23.5 C
ಪುತ್ತೂರು, ಬೆಳ್ತಂಗಡಿ
June 8, 2026
ಚಿತ್ರ ವರದಿವರದಿಶಿಕ್ಷಣ ಸಂಸ್ಥೆ

ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿಗೆ ಶೇ.100 ಫಲಿತಾಂಶ: ವಿಜ್ಞಾನ ವಿಭಾಗದಲ್ಲಿ ಪ್ರಾರ್ಥನ ಶೆಟ್ಟಿ ರಾಜ್ಯಕ್ಕೆ ಎರಡನೇ ಸ್ಥಾನ, ವಾಣಿಜ್ಯ ವಿಭಾಗದಲ್ಲಿ ಪ್ರೇರಣ ರಾಮಚಂದ್ರ ಹೆಗಡೆ ರಾಜ್ಯಕ್ಕೆ ತೃತೀಯ ಸ್ಥಾನ

ಕಾರ್ಕಳ: 2025- 26ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳದ ಪ್ರತಿಷ್ಠಿತ ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಸತತ ಐದನೇ ವರ್ಷವೂ ಶೇಕಡ 100 ಫಲಿತಾಂಶವನ್ನು ದಾಖಲಿಸಿಕೊಂಡಿದೆ.

ವಿಜ್ಞಾನ ವಿಭಾಗದಲ್ಲಿ ಪ್ರಾರ್ಥನ ಶೆಟ್ಟಿ ರಾಜ್ಯಕ್ಕೆ ಎರಡನೇ ಸ್ಥಾನವನ್ನು ಹಾಗೂ ವಾಣಿಜ್ಯ ವಿಭಾಗದಲ್ಲಿ ಪ್ರೇರಣ ರಾಮಚಂದ್ರ ಹೆಗಡೆ ರಾಜ್ಯಕ್ಕೆ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ವಿಜ್ಞಾನ ವಿಭಾಗದಲ್ಲಿ 589ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳ ಫಲಿತಾಂಶ ಪಟ್ಟಿ:
ಪಿಸಿಎಂಬಿ ವಿಭಾಗ: ಶ್ರಾವ್ಯ ಬಾಲಕೃಷ್ಣ 595, ತೇಜಸ್ ಆರ್ ಬಿ 594, ಮೋಕ್ಷ ಬಿ.ಎಂ. 593, ವರ್ಷಿತಾ ಎನ್ 593, ದಿಶಾ ಎ 592, ಲೇಖನ್ ಕರಿಯಪ್ಪ ಎಂ ಡಿ 592, ಪೂರ್ಣಿಮಾ ಕೆ ಎ 592, ಪ್ರಜ್ಞಾ ಎಸ್ 591, ಅನನ್ಯ ರಾಜಶೇಖರ್ ಬಿ 590, ಧೃವ ವಿ ಬಿ 589, ಬಿಂದು ಪಿ ಗೌಡ 589, ನಾಗಶ್ರೀ ರಾಮಚಂದ್ರ ಗೌಡ 589, ತೇಜಸ್ ಹೆಗ್ಡೆ ಹೆಚ್ ಡಿ 589, ಭೂಮಿಕಾ ಎಸ್ ಪಿ 589, ಅಮೂಲ್ಯ ಹೆಸ್ ಎಸ್ 589, ಅನನ್ಯ 589, ಲವಣ್ ಎ ಪಿ 589, ಅನುರಾಗ್ ಕೆ ಎಸ್ 589

ಪಿಸಿಎಂಸಿ ವಿಭಾಗ: ಪ್ರಾರ್ಥನ ಶೆಟ್ಟಿ 597, ಅಧಿತಿ ಹೆಬ್ಬಾರ್ ಸಿ ಯು 596, ಸಾನ್ವಿ ವಿ ಶೆಟ್ಟಿ 596, ಚೇತನಾ ಟಿ ಪಿ 594, ಪ್ರಾರ್ಥನ ಸುರೇಶ್ 594, ಸಾತ್ವಿಕ್ ಪಿ ಎಸ್ 593, ಸಂವಿತ್ ಅಮಿತ್ ಗೋಕರ್ಣ್ 593, ಅಕ್ಷತಾ ಮೋಹನ್ ಹೆಗಡೆ 593, ಪ್ರಜ್ವಲ್ ಭಟ್ 593, ಸಿಂಚನ ಎಸ್ ಭಟ್ 593, ಬಿ ಜಿ ಆದಿತ್ಯ ಗೌಡ 592, ಆದಿತ್ಯ ಗುರುರಾಜ್ ನಾಯಕ್ 592, ಅನ್ವಿತ್ ಮಂಜುನಾಥ್ ಮೊಗೆರ್ 592, ಲಿಖಿತ್ ಕುಮಾರ ಶೇರಿಗಾರ್ 591, ಕವನ 591, ದೀಪಕ್ ಕೆ ಪಿ 591, ಅನಿರುದ್ಧ್ ಉಪಧ್ಯಾಯ 591, ಸಂಸ್ಕೃತಿ ನಾಯಕ್ 591, ಶ್ರೀರಾಮ್ ಕೆ 591, ಡಿ ಎಸ್ ಸ್ಫೂರ್ತಿ 591, ಜಾನ್ವಿ ವಿ ಪಾಟೀಲ್ 591, ನಾಗದೇವ್ ಎಂ ಜಿ 590, ಧನುಷ್ ಆರ್ ಡಿ 590, ಮೇಘಾ ಶೆಟ್ಟಿ 590, ಸುಹಾನ್ ನಾಯಕ್ 590, ಭುವನಾ ಹೆಚ್ ಎನ್ 589, ರಿತನ್ಯಾ ಆರ್ ರಾವ್ 589, ರಿತಿಕ್ ಎ ಜಿ 589

