September 6, 2026
Uncategorized

ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ರಿಲ್ಸ್ ನ್ನು ಬಿಡುಗಡೆಗೊಳಿಸಿದ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕಿಶೋರ್ ಗೌಡ

ಬೆಳ್ತಂಗಡಿ : ಪ್ರಣಿತ್ ರಾಜ್ ಫಿಲಂಸ್ ಬೆಳ್ತಂಗಡಿ ಚಿತ್ರಿಕರಿಸಿರುವ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ರಿಲ್ಸ್ ನ್ನು ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕಿಶೋರ್ ಗೌಡ ರವರು ಬಿಡುಗಡೆಗೊಳಿಸಿ ಮಾತನಾಡುತ್ತಾ ಪ್ರತಿಯೊಬ್ಬ ಚಾಲಕನು ವಾಹನವನ್ನು ಚಲಾಯಿಸುವಾಗ ರಸ್ತೆ ನಿಯಮಗಳನ್ನು ಸರಿಯಾಗಿ ಪಾಲಿಸಿದಲ್ಲಿ ಅಪಘಾತಗಳನ್ನು ತಪ್ಪಿಸಬಹುದು ಮದ್ಯಪಾನ ಮಾಡಿ ವಾಹನ ಚಲಾಯಿಸ ಬಾರದು, ಹೆಲ್ಮೆಟ್ ಧರಿಸಬೇಕು, ಸೀಟ್ ಬೆಲ್ಟ್ ಹಾಕಿ ವಾಹನ ಚಲಾಯಿಸಬೇಕು ಎನ್ನುತ್ತಾ ಪ್ರಣಿತ್ ರಾಜ್ ಫಿಲಂಸ್ ತಂಡದವರು ರಸ್ತೆ ಸುರಕ್ಷತೆ ಬಗ್ಗೆ ಒಂದು ಒಳ್ಳೆಯ ರಿಲ್ಸ್ ಚಿತ್ರೀಕರಣವನ್ನು ಮಾಡಿರುತ್ತಾರೆ ಈ ರೀಲ್ಸ್ ಎಲ್ಲರಿಗೂ ಅರಿವು ಮೂಡಿಸುವಂತಾಗಲಿ, ಮುಂದೆಯೂ ಇವರಿಂದ ಒಳ್ಳೆಯ ರಿಲ್ಸ್ ಗಳು ಕಿರು ಚಿತ್ರಗಳು ಮೂಡಿಬರಲಿ ಎಂದು ಶುಭ ಹಾರೈಸಿದರು.


ಕಲಾವಿದ ಬಿ.ಹೆಚ್ ರಾಜು ರವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಬಿಸಿಲು ಮಳೆ ಲೆಕ್ಕಿಸದೆ ರಾತ್ರಿ ಹಗಲು ಎನ್ನದೆ ಸಮಯವನ್ನು ಲೆಕ್ಕಿಸದೆ ಕರ್ತವ್ಯವನ್ನು ನಿರ್ವಹಿಸುತ್ತಿರುವ ಸಂಚಾರಿ ಪೊಲೀಸರ ಸೇವೆಯನ್ನು ಶ್ಲಾಘೀಸುತ್ತ ರಸ್ತೆ ಅಪಘಾತಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ಜನರಲ್ಲಿ ಅರಿವು ಮೂಡಿಸುವಂತಹ ರೀಲ್ಸ್ ಮಾಡಲಾಗಿದೆ ಇದರಿಂದ ಸಮಾಜಕ್ಕೆ ಉಪಯುಕ್ತವಾಗಲಿ ಎನ್ನುತ್ತಾ ಸಹಕರಿಸಿದ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ರಾದ ಕಿಶೋರ್ ಗೌಡ ಹಾಗೂ ಸಿಬ್ಬಂದಿಗಳು, ಚಲನಚಿತ್ರ ನಿರ್ದೇಶಕರಾದ ಕೃಷ್ಣ ಬೆಳ್ತಂಗಡಿ, ಕಲಾವಿದ ಶಿವಪ್ಪ ಬಿರುವ, ಬೆಳ್ತಂಗಡಿ ಗೌತಮ್ ಬೆಳ್ತಂಗಡಿ ರವರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರಣಿತ್ ರಾಜ್ ಫಿಲಂಸ್ ನ ಮುಖ್ಯಸ್ಥ ಪ್ರಣಿತ್ ರಾಜ್, ಹಾಗೂ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಈ ರೀಲ್ಸನ್ನು ಇನ್‌ಸ್ಟಾಗ್ರಾಮ್ ಪ್ರಣಿತ್ ರಾಜ್ ಫಿಲಂಸ್ ಪೇಜ್ ನಲ್ಲಿ ವೀಕ್ಷಿಸಬಹುದು.

Related posts

ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ಕಸದಿಂದ ರಸ ಶೈಕ್ಷಣಿಕ ಕಾರ್ಯಕ್ರಮ

Suddi Udaya

ಮೇಲಂತಬೆಟ್ಟು: ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ವರ್ಷಾವಧಿ ಜಾತ್ರೆ

Suddi Udaya

ಕನ್ಯಾಡಿ: ಬೈಕ್ – ಬಸ್ಸು ನಡುವೆ ಅಪಘಾತ: ಬೈಕ್ ಸವಾರ ಗಂಭೀರ ಗಾಯ

Suddi Udaya

ನವ ಭಾರತ’ ಸಂಘಟನೆಯ ಆಶ್ರಯದಲ್ಲಿ ಅರಸಿನಮಕ್ಕಿ ಶ್ರೀ ಗೋಪಾಲಕೃಷ್ಣ ಅ. ಹಿ. ಪ್ರಾ. ಶಾಲೆಯಲ್ಲಿ ಮಕ್ಕಳ ಸಂಸ್ಕಾರ ಶಿಬಿರದ ಉದ್ಘಾಟನೆ

Suddi Udaya

ಕಲ್ಮಂಜ: ನಿಡಿಗಲ್ ನಿವಾಸಿ ಗೋಪಾಲ ಮಡಿವಾಳ ಹೃದಯಾಘಾತದಿಂದ ನಿಧನ

Suddi Udaya

ಗರ್ಡಾಡಿ: ಹೊನ್ನೇಕಟ್ಟೆ ನಿವಾಸಿ ಜೋಯ್ ಮೆಂಡಾನ್ಸ ನಿಧನ

Suddi Udaya
error: Content is protected !!