾಯತ್ ಆಡಳಿತ ಅಧಿಕಾರಿ ಭವಾನಿ ಶಂಕರ್ ಮತ್ತು ಅಭಿವೃದ್ಧಿ ಅಧಿಕಾರಿ ಕುಂಞ ಕೆ ರವರ ಮುತುವರ್ಜಿಯಿಂದ, ಪಂಚಾಯತ್ ಮಾಜಿ ಅಧ್ಯಕ್ಷರು, ಮಾಜಿ ಸದಸ್ಯರು ಮತ್ತು ನಾಗರಿಕರ ಸಹಕಾರದಿಂದ ಹೊಸ ಕೊಳವೆ ಬಾವಿ ಕೊರೆಸಿದರು.
previous post






