September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಮಸ್ಯೆ

ಲಾಯಿಲದ ಗ್ಯಾಸ್ ಕಚೇರಿಯೊಂದರಲ್ಲಿ ಮ್ಯಾನೇಜರ್ – ಗ್ರಾಹಕರ ನಡುವೆ ಗಲಾಟೆ

ಬೆಳ್ತಂಗಡಿ: ಗ್ಯಾಸ್ ಕಚೇರಿಯಲ್ಲಿ ನಾನ ರೀತಿಯ ಗ್ಯಾಸ್ ಸಮಸ್ಯೆಗಳಿಂದ ಮ್ಯಾನೇಜರ್ ಮತ್ತು ಗ್ರಾಹಕರ ನಡುವೆ ಗಲಾಟೆ ನಡೆದಿದೆ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಆಗಮಿಸುವಂತಾಗಿದೆ.

ಬೆಳ್ತಂಗಡಿ ತಾಲೂಕಿನ ಲಾಯಿಲದಲ್ಲಿರುವ ಶ್ರೀ ಮಂಜು ಇಂಡಿಯನ್ ಗ್ಯಾಸ್ ಕಚೇರಿಯಲ್ಲಿ ಗ್ಯಾಸ್ ನೀಡಲು ಸರಿಯಾದ ವ್ಯವಸ್ಥೆ ಕಲ್ಪಿಸದ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಗಲಾಟೆ ನಡೆಯುತ್ತಿದ್ದು, ಮತ್ತೆ ಏ.13 ರಂದು ಗ್ರಾಹಕರ ಸಂಖ್ಯೆ ಜಾಸ್ತಿಯಾಗಿ ಕಚೇರಿಯ ಸಿಬ್ಬಂದಿಗಳು ಸರಿಯಾಗಿ ವ್ಯವಹಾರ ನಡೆಸದಿದ್ದಾಗ ಗಲಾಟೆ ಜಾಸ್ತಿಯಾಗಿದೆ. ತಡವಾಗಿ ಗ್ಯಾಸ್ ಮ್ಯಾನೇಜರ್ ಶಿವಕುಮಾರ್ ಕಚೇರಿ ಬಂದಾಗ ಕೂಡ ಗಲಾಟೆ ನಡೆಯುತ್ತಿದ್ದಾಗ 112 ಗೆ ಕರೆ ಮಾಡಿ ಗ್ರಾಹಕರು ದೂರು ನೀಡಿದಾಗ ಬೆಳ್ತಂಗಡಿ ಪೊಲೀಸರು ಕೂಡ ಆಗಮಿಸಿ ಜನರನ್ನು ಹೊರಗಡೆ ಕಳುಹಿಸಿ ಗಲಾಟೆ ನಿಲ್ಲಿಸಿದ್ದಾರೆ.

ಕೆಲ ಗ್ರಾಹಕರ ಗ್ಯಾಸ್ ಬುಕ್ ಮಾಡಿದ್ದರೂ ಬೇರೆಯವರು ಅದನ್ನು ಪಡೆದುಕೊಂಡಿರುವ ಆರೋಪ ಕೂಡ ಕೇಳಿಬಂದಿದೆ‌. ಕೆಲವರು ಬುಕ್ ಮಾಡಿದ್ರೂ ಗ್ಯಾಸ್ ನೀಡುವುದಿಲ್ಲ ಎಂದು ಗ್ರಾಹಕರ ಆರೋಪ ಮಾಡುತ್ತಿದ್ದಾರೆ.

Related posts

ಕುಪ್ಪೆಟ್ಟಿ ಸ.ಉ.ಪ್ರಾ.ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ

Suddi Udaya

ಬಳಂಜ: 38 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಚನೆ: ಅಧ್ಯಕ್ಷರಾಗಿ ಗುರುಪ್ರಸಾದ್ ಹೆಗ್ಡೆ,ಪ್ರ.ಕಾರ್ಯದರ್ಶಿಯಾಗಿ ಯಶೋಧರ ಶೆಟ್ಟಿ ಆಯ್ಕೆ

Suddi Udaya

ಕ್ಯಾನ್ಸರ್ ಪೀಡಿತರಿಗೆ ಕೇಶದಾನ ಮಾಡಿ ಮಾನವೀಯತೆ ಮೆರೆದ ಬಾಲಕಿ ಅಕ್ಷರಿ ಶೆಟ್ಟಿ

Suddi Udaya

ಮಚ್ಚಿನ ಸರಕಾರಿ ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

Suddi Udaya

ಮೈಸೂರು ಜಿಲ್ಲಾ ನ್ಯಾಯಾಲಯದ ನೋಟರಿಗಳ ಕಟ್ಟಡಕ್ಕೆ ಶಂಕುಸ್ಥಾಪನೆ

Suddi Udaya

ಕೊಕ್ಕಡ: ಮುಂಡೂರುಪಳಿಕೆ ಯುವಶಕ್ತಿ ಫ್ರೆಂಡ್ಸ್ ವತಿಯಿಂದ ಕೆಸರ್ ದ ಕಂಡೊಡು ಒಂಜಿ‌ದಿನ

Suddi Udaya
error: Content is protected !!