ವಾಣಿಜ್ಯಶಾಸ್ತ್ರ ವಿಭಾಗದಲ್ಲಿ 590 ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳ ಫಲಿತಾಂಶ ಪಟ್ಟಿ:
ಪ್ರೇರಣ ರಾಮಚಂದ್ರ ಹೆಗಡೆ- 598, ಆದ್ಯ ಎಸ್ ಪಡ್ರೆ – 596, ಅನಿಕಾ – 596, ಕೆ ಪಿ ಸಾಯಿಕೃಷ್ಣ- 596, ಸೃಷ್ಟಿ- 595, ಪಿ. ಸ್ವರ- 594, ದರ್ಶನ್ ಮಲ್ಲಪ್ಪ ಎರಗಲ್ – 593, ಸ್ಮೃತಿ ದೊಂಡಿಯಾ ಕೆ- 593, ಅಕ್ಷರ್ ಎಸ್ ನಾಯಕ್ – 592, ಪವನ್ ಕುಮಾರ್ ಲೋಕೇಶ್ -591, ಭೂಮಿಕ ಸುಬ್ರಾಯ ಹೆಗಡೆ- 590, ಚಿರಾಯು ಸಂತೋಷ್ ಶೆಟ್ಟಿ – 590, ಹಿತ ರವಿ ಶೆಟ್ಟಿ- 590
ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ನೀಡುವಲ್ಲಿ ಪ್ರಮುಖ ವಿದ್ಯಾಸಂಸ್ಥೆಯಾದ ಕ್ರಿಯೇಟಿವ್ ಕಾಲೇಜು ಬೋರ್ಡ್ ಪರೀಕ್ಷೆಯ ಫಲಿತಾಂಶದಲ್ಲೂ ಕೂಡ ತನ್ನ ಅದ್ವಿತೀಯ ಸಾಧನೆಯನ್ನು ಗೈದಿದೆ.

ಕ್ರಿಯೇಟಿವ್ ಸಂಸ್ಥೆ ತನ್ನ ಕಾರ್ಕಳ, ಉಡುಪಿ, ಹಾಸನ ಎಲ್ಲಾ ಶಾಖೆಯಲ್ಲೂ ಶೇ. 100 ಫಲಿತಾಂಶ ದಾಖಲು ಮಾಡಿದ್ದು, ಈ ವರ್ಷ ಶಿವಮೊಗ್ಗದಲ್ಲಿ ಕೂಡ ಶಿಕ್ಷಣ ಸೇವೆಯನ್ನು ಆರಂಭ ಮಾಡಿದೆ. ತೇರ್ಗಡೆಯಾದ ಎಲ್ಲ ವಿದ್ಯಾರ್ಥಿಗಳಿಗೆ ಸಂಸ್ಥೆಯ ಪ್ರಾಂಶುಪಾಲರು, ಆಡಳಿತ ಮಂಡಳಿ, ಉಪನ್ಯಾಸಕ ವರ್ಗದವರು ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Related posts

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್.ಇ) ಶಾಲೆಯಲ್ಲಿ ಮಕರಸಂಕ್ರಾಂತಿ ಆಚರಣೆ

Suddi Udaya

ಹೈನುಗಾರಿಕೆಯ ಸಾಧಕ ಪಿ.ನಾರಾಯಣ ರಾವ್ ಧರ್ಮಸ್ಥಳ ವಿಧಿವಶ

Suddi Udaya

ಬಿಎಂಎಸ್ ಸಂಘದ ದಕ್ಷಿಣ ಮತ್ತು ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ವಿ. ರಾಧಾಕೃಷ್ಣನ್ ದ.ಕ. ಜಿಲ್ಲೆಗೆ ಆಗಮನ

Suddi Udaya

ಅರಸಿನಮಕ್ಕಿ ಶ್ರೀಗೋಪಾಲಕೃಷ್ಣ ಹಿರಿಯ ಪ್ರಾಥಮಿಕ ಶಾಲಾ ಮಂತ್ರಿಮಂಡಲ ರಚನೆ

Suddi Udaya

ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ರವರ ಪರವಾಗಿ ಶಾಸಕ ಹರೀಶ್ ಪೂಂಜರಿಂದ ಮಡಂತ್ಯಾರು ಗ್ರಾ.ಪಂ. ವ್ಯಾಪ್ತಿಯಲ್ಲಿ ಮತಪ್ರಚಾರ

Suddi Udaya

ರಸ್ತೆ ದುರಸ್ಥಿಗೆ ಆಗ್ರಹಿಸಿ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಣಾಧಿಕರಿಗೆ ಮನವಿ ಸಲ್ಲಿಸಿದ ಕುವೆಟ್ಟು ಪಂಚಾಯತ್ ಸದಸ್ಯರು

Suddi Udaya
error: Content is protected !